ಶೌಚಾಲಯ ಕಾಮಗಾರಿ ವಿಳಂಬ: ಪ್ರಯಾಣಿಕರ ಪರದಾಟ
Team Udayavani, Nov 12, 2018, 5:15 PM IST
ಹರಿಹರ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪುರುಷರ ಶೌಚಾಲಯ ದುರಸ್ತಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು,
ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.
200 ಚದುರಡಿ ವಿಸ್ತೀರ್ಣದ ಶೌಚಾಲಯಕ್ಕೆ ಟೈಲ್ಸ್ ಅಳವಡಿಸಲಾಗುತ್ತಿದ್ದು, 2 ದಿನಗಳಲ್ಲಿ ಮುಗಿಸಬಹುದಾದ ಕಾಮಗಾರಿ 10-12 ದಿನಗಳಾದರೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಪ್ರಯಾಣಿಕರ ಕ್ಷೇಮ, ಸುರಕ್ಷತೆಯೇ ತಮ್ಮ ಆದ್ಯತೆ ಎಂದು ಸಾರುವ ಸಾರಿಗೆ ಸಂಸ್ಥೆಗೆ ಮಾತ್ರ ಪ್ರಯಾಣಿಕರ ಗೋಳು ತಿಳಿಯುತ್ತಿಲ್ಲ.
ಅನಿವಾರ್ಯವಾಗಿ ಕೆಲ ಪ್ರಯಾಣಿಕರು ಆವರಣದ ಖಾಲಿ ಜಾಗ, ಕಾಂಪೌಂಡ್ ಆಸರೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಇಡೀ ನಿಲ್ದಾಣವು ಗಬ್ಬೆಂದು ನಾರುತ್ತಿದೆ. ಬಸ್ಗೆ ಕಾಯುವ, ಬಸ್ ನಿಂದ ಇಳಿಯುವ ಪ್ರಯಾಣಿಕರು ಮೂಗು ಮುಚ್ಚಿಕೊಳ್ಳದೆ ವಿಧಿಯಿಲ್ಲದಾಗಿದೆ.
ಕಾಮಗಾರಿ ವಿಳಂಬದ ಬಗ್ಗೆ ಪ್ರಶ್ನಿಸಿದರೆ ಸ್ಥಳೀಯ ಅಕಾರಗಳು ಯಾವುದೇ ಕಾರಣ ನೀಡುತ್ತಿಲ್ಲ. ಶೀಘ್ರ ಕಾಮಗಾರಿ ಮುಗಿಸುವುದಾಗಲಿ, ಅಲ್ಲಿವರೆಗೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆಯಾಗಲಿ ಯಾವುದೇ ಮುತುವರ್ಜಿ ವಹಿಸುತ್ತಿಲ್ಲ. ಡಿಪೋ ವ್ಯವಸ್ಥಾಪಕ ಮರುಳಸಿದ್ದಪ್ಪ, ಇಷ್ಟಕ್ಕೆಲ್ಲಾ ತಾತ್ಕಾಲಿಕ ವ್ಯವಸ್ಥೆ ಮಾಡಲಾಗದು. ಅಗತ್ಯವಿದ್ದವರು ಬಸ್ ನಿಲ್ದಾಣದ ಹೊರಗಿನ ಸಾರ್ವಜನಿಕ ಶೌಚಾಲಯ ಬಳಸಬಹುದು ಎನ್ನುತ್ತಾರೆ.
ಆದರೆ ನಿಲ್ದಾಣದ ಹೊರಗೆ ಶೌಚಾಲಯವಿರುವ ಬಗ್ಗೆ ಪರಸ್ಥಳದ ಪ್ರಯಾಣಿಕರಿಗೆ ಗೊತ್ತಿರುತ್ತಾ? ಕೇಳಿ ತಿಳಿದುಕೊಂಡರೂ ಹೊರಕ್ಕೆ ಹೋಗಿ ಬರುವವರೆಗೂ ಬಸ್ಗಳು ಕಾಯುತ್ತವೆಯಾ? ಎಂಬುದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳೇ ಉತ್ತರಿಸಬೇಕು.
ಈ ಬಸ್ ನಿಲ್ದಾಣಕ್ಕೆ ನಿತ್ಯ 1500 ಬಸ್ ಗಳು ಬಂದು ಹೋಗುತ್ತಿದ್ದು, ಲಕ್ಷಾಂತರ ರೂ. ಆದಾಯ ಬರುತ್ತದೆ. ಆದರೆ ಸದ್ಯ ಸಹಸ್ರಾರು ಜನ ಶೌಚಾಲಯ ಸೌಕರ್ಯವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಶೌಚಾಲಯ ಕಾಮಗಾರಿ ಶೀಘ್ರ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡಲು ಸಂಸ್ಥೆ ಮುಂದಾಗಬೇಕಿದೆ.
ರಾಯಚೂರು ಬಸ್ಗೆ ಅರ್ಧ ಗಂಟೆಯಿಂದ ಕಾಯುತ್ತಿದ್ದೇನೆ. ಆದರೆ ಮೂತ್ರದ ದುರ್ಗಂಧ ಕುಳಿತುಕೊಳ್ಳಲು ಬಿಡುತ್ತಿಲ್ಲ. ಸ್ವತ್ಛತೆ ಬಗ್ಗೆ ಜನ ಸಾಮಾನ್ಯರಿಗೆ ತಿಳಿವಳಿಕೆ ನೀಡುವ ಸರ್ಕಾರಿ ಅಧಿಕಾರಿಗಳು ತಮ್ಮ ಸಂಸ್ಥೆಯಿಂದಲೇ ಇಂತಹ ಲೋಪವಾಗುವುದನ್ನು ಮೊದಲು ತಡೆಯಬೇಕಲ್ಲವೆ?
ವಸಂತಮ್ಮ, ಪ್ರಯಾಣಿಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ