ಜ. 14, 15 ರಂದು ವರ್ಚುವಲ್ ಹರ ಜಾತ್ರೆ: ವಚನಾನಂದ ಶ್ರೀ
Team Udayavani, Dec 7, 2020, 7:04 PM IST
ದಾವಣಗೆರೆ: ಮುಂದಿನ ಜ. 14, 15ರಂದು ಎರಡು ದಿನಗಳ ಕಾಲ ಹರ ಜಾತ್ರೆಯನ್ನು ವರ್ಚುವಲ್ ಆಗಿ ಆಚರಿಸಲಾಗುವುದು ಎಂದು ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದರು.
ಭಾನುವಾರ ಹರಿಹರದ ಪಂಚಮಸಾಲಿ ಪೀಠದಲ್ಲಿ ನಡೆದ ಹರ ಜಾತ್ರೆಯ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಸನ್ಮಾನ, ಗೌರವ ಸಮಾರಂಭ ಇರುವುದಿಲ್ಲ. ಬದಲಾಗಿ ಎರಡು ದಿನಗಳ ಕಾಲ ನಾಡಿನ ಪ್ರಮುಖ ಸಾಹಿತಿ, ಅನುಭಾವಿತರೊಂದಿಗೆ ಆತ್ಮನಿರ್ಭರ ಭಾರತಕ್ಕಾಗಿ ಕೃಷಿ-ಋಷಿ ಸಮಾವೇಶ, ಯುವ ಸಮಾವೇಶ ಮೂಲಕ ಚಿಂತನ-ಮಂಥನ ಹಾಗೂ ಪೀಠಾರೋಹಣದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಹರಿಹರದಲ್ಲಿ ನಡೆಯುವ ಸಮಾವೇಶಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಸರ್ಕಾರದ ನಿಯಾಮಾನುಸಾರ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮಾಡಲಾಗುತ್ತದೆ. ಇತಿಹಾಸ ಕೆದಕುವಬದಲು ಸಮಾಜಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ಮಾಡಬೇಕು. ಜಾತ್ರೆ ಯಶಸ್ಸಿಗೆ ತಮ್ಮ ತನು, ಮನ ಧನ ಸಹಾಯ ಸಹಕಾರ ನೀಡಬೇಕೆಂದರು.
ಧರ್ಮದರ್ಶಿ ಚಂದ್ರಶೇಖರ ಪೂಜಾರ ಮಾತನಾಡಿ, ಕೋವಿಡ್ ದಿಂದಾಗಿದಾಗಿ ವ್ಯಾಪಾರ-ವ್ಯವಹಾರ ಇಲ್ಲದೆ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಹಾಗಾಗಿ ಹರ ಜಾತ್ರೆಯನ್ನು ಸರಳವಾಗಿ ಮಾಡೋಣ. 2ಎ ಮತ್ತು ಓಬಿಸಿ ಸೌಲಭ್ಯ ಗಳ ಬಗ್ಗೆ ಹಕ್ಕೋತ್ತಾಯವನ್ನು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಮಾತನಾಡಿ, ಹರ ಜಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಸಮಾಜ ಇಷ್ಟೊಂದು ದೊಡ್ಡದಾಗಿರುವ ಬಗ್ಗೆ ಗೊತ್ತಾಗಿದ್ದು ಹರ ಜಾತ್ರೆಯಿಂದ. ನಮ್ಮಲ್ಲಿರುವ ವೈಮನಸ್ಯ ಬಿಟ್ಟು ಸಂಘಟಿತರಾಗಿ ಮಾಡೋಣ ಎಂದರು.
ಧರ್ಮದರ್ಶಿಗಳಾದ ಪಿ.ಡಿ. ಶಿರೂರು, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣಬೇವಿನಮರದ, ಸಮಾಜದ ಹಿರಿಯರಾದ ಹೊಳೆಸಿರಿಗೆರೆಯ ನಾಗನಗೌಡರು, ಹರಿಹರ ತಾಲೂಕಿನ ಸಮಾಜದ ಅಧ್ಯಕ್ಷ ಗುಳದಳ್ಳಿ ಶೇಖರಪ್ಪ, ಚಿತ್ರದುರ್ಗದ ನಾಗರಾಜ, ಪರಮೇಶರಪ್ಪ, ಮಂಜುನಾಥ ಸ್ವಾಮಿ, ಮಹೇಶ ಹಾವೇರಿ, ಶಶಿಧರ ಪೂಜಾರ, ಮಲ್ಲಿಕಾರ್ಜುನ ಹಾವೇರಿ, ಸಿ.ಆರ್. ಬಳ್ಳಾರಿ, ಹರಿಹರ ನಗರಸಭಾ ಸದಸ್ಯ ಸಿದ್ಧೇಶ,ಯುವ ಘಟಕದ ಸಂಘಟನಾ ಕಾರ್ಯದರ್ಶಿ ಕರಿಬಸಪ್ಪ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹರ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಬಿ. ಲೋಕೇಶ, ಉಪಾಧ್ಯಕ್ಷರನ್ನಾಗಿ ವಸಂತ ಹುಲ್ಲತ್ತಿ ಅವರನ್ನು ಆಯ್ಕೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
MUST WATCH
ಹೊಸ ಸೇರ್ಪಡೆ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ