ವೃತ್ತಿ ರಂಗಭೂಮಿ ರಂಗಾಯಣ ಕನಸು ನನಸು

ಇದೇ ತಿಂಗಳ 11ರಂದು ಅಧಿಕೃತ ಉದ್ಘಾಟನೆ

Team Udayavani, Apr 8, 2022, 4:28 PM IST

drama

ದಾವಣಗೆರೆ: ವೃತ್ತಿ ರಂಗಭೂಮಿಯ ತವರೂರು ದಾವಣಗೆರೆಯಲ್ಲಿ ಕೊನೆಗೂ ವೃತ್ತಿ ರಂಗಭೂಮಿ ರಂಗಾಯಣದ ಪ್ರಾರಂಭಕ್ಕೆ ಅಂಕ ಸಜ್ಜಾಗಿದೆ.

ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ವೃತ್ತಿ ರಂಗಭೂಮಿಯ ತವರೂರು ಎಂಬ ಖ್ಯಾತಿ ಹೊಂದಿದೆ. ದಾವಣಗೆರೆಗೆ ಬಂದಂತಹ ನಾಟಕ ಕ್ಯಾಂಪ್‌ ಬರಿಗೈಲಿಯಲ್ಲಿ ಹೋದ ಉದಾಹರಣೆಯೇ ಇಲ್ಲ. ಬೇರೆ ಕಡೆ ನಷ್ಟ ಅನುಭವಿಸಿ ದಾವಣಗೆರೆಗೆ ಬಂದ ಅನೇಕ ಕಂಪನಿಗಳು ನಷ್ಟ ಸರಿದೂಗಿಸಿಕೊಂಡು ಲಾಭ ಗಳಿಸಿದ ಉದಾಹರಣೆಗಳಿವೆ. ಹಾಗಾಗಿಯೇ ವೃತ್ತಿ ರಂಗಭೂಮಿ ಕಂಪನಿ, ಕಲಾವಿದರಿಗೆ ದಾವಣಗೆರೆ ತವರೂರು.

ಈಗಲೂ ದಾವಣಗೆರೆಯಲ್ಲಿ ಕ್ಯಾಂಪ್‌ ಮಾಡಿದ ಕಲಾವಿದರಿಗೆ ಊಟೋಪಚಾರ ಮಾಡುವುದು ಇದೆ. ನಾಟಕ ಕಲಾವಿದರ ಪೋಷಣೆ ಮಾತ್ರವಲ್ಲ ಇಲ್ಲಿನವರೇ ಅನೇಕ ಡ್ರಾಮಾ ಕಂಪನಿ ಕಟ್ಟಿ ನೂರಾರು ಕಲಾವಿದರಿಗೆ ಅವಕಾಶ ಮತ್ತು ಜೀವನ ಅಂಕ ಮುಂದುವರೆಸಲು ನೆರವಾಗುತ್ತಿದ್ದಾರೆ. ವೃತ್ತಿ ರಂಗಭೂಮಿ ಮಾತ್ರವಲ್ಲ, ಪ್ರತಿಮಾ ಸಭಾದಂತಹ ಹವ್ಯಾಸಿ ನಾಟಕ ಕಲಾವಿದರು ಇಲ್ಲಿದ್ದಾರೆ. ಖ್ಯಾತ ರಂಗ ನಿರ್ದೇಶಕ ಬಿ.ವಿ. ಕಾರಂತ್‌ ಸಾರಥ್ಯದಲ್ಲಿ ನಾಟಕ ಕುರಿತಾದ ವಿಚಾರ ಸಂಕಿರಣ, ನಾಟಕ ಪ್ರದರ್ಶನ ನಡೆದಿವೆ. ರಾಜ್‌ಕುಮಾರ್‌ ಅವರೇ ಉದ್ಘಾಟಿಸಿದ ವೃತ್ತಿ ರಂಗಭೂಮಿ ಕಲಾವಿದರ ಸಂಘ ದಾವಣಗೆರೆಯಲ್ಲಿದೆ. ವೃತ್ತಿ ರಂಗಭೂಮಿಯ ಉಸಿರಾಗಿರುವ ದಾವಣಗೆರೆಯಲ್ಲಿ ಮತ್ತೆ ವೃತ್ತಿ ರಂಗಭೂಮಿಯ ಗತವೈಭವ ಮರು ಸ್ಥಾಪನೆಯ ನಿರಂತರ ಪ್ರಯತ್ನ ನಡೆದೇ ಇತ್ತು. ಕೆಲವೊಂದು ಪ್ರಯತ್ನ ಯಶ ಕಾಣಲಿಲ್ಲ.

ಕೊನೆಗೂ 2018ರಲ್ಲಿ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ದಾವಣಗೆರೆ ಸಮೀಪದ ಕೊಂಡಜ್ಜಿಯಲ್ಲಿ ವೃತ್ತಿ ರಂಗಭೂಮಿ ಶಾಲೆ ಪ್ರಾರಂಭದ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದರು. ಆದರೆ ವಿವಿಧ ಕಾರಣದಿಂದ ವೃತ್ತಿ ರಂಗಭೂಮಿ ಶಾಲೆ ಕಾರ್ಯಗತ ವಿಳಂಬ ಆಯಿತು. ಸಿದ್ದರಾಮಯ್ಯ ಸರ್ಕಾರದ ಅವಧಿಯೂ ಮುಗಿಯಿತು. ಹಾಗಾಗಿ ರಂಗಭೂಮಿ ಶಾಲೆ ನಿರೀಕ್ಷಿತ ವೇಗ ಪಡೆಯಲಿಲ್ಲ.

2019ರ ಜು. 19 ರಂದು ಹಿರಿಯ ಕಲಾವಿದ ಗಂಗಾಧರಸ್ವಾಮಿ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಯಿತು. 2020 ರ ಸೆ. 5 ರಂದು ಕಿರುತೆರೆ, ಹಿರಿತೆರೆಯ ಹಿರಿಯ ಕಲಾವಿದ ಯಶವಂತ ಸರದೇಶಪಾಂಡೆ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ಮಹಾಮಾರಿ ಕೊರೊನಾ, ಸರ್ಕಾರದ ಉದಾಸೀನತೆ ಹೀಗೆ ಹಲವು ಕಾರಣದಿಂದ ವೃತ್ತಿ ರಂಗಭೂಮಿ ಶಾಲೆ ಆರಂಭವಾಗಲಿಲ್ಲ. ಕೊನೆಗೂ ರಂಗಭೂಮಿ ಶಾಲೆಯ ಪ್ರಾರಂಭಕ್ಕೆ ಮುಹೂರ್ತ ಕೂಡಿ ಬಂದಿದೆ. ವೃತ್ತಿ ರಂಗಭೂಮಿ ಶಾಲೆಯ ಹೆಸರನ್ನು ವೃತ್ತಿ ರಂಗಭೂಮಿ ರಂಗಾಯಣ ಎಂಬುದಾಗಿ ಬದಲಾಯಿಸಲಾಗಿದೆ. ಏ. 11 ರಂದು ವೃತ್ತಿ ರಂಗಭೂಮಿ ರಂಗಾಯಣ ಉದ್ಘಾಟನೆಗೊಳ್ಳಲಿದೆ.

ವೃತ್ತಿ ರಂಗಭೂಮಿಯ ಇತಿಹಾಸ, ಅಗತ್ಯತೆ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಂಗಾಯಣದಪಾತ್ರ ಪ್ರಮುಖದ್ದಾಗಿದೆ. ನಾಡಿನ ಸಂಸ್ಕೃತಿಯ ಪ್ರತೀಕವಾದ ವೃತ್ತಿ ರಂಗಭೂಮಿಯ ಪುನರುಜ್ಜೀವನಕ್ಕೆ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ವೇದಿಕೆಯಾಗಲಿ ಎಂಬುದು ರಂಗಾಸಕ್ತರ ಆಶಯ.

ಪ್ರಾರಂಭದಲ್ಲಿ ಘೋಷಣೆಯಾಗಿದ್ದ ವೃತ್ತಿ ರಂಗಭೂಮಿ ಶಾಲೆಯ ಹೆಸರನ್ನ ಸರ್ಕಾರ ಈಚೆಗೆ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ಎಂಬುದಾಗಿ ಬದಲಾಯಿಸಿ 10 ಎಕರೆ ಜಾಗ ಮಂಜೂರು ಮಾಡಿದೆ. ಏ. 11ರಂದು ದಾವಣಗೆರೆಯ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ತಾತ್ಕಾಲಿಕವಾಗಿ ಉದ್ಘಾಟನೆಯಾಗಲಿದೆ. ಮುಂದಿನ ದಿನಗಳಲ್ಲಿ 10 ಎಕರೆ ಜಾಗದಲ್ಲಿ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ಪ್ರಾರಂಭಿಸಿ, ವೃತ್ತಿ ರಂಗಭೂಮಿಯ ಗತವೈಭವ ಮರು ಸ್ಥಾಪಿಸುವ ಮಹತ್ತರ ಕಾರ್ಯ ಕೈಗೆತ್ತಿಗೊಳ್ಳಲಾಗುವುದು. – ರವಿಚಂದ್ರ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

-ರಾ. ರವಿಬಾಬು

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.