ಯುವಕನ ಕೊಲೆ; ಇಬ್ಬರು ಆರೋಪಿಗಳ ಬಂಧನ
Team Udayavani, Apr 10, 2022, 2:15 PM IST
ಹರಿಹರ: ಕಳೆದ ಮಾ. 16 ರಂದು ನಗರದ ಗಾಂಧಿ ಮೈದಾನದ ವಾಣಿಜ್ಯ ಸಂಕೀರ್ಣದ ಅಂಬೇಮಾ ವೈನ್ಸ್ ಅಂಗಡಿ ಮುಂಭಾಗ ಶವವಾಗಿ ಪತ್ತೆಯಾಗಿದ್ದ ಗಂಗನರಸಿ ಗ್ರಾಮದ ಗಿರೀಶ್ ಎಂಬ ಯುವಕ ಕೊಲೆಗೀಡಾಗಿರುವುದು ಖಚಿತವಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಎ.ಕೆ. ಕಾಲೋನಿ ಒಂದನೇ ಕ್ರಾಸ್ ನ ನಿವಾಸಿಗಳಾದ ಮಂಜ (31) ಮತ್ತು ಶಿವು (22) ಬಂಧಿತ ಆರೋಪಿಗಳು.
ರಕ್ತದ ಮಡುವಿನಲ್ಲಿದ್ದ ಶವದ ತಲೆ ಪಕ್ಕದಲ್ಲಿ ದೊಡ್ಡ ಸೆ„ಜಗಲ್ಲು ಇದ್ದುದರಿಂದ, ತಲೆಯಲ್ಲಿ ಒಂದು ಕಡೆ ಮಾತ್ರ ಗಾಯವಾಗಿದ್ದು, ತಲೆ ಹಾಗೂ ಮುಖ ಜಜ್ಜಿರದ ಕಾರಣ ಯುವಕನೇ ಕಲ್ಲಿಗೆ ಬಿದ್ದು ಗಾಯ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಕೊಲೆ ಪ್ರಕರಣವೆಂದು ಗಿರೀಶ್ ಕುಟುಂಬದವರು ದೂರು ದಾಖಲಿಸಿದ ನಂತರ ಪೊಲೀಸರು ಪ್ರಕರಣದ ಬೆನ್ನು ಹತ್ತಿದ್ದರು. ಆರೋಪಿಗಳು ಅತಿಯಾದ ಮದ್ಯ ಸೇವನೆ ಮಾಡುವವರಾಗಿದ್ದು, ಅಂಗಡಿ, ಮುಂಗಟ್ಟುಗಳ ಮುಂದೆ ಮಲಗಿದವರ ಮೇಲೆ ಹಲ್ಲೆ ನಡೆಸಿ ಮೊಬೈಲ್, ಹಣ ಕಿತ್ತುಕೊಳ್ಳುತ್ತಿದ್ದರು.
ಇತ್ತೀಚಿಗೆ ನಗರದ ತಾಪಂ ಕಚೇರಿ ಎದುರು ಮಲಗಿದ್ದ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಸೇರಿದಂತೆ ಆರೋಪಿಗಳು ಈಗಾಗಲೆ ಇಂಥದ್ದೇ ನಾಲ್ಕು ಪ್ರಕರಣ ಎಸಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ವಿಕೃತ ಮನೋಭಾವದವರಿದ್ದು, ಇಂತಹವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಅಂಗಡಿ, ಮುಂಗಟ್ಟುಗಳ ಮುಂದೆ, ಮನೆ ಕಟ್ಟೆ ಮೇಲೆ ಯಾರೂ ಮಲಗಬಾರದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಡಿವೈಎಸ್ಪಿ ಬಸವರಾಜ್ ಬಿ.ಎಸ್., ಸಿಪಿಐ ಸತೀಶ್ಕುಮಾರ್ ಯು., ಪಿಎಸ್ಐ ಸುನೀಲ್ಕುಮಾರ್ ತೇಲಿ, ಎಎಸ್ಐ ಯಾಸೀನ್ ಉಲ್ಲಾ, ಸಿಬ್ಬಂದಿಗಳಾದ ಸುಣಗಾರ ನಾಗರಾಜ್, ಶಾಂತಕುಮಾರ್, ಸೈಯದ್ ಗಫಾರ್, ರಾಜಶೇಖರ್, ಶಿವರಾಜ್, ನಾಗರಾಜ್, ಸಿದ್ದೇಶ್, ಸಿಸಿಟಿವಿ ಮಂಜುನಾಥ್ ಪ್ರಕರಣ ಪತ್ತೆ ತಂಡದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್