ಆವರಗೆರೆ ಹಸಿರಾಗಿಸಿದ ಪರಿಸರ ಯೋಗಿಗಳು!
Team Udayavani, Jun 5, 2021, 9:32 AM IST
ದಾವಣಗೆರೆ: ಪರಿಸರದ ಬಗ್ಗೆ ಕೇವಲ ಕಾಳಜಿ ತೋರ್ಪಡಿಸುವ ಜತೆಗೆ ಪರಿಸರ ಕಾಪಾಡಲು, ಸ್ವಚ್ಛ ಹಾಗೂ ಸುಂದರಗೊಳಿಸಲು ನಾವೂ ಏನಾದರೂ ಕೊಡುಗೆ ನೀಡಬೇಕು ಎಂಬ ಮನಸ್ಸಿದ್ದರೆ ನಮ್ಮ ಸುತ್ತಲಿನ ಪರಿಸರವನ್ನೇ ಹಸೀರಿಕರಣಗೊಳಿಸಿ ಸಂಭ್ರವಿಸಬಹುದು ಎಂಬುದನ್ನು ತಾಲೂಕಿನ ಆವರಗೆರೆಯ ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ ಸಾಬೀತು ಪಡಿಸಿದೆ.
ಆವರಗೆರೆ ಗ್ರಾಮದ ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ ಸದಸ್ಯರು ಕಳೆದ ಎರಡು ವರ್ಷಗಳಿಂದ ಗ್ರಾಮದಲ್ಲಿ ಎರಡು ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ನಿತ್ಯ ಪೋಷಣೆ ಮಾಡುತ್ತಿದ್ದು ಅವು ಈಗ ಗ್ರಾಮದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿವೆ. ಇದರ ಜತೆಗೆ ಪ್ರತಿ ರವಿವಾರ ಶ್ರಮದಾನದ ಮೂಲಕ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮದ ಸೌಂದರ್ಯ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ.
ಹೀಗಾಗಿ ಅವರು ವೇದಿಕೆ ಸದಸ್ಯರು ಕೇವಲ ಪರಿಸರ ಪ್ರೇಮಿಗಳಲ್ಲ; ಪರಿಸರ ಯೋಗಿಗಳಾಗಿದ್ದಾರೆ. ಇವರ ಈ ಕಾರ್ಯದಿಂದ ಇಡೀ ಗ್ರಾಮದಲ್ಲೀಗ ಹಸಿರು ಕಂಗೊಳಿಸುವಂತಾಗಿದೆ.
ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆಯಲ್ಲಿ 35 ಸದಸ್ಯರಿದ್ದು ಪ್ರತಿ ರವಿವಾರ ಬೆಳಗ್ಗೆ 6ರಿಂದ 9 ಗಂಟೆವರೆಗೆ ಶ್ರಮದಾನದ ಮೂಲಕ ಗ್ರಾಮದಲ್ಲಿರುವ ನಾಲ್ಕು ಉದ್ಯಾನಗಳು, ಶಾಲಾ ಆವರಣಗಳು, ದೇವಸ್ಥಾನದ ಆವರಣಗಳು, ಮುಖ್ಯ ರಸ್ತೆ ಸೇರಿದಂತೆ ವಿವಿಧ ಸ್ಥಳಗಳ ಸ್ವತ್ಛತಾ ಕಾರ್ಯ ನೆರವೇರಿಸುತ್ತಾರೆ. ಗ್ರಾಮದಲ್ಲಿದ್ದ ಹಳೆಯ ಹೊಂಡವನ್ನು ಸ್ವತ್ಛಗೊಳಿಸಿ ಅದರ ಅಂದ ಹೆಚ್ಚಿಸಿದ್ದಾರೆ.
ಆವರಗೆರೆ ಗ್ರಾಮದ ಶೇಖರಪ್ಪ ಬಡಾವಣೆ, ಹಳೆ ಊರು, ಎಲ್ಲ ಶಾಲಾ ಆವರಣ, ದೇವಸ್ಥಾನಗಳ ಸುತ್ತಮುತ್ತ, ಉತ್ತಮ್ ಚಂದ್ ಬಡಾವಣೆ ಹಾಗೂ ರಸ್ತೆ ಬದಿ ಸಾವಿರಾರು ಸಸಿಗಳನ್ನು ನೆಟ್ಟು ಪ್ರತಿದಿನಕೊಡದಿಂದ ನೀರುಣಿಸುತ್ತಿದ್ದಾರೆ. ಕನಕದಾಸ ಪಾರ್ಕ್, ವಾಲ್ಮೀಕಿ ಪಾರ್ಕ್ ನಲ್ಲಿನ ಗಿಡ ಮರಗಳನ್ನುಸಂರಕ್ಷಿಸುವ ಕೆಲಸ ಮಾಡಿದ್ದಾರೆ. ಇದರೊಂದಿಗೆ ರಸ್ತೆ ಬದಿ ಫಲಕ, ಪ್ರಮುಖ ಸ್ಥಳಗಳಲ್ಲಿ ಬೆಂಚ್ಗಳನ್ನು ಹಾಕಿಸಿ ಇಡೀ ಊರಿನ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ.
ಮರ ಬೆಳೆಸುವ ಕಾಳಜಿ, ಪರಿಸರ ಪ್ರೀತಿ ಸಾರ್ವಜನಿಕರಲ್ಲಿಯೂ ಬೆಳೆಸುವ ಉದ್ದೇಶದಿಂದರಾಷ್ಟ್ರೀಯ ಕಾರ್ಯಕ್ರಮ, ಹಬ್ಟಾಚರಣೆ ಹಾಗೂ ವಿಶೇಷ ಸಂದರ್ಭದಲ್ಲಿ ಸಸಿ ವಿತರಿಸುವ ಕಾರ್ಯವೂ ನಿರಂತರವಾಗಿ ವೇದಿಕೆವತಿಯಿಂದ ನಡೆಯುತ್ತಿದೆ.
ಪರಿಸರಕ್ಕಾಗಿ ದೇಣಿಗೆ: ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ ಸದಸ್ಯರಿಂದ ಪರಿಸರಚಟುವಟಿಕೆಗಾಗಿ ಪ್ರತಿ ತಿಂಗಳು 200 ರೂ. ದೇಣಿಗೆಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನೂ ತೆರೆಯಲಾಗಿದೆ. ಸ್ವತ್ಛತಾಚಟುವಟಿಕೆಗೆ ಬೇಕಾದ ಗಾರೆ, ಬುಟ್ಟಿಯಂತಹಪರಿಕರ ಖರೀದಿಸಿಟ್ಟುಕೊಳ್ಳಲಾಗಿದೆ. ಇದರೊಂದಿಗೆ ದಾನಿಗಳ ಸಹಾಯದಿಂದ ಗ್ರಾಮದಲ್ಲಿ ಅಲ್ಲಲ್ಲಿಬೆಂಚ್, ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ಸಸಿಗಳಿಗೆ ನೀರುಣಿಸಲಾಗುತ್ತಿದೆ.
ಗ್ರಾಮದ ಹಿರಿಯರಾದ ನಾಯಕನಹಟ್ಟಿ ರುದ್ರಪ್ಪ, ಶಿಕ್ಷಕ ಎಂ. ಗುರುಸಿದ್ದಸ್ವಾಮಿ, ಮಹಾನಗರಪಾಲಿಕೆ ಮಾಜಿ ಸದಸ್ಯ ಎಚ್.ಜಿ. ಉಮೇಶ್, ಮೈಸೂರು ಹನುಮಂತಪ್ಪ, ಕೆ.ಬಾನಪ್ಪ, ತಿಪ್ಪೇಸ್ವಾಮಿ, ಮಂಜುನಾಥ, ಶಿವರುದ್ರಪ್ಪ ಸೇರಿದಂತೆ ಸಂಘಟನೆಯಎಲ್ಲ ಸದಸ್ಯರು ಪರಿಸರ ಸಂರಕ್ಷಣೆ ಕಾಯಕದಲ್ಲಿ ಕೈಜೋಡಿಸಿದ್ದಾರೆ.
ಒಟ್ಟಾರೆ ಆವರಗೆರೆ ಗ್ರಾಮದ ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ ಸದಸ್ಯರ ಪರಿಸರ ಪ್ರೇಮ ಹಾಗೂ ಪರಿಸರ ಪೂರಕ ಚಟುವಟಿಕೆ ಇತರರಿಗೂ ಮಾದರಿಯಾಗಿದೆ.
ಕಳೆದ ಎರಡು ವರ್ಷಗಳಿಂದಆವರಗೆರೆಯಲ್ಲಿ ಶ್ರೀಕಾಯಕಯೋಗಿಬಸವ ಪರಿಸರ ವೇದಿಕೆ ಮಾಡಿಕೊಂಡು ಗ್ರಾಮದವಿವಿಧೆಡೆ ಸಸಿ ನೆಟ್ಟು ಪೋಷಿಸುತ್ತ ಬರಲಾಗುತ್ತಿದೆ.ಜತೆಗೆ ಪ್ರತಿ ರವಿವಾರ ಶ್ರಮದಾನದ ಮೂಲಕಗ್ರಾಮದ ಸ್ವಚ್ಛತಾ ಕಾರ್ಯ ಮಾಡಿ, ಗ್ರಾಮದ ಸೌಂದರ್ಯ ಹೆಚ್ಚಿಸಲಾಗುತ್ತಿದೆ. ವೇದಿಕೆಯಈ ಕಾರ್ಯಕ್ಕೆ ಗ್ರಾಮಸ್ಥರಿಂದ ಸಹಕಾರ,ಪ್ರೋತ್ಸಾಹವೂ ದೊರೆತಿದೆ.- ಎಂ. ಗುರುಸಿದ್ಧಸ್ವಾಮಿ, ಶಿಕ್ಷಕರು, ಸದಸ್ಯರು, ಶ್ರೀಕಾಯಕಯೋಗಿ ಬಸವ ಪರಿಸರ ವೇದಿಕೆ.
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ