ಗೆಲುವಿಗೆ ತೆರೆಮರೆಯ ಕಸರತ್ತು
•ಬಹಿರಂಗ ಪ್ರಚಾರ ಅಂತ್ಯ•ಎದುರಾಳಿ ಅಭ್ಯರ್ಥಿ ಬೆಂಬಲ ಪಡೆಯಲು ಪ್ರಯತ್ನ
Team Udayavani, May 28, 2019, 9:32 AM IST
ಹರಿಹರ ನಗರಸಭೆ
ಹರಿಹರ: ನಿರೀಕ್ಷಿತವೇ ಆದರೂ ಲೋಕಸಭಾ ಚುನಾವಣೆಯ ಗುಂಗಿನಲ್ಲಿದ್ದಾಗ ದಿಢೀರನೆ ಬಂದೆರಗಿದ ನಗರಸಭೆ ಚುನಾವಣೆಯಿಂದಾಗಿ ಪಕ್ಷಗಳ ಬಹುತೇಕ ಮುಖಂಡರು-ಕಾರ್ಯಕರ್ತರು, ಅಭ್ಯರ್ಥಿಗಳು ಸಿದ್ಧತೆ-ಪ್ರಚಾರಕ್ಕೆ ಇನ್ನಷ್ಟು ಕಾಲಾವಕಾಶ ಸಿಗಬೇಕಿತ್ತು ಎನ್ನುತ್ತಲೇ ಲಗುಬಗೆಯಲ್ಲಿ ಕೊನೆಗಳಿಗೆಯ ಪ್ರಚಾರ ನಡೆಸಿದ್ದಾರೆ.
ಬಹಿರಂಗ ಪ್ರಚಾರ ಮುಗಿದಿದ್ದರೂ ತೆರೆಮರೆಯಲ್ಲಿ ಸೋಮವಾರ ಅಭ್ಯರ್ಥಿಗಳು, ಅವರ ಬೆಂಬಲಿಗರು ಮನೆ ಮನೆಗೆ ಭೇಟಿ ನೀಡಿ, ಹಿರಿಯರು, ಮುಖಂಡರಿಗೆ ನಮಸ್ಕರಿಸುತ್ತಾ ಮತದಾರರ ಮನವೊಲಿಕೆಗೆ ಪ್ರಯತ್ನಿಸಿದರು. ಮತದಾನಕ್ಕೆ ಮುನ್ನಾ ದಿನವಾದ ಮಂಗಳವಾರದ ಕತ್ತಲುರಾತ್ರಿ ತಮ್ಮ ಎದುರಾಳಿಗಿಂತ ಹೆಚ್ಚಿನ ಕೊಡುಗೆ ನೀಡಿ ಕಾರ್ಯ ಸಾಧಿಸಲೂ ಕೆಲವರು ಸಜ್ಜಾಗಿದ್ದಾರೆ.
ಆರಂಭದಲ್ಲಿ ಉತ್ಸಾಹದಿಂದ ನಾಮಪತ್ರ ಸಲ್ಲಿಸಿದ ಕೆಲ ಅಭ್ಯರ್ಥಿಗಳಲ್ಲೀಗ ನಿರಾಸೆ ಮೂಡಿದೆ. ಪಕ್ಷ ಕೈ ಹಿಡಿಯುತ್ತೆ, ಚುನಾವಣೆ ಖರ್ಚಿಗೆ ಹಣ ನೀಡುತ್ತೆ ಎಂದುಕೊಂಡದ್ದು ಬಹುತೇಕ ಸುಳ್ಳಾಗಿದೆ. ಟೈಮಿಲ್ಲ… ಟೈಮಿಲ್ಲ…. ಎನ್ನುತ್ತಿರುವ ಪಕ್ಷದ ಮುಖಂಡರೂ ಗೆಲ್ಲುವ ಭರವಸೆಯಿಲ್ಲದ ವಾರ್ಡ್ಗಳಿಗೆ ಕಾಲಿಡಲೂ ಹಿಂದೇಟು ಹಾಕುತ್ತಿದ್ದಾರೆ.
ಒಳ ಒಪ್ಪಂದ: ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಹಲವೆಡೆ ಬಿಜೆಪಿ ಒಳಗಿಂದೊಳಗೆ ಮತ್ತೂಬ್ಬರ ಗೆಲುವಿಗೆ ದಾರಿ ಮಾಡಿಕೊಟ್ಟಿದ್ದರೆ, ಕೆಲವೆಡೆ ಬಹಿರಂಗವಾಗಿಯೇ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದೆ. ಲೋಕಸಭಾ ಫಲಿತಾಂಶದ ನಂತರ ಸಂಸದ ಸಿದ್ದೇಶ್ವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ಬಂಡಾಯ ಕಾಂಗ್ರೆಸ್ಸಿಗ ಶ್ಯಾಮ್ಸನ್ ಮೇಸ್ತ್ರಿ ಪರವಾಗಿ ಮಾಜಿ ಶಾಸಕ ಬಿ.ಪಿ. ಹರೀಶ್ ಬಹಿರಂಗವಾಗಿಯೇ ಪ್ರಚಾರ ಮಾಡುತ್ತಿದ್ದರೆ, ಸುಣಗಾರ ಬೀದಿ ವಾರ್ಡ್ನಲ್ಲಿ ಸ್ವತಂತ್ರ ಅಭ್ಯರ್ಥಿ ಪಾರ್ವತಮ್ಮರನ್ನು ಒಳಗಿಂದೊಳಗೆ ಬೆಂಬಲಿಸಲಾಗುತ್ತಿದೆ.
ಪ್ರಭಾವ, ಒತ್ತಡ ತಂತ್ರ ಬಳಸಿದ್ದರೂ ನಾಮಪತ್ರ ವಾಪಸ್ ಪಡೆಯದ ಕೆಲವು ಪಕ್ಷೇತರರನ್ನು ಕೊನೆಗಳಿಗೆಯಲ್ಲಿ ತಟಸ್ಥಗೊಳಿಸುವಲ್ಲೂ ಕೆಲವರು ಯಶಸ್ವಿಯಾಗಿದ್ದಾರೆ. ಕುಂಬಾರ ಓಣಿಯಲ್ಲಿ ಪಕ್ಷೇತರರಾಗಿದ್ದ ಅನಸೂಯಮ್ಮ ಕೆ.ರಾಜು. ತಾವು ತಟಸ್ಥರಾಗಿದ್ದು, ಜೆಡಿಎಸ್ ಅಭ್ಯರ್ಥಿ ರತ್ನಾ ಡಿ.ಯು. ಅವರನ್ನು ಬೆಂಬಲಿಸುತ್ತಿರುವುದಾಗಿ ಸೋಮವಾರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಹೀಗೆ ವಿವಿಧ ವಾರ್ಡ್ ಗಳಲ್ಲಿ ಹಲವರು ತಮ್ಮ ಶಕ್ತ್ಯಾನುಸಾರ ತಮ್ಮ ಗೆಲುವಿಗೆ ಕಂಟಕವಾಗಬಹುದಾದ ಅಭ್ಯರ್ಥಿಗಳನ್ನು ತಟಸ್ಥಗೊಳಿಸುವ ಪ್ರಯತ್ನವನ್ನು ಇನ್ನೂ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ