ಆಸ್ತಿ ತನಿಖೆಗೆ ಸಿ.ಎಂ.ಇಬ್ರಾಹಿಂಗೆ ಸವಾಲು ಹಾಕಿದ ವಿ.ಎಸ್. ಉಗ್ರಪ್ಪ
Team Udayavani, Mar 1, 2022, 3:26 PM IST
ದಾವಣಗೆರೆ: ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಈವರೆಗೆ ಗಳಿಸಿರುವ ಆಸ್ತಿಯ ತನಿಖೆಗೆ ಸಿದ್ದವಿದ್ದಾರಾ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಎಸ್. ಉಗ್ರಪ್ಪ ಸವಾಲು ಹಾಕಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವೆಂಕಟಮ್ಮನ ಹಳ್ಳಿಯಿಂದ ಪಾರ್ಲಿಮೆಂಟ್ ವರೆಗೆ ಹಾರಿಕೊಂಡು ಹೋದವನಲ್ಲ. ತೆವಳಿಕೊಂಡು ಹೋದವನು. ನಾನು ನನ್ನ ಆಸ್ತಿಯ ತನಿಖೆಗೆ ಸಿದ್ದ, ಆದರೆ ಇಬ್ರಾಹಿಂ ಸಿದ್ದವೇ ಎಂದು ಪ್ರಶ್ನಿಸಿದರು.
ನಾನು ಅವರ ವಕೀಲನಾಗಿ ಕೆಲವಾರು ಕೇಸ್ ಗೆದ್ದುಕೊಟ್ಟಿರುವೆ. ಅವುಗಳ ಬಗ್ಗೆ ಹೇಳಲಿಕ್ಕೆ ಹೋಗುವುದಿಲ್ಲ. ವಕೀಲರಿಗೆ ಏಕ ವಚನದಲ್ಲಿ ಮಾತನಾಡುವುದು ಸರಿ ಅಲ್ಲ. ಇಬ್ರಾಹಿಂ ಅವರಿಗೆ ಪರಿಷತ್ ಸದಸ್ಯರಾಗಿ ಮಾಡಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಪಕ್ಷಕ್ಕೆ ಬದ್ದವಾಗಿರಬೇಕು. ಅವರೇ ಹೇಳುವಂತೆ ನಾಯಿನಿಷ್ಠೆ ಹೊಂದಿರಬೇಕು ಎಂದು ತಾಕೀತು ಮಾಡಿದರು.
ಇದನ್ನೂ ಓದಿ:ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ್ದು ಕಾಂಗ್ರೆಸ್
ಸಿ.ಎಂ. ಇಬ್ರಾಹಿಂ ನನ್ನ ಬಗ್ಗೆ ಮಾತನಾಡಿದ್ದಕ್ಕೆ ನಾನೂ ಮಾತನಾಡಬೇಕಾಯಿತು. ಇಬ್ರಾಹಿಂ ಯಾಕೆ ನನ್ನ ಹೆಸರು ಪ್ರಸ್ತಾಪ ಮಾಡಿದರೋ ಗೊತ್ತಿಲ್ಲ. ಈಗಲೂ ಅನೇಕರು ಇಬ್ರಾಹಿಂ ಅವರ ಆಸ್ತಿಗಳ ದಾಖಲೆ ತಂದು ಕೊಡುತ್ತಿದ್ದಾರೆ. ನಾನು ಅವುಗಳ ಮುಟ್ಟುತ್ತಿಲ್ಲ. ಮಾತನಾಡಲಿಕ್ಕೂ ಹೋಗುವುದಿಲ್ಲ. ರಾಜಕಾರಣಿಗಳಿಗೂ ನಿಷ್ಠೆ, ಬದ್ಧತೆ ಇರಬೇಕು. ಇಬ್ರಾಹಿಂ ಅವರಂತೆ ಮನ ಬಂದಂತೆ ಮಾಡುವುದು ಸರಿಯಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು
Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ
Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ
MUST WATCH
ಹೊಸ ಸೇರ್ಪಡೆ
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ
Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ