ಕಸ ವಿಲೇವಾರಿಗೆ ವಾಟ್ಸ್ಆ್ಯಪ್ ತಂಡ!
Team Udayavani, Feb 12, 2021, 4:21 PM IST
ಸಾಗರ: ಪ್ರವಾಸಿಗರ ಕಾರಣದಿಂದ ಸದಾ ಕಸದಿಂದ ಅಂದ ಕಳೆದುಕೊಳ್ಳುವ ತನ್ನ ಗ್ರಾಮದ ಸಮಸ್ಯೆ ಬಗೆಹರಿಸಲು ಪ್ರತಿ ಭಾನುವಾರ ವಾಟ್ಸ್ ಆ್ಯಪ್ ತಂಡವೊಂದು ಕಸ ವಿಲೇವಾರಿ ನಡೆಸಲು ಮುಂದಾಗಿರುವ ಚಟುವಟಿಕೆ ತಾಲೂಕಿನ ತಾಳಗುಪ್ಪದಲ್ಲಿ ಕಂಡುಬಂದಿದೆ.
ಪ್ರತೀ ಭಾನುವಾರ ಬೆಳಗ್ಗೆ ಎಂಟೂವರೆಯಿಂದ ಹತ್ತೂವರೆವರೆಗೆ ಆಸಕ್ತರು ಪಟ್ಟಣದ ಹೆಚ್ಚು ಕಸವಿದ್ದ ಜಾಗದಲ್ಲಿ ಸೇರುವುದು. ಎರಡು ತಾಸು ಅವ ಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟುಚೊಕ್ಕ ಮಾಡುವುದು. ನಂತರ ಇಷ್ಟು ಕೆಲಸ ಮಾಡಿದ್ದೇವೆ. ಮುಂದಿನ ಜವಾಬ್ದಾರಿ ನಿಮ್ಮದು ಎಂದು ಗ್ರಾಪಂ ಅ ಧಿಕಾರಿಗಳಿಗೆ ಕರೆ ಮಾಡಿ ತಿಳಿಸಿ ಹೊರಡುವುದು. ಮುಂದಿನ ವಾರ ಹೊಸ ಜಾಗ ಎಂದುತೀರ್ಮಾನಿಸಲಾಗಿದೆ ಎಂದು ನಮ್ಮೂರು ತಾಳಗುಪ್ಪ ಎಂಬ ವಾಟ್ಸ್ ಆ್ಯಪ್ ಗ್ರೂಪ್ ಮಾಡಿರುವ ಪ್ರಸನ್ನ ಗೂರ್ಲುಕೆರೆ ತಿಳಿಸುತ್ತಾರೆ.
ಇದನ್ನೂ ಓದಿ:ಅಗೆದಿರುವ ರಸ್ತೆದುರಸ್ತಿಗೊಳಿಸಿ: ಶಾಸಕ ತಿಪ್ಪಾರೆಡ್ಡಿ
ಕಳೆದ ಭಾನುವಾರ ಪ್ರಾಯೋಗಿಕವಾಗಿ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚೊಕ್ಕಟ ಮಾಡುವ ಕೆಲಸಕ್ಕೆ ಲಕ್ಷ್ಮೀನಾರಾಯಣ, ಮಾಜಿ ಸದಸ್ಯೆ ವಿನೋದಾ ಚಿಂತಾಮಣಿ, ಪಶು ವೈದ್ಯರಾಘವೇಂದ್ರ, ರೈತಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮೊದಲಾದವರು ಸ್ವಯಂಪ್ರೇರಿತರಾಗಿ ಬಂದಿದ್ದು ಉತ್ತಮಚಾಲನೆ ದೊರೆತಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದ ಗ್ರಾಮವಾಗಿ, ಜಗತøಸಿದ್ಧ ಜೋಗಕ್ಕ ತೆರಳುವ ಪ್ರವಾಸಿಗರಿಂದ ಸದಾ ಸ್ವತ್ಛತೆಗೆ ಒತ್ತಡ ಅನುಭವಿಸುವ ತಾಳಗುಪ್ಪಕ್ಕೆ ಈ ಚಟುವಟಿಕೆಗೆ ಹೆಚ್ಚಿನ ಜನಬೆಂಬಲ ಸಿಕ್ಕಿದರೆ ಕೆಲ ಮಟ್ಟಿಗೆ ಪರಿಸ್ಥಿತಿ ಸುಧಾರಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ
Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ