ನದಿಗೆ ನೀರು; ಕುಡಿವ ನೀರಿಗಿಲ್ಲ ಆತಂಕ


Team Udayavani, Mar 26, 2019, 3:12 PM IST

dvg-3
ಹರಿಹರ: ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿರುವುದರಿಂದ ಪ್ರಸಕ್ತ ಬೇಸಿಗೆಯಲ್ಲಿ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಯೋಜನೆಗಳಿಗೆ ಆತಂಕ ಸದ್ಯಮಟ್ಟಿಗೆ ದೂರವಾಗಿದೆ. ಮಾ. 19ರಿಂದ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಶುಕ್ರವಾರ ತಾಲೂಕಿನ ಗಡಿ ಪ್ರವೇಶಿರುವ ನೀರು ನದಿ ಮಟ್ಟವನ್ನು ಹೆಚ್ಚಿಸಿದೆ. ನಗರ ವ್ಯಾಪ್ತಿಯಲ್ಲಿ ನದಿ ನೀರಿನ ಹರಿವು ಮುಂಚೆಗಿಂತ ಎರಡೂವರೆ ಅಡಿಯಷ್ಟು ಎತ್ತರಕ್ಕೆ ಹರಿಯುತ್ತಿದೆ.
ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ನಾಲ್ಕು ಹಾಗೂ ನಗರ ಪ್ರದೇಶಕ್ಕೆ ನೀರು ಪೂರೈಸುವ
ಯೋಜನೆಗಳಿಗೆ ನದಿ ನೀರೆ ಆಧಾರವಾಗಿದೆ. ಕೃಷಿಗಾಗಿ ಚಾನಲ್‌ನಲ್ಲಿ ಹರಿಸಿರುವ ಸೀಪೇಜ್‌ ನೀರು ಸಣ್ಣಗೆ ನದಿಗೆ
ಸೇರುತ್ತಿದ್ದದ್ದೆ ಈ ಯೋಜನೆಗಳಿಗೆ ಇಷ್ಟು ದಿನ ನೀರು ಪೂರೈಸಿತು. ಇನ್ನೂ ಕೆಲ ದಿನ ಪರಿಸ್ಥಿತಿ ಹೀಗೆ ಇದ್ದಿದ್ದರೆ ಈ
ಯೋಜನೆಗಳಿಗೆ ನೀರು ಸಿಗುವುದು ಕಷ್ಟವಾಗುತ್ತಿತ್ತು. ಈಗ ನೀರು ಹರಿದಿರುವುದು ಗ್ರಾಮೀಣ ಹಾಗೂ ನಗರ ನೀರು
ಸರಬರಾಜಿನ ಹೊಣೆ ಹೊತ್ತ ಅಧಿ ಕಾರಿಗಳಿಗೆ ಹಾಗೂ ಜನತೆಯಲ್ಲಿ ಸಂತಸ ಮೂಡಿಸಿದೆ.
ಹಿಂದೆಲ್ಲಾ ಬೇಸಿಗೆಯಲ್ಲಿ ಮೈಲಾರ ಲಿಂಗೇಶ್ವರ ಜಾತ್ರೆಗೆ ಕೊನೆಯದಾಗಿ ಜಲಾಶಯದಿಂದ ನೀರು ಬಿಡುತ್ತಿದ್ದು, ನಂತರ
ಮಳೆ ಸುರಿದರೆ ಮಾತ್ರ ನೀರು ಕಾಣುವಂತಿತ್ತು. ಆದರೆ, ಭದ್ರಾ ಜಲಾಶಯದಲ್ಲಿ ನೀರು ಲಭ್ಯವಿರುವುದರಿಂದ ಮುಂದಿನ
ಎರಡು ತಿಂಗಳ ಬೇಸಿಗೆಲ್ಲಿ ನೀರಿನ ಬವಣೆ ಎದುರಿಸುವುದು ತಪ್ಪಿದಂತಾಗಿದೆ. ತಾಲೂಕಿನ ನದಿಗುಂಟ ಪಂಪ್‌ಸೆಟ್‌
ಮೂಲಕ ನೀರು ಹಾಯಿಸಿಕೊಳ್ಳುವ ರೈತರು ನದಿ ನೀರು ಕ್ಷೀಣಿಸಿದಂತೆ ಮೋಟರ್‌ ಪಂಪ್‌ಗ್ಳನ್ನು ಸ್ಥಳಾಂತರಿಸಬೇಕಿತ್ತು.
ದೊಡ್ಡ ಗುಂಡಿಗಳನ್ನು ತೆಗೆದು ವರ್ತಿ ನೀರು ಬರುವಂತೆ ಮಾಡಿ ಪಂಪ್‌ನ ಪುಟ್‌ಬಾಲ್‌ಗೆ ನೀರುಣಿಸಬೇಕಿತ್ತು. ಪ್ರಸಕ್ತ
ಬೇಸಿಗೆಯಲ್ಲಿ ಆ ಸಮಸ್ಯೆ ಇಲ್ಲದಾಗಿದೆ.
ಏ. 5ರವರೆಗೆ ನದಿಗೆ ನೀರು
ಏ. 5ರವರೆಗೆ ನೀರು ಜಲಾಶಯದಿಂದ ಹರಿಯಲಿದೆ. ಕೃಷಿ ಕಾಲುವೆಗಳಿಗೆ ಮೇ ಮೊದಲ ವಾರದವರೆಗೆ ಹರಿಯಲಿದೆ. ಮೇ ತಿಂಗಳಲ್ಲಿ ಒಮ್ಮೆ ಜಲಾಶಯದಿಮದ ನೀರು ಹರಿಸಿದರೆ ಈ ಬೇಸಿಗೆಯಲ್ಲಿ ನೀರಿನ ತೊಂದರೆಯಾಗುವುದು ತಪ್ಪುತ್ತದೆ. ತಾಲೂಕಿನ ಗ್ರಾಮೀಣ ಭಾಗಕ್ಕೆ ನೀರು ಹರಿಸಲು ನಾಲ್ಕು ಯೋಜನೆಗಳಿವೆ.
 ಕೃಷ್ಣಪ್ಪ ಜಾಡರ್‌, ಎಇಇ, ಗ್ರಾಮೀಣ ನೀರು ಸರಬರಾಜು ಇಲಾಖೆ.
ಗ್ರಾಮದೇವತೆ ಉತ್ಸವಕ್ಕೂ ಅನುಕೂಲ
ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕುಡಿಯುವ ನೀರು ಸರಬರಾಜು ಯೋಜನೆಗೆ ಅನುಕೂಲವಾಗಿದೆ. ಕಾಲುವೆಗಳ ಸೀಪೇಜ್‌ ನೀರಿನೊಂದಿಗೆ ಈ ನೀರು ಹರಿದಿರುವುದು ಸದ್ಯಕ್ಕೆ 15 ದಿನಗಳವರೆಗಿನ ತೊಂದರೆ ನಿವಾರಿಸಿದೆ. ಇದು ನಗರದ ಗ್ರಾಮದೇವತೆ ಉತ್ಸವಕ್ಕೂ ಅನುಕೂಲವಾಯಿತು.
 ಎಸ್‌.ಲಕ್ಷ್ಮೀ, ನಗರಸಭೆ ಪೌರಾಯುಕ್ತರು

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ

Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.