ಗಾಜಿನಮನೆಯಲ್ಲಿ ಹಣ್ಣುಗಳ ರಾಜನ ದರ್ಬಾರ್‌!


Team Udayavani, May 18, 2019, 10:29 AM IST

18-May-4

ದಾವಣಗೆರೆ: ಮಾವು ಮೇಳದಲ್ಲಿ ಡಿಸಿ ಜಿ.ಎನ್‌. ಶಿವಮೂರ್ತಿ, ಸಿಇಒ ಬಸವರಾಜೇಂದ್ರ, ಎಸಿ ಕುಮಾರಸ್ವಾಮಿ.

ದಾವಣಗೆರೆ: ಆಮ್ಲೆಟ್, ಮರಿಗೌಡ, ಕಾಲಾಪಾಡ್‌, ಕಲರ್‌ಪಳ್‌, ಆಮ್ರಪಾಲಿ, ಗೋಲಿಲ್ನಾಟಿ, ರತ್ನ, ಇಮಾಮ್‌ ಪಸಂದ್‌, ಎಚ್-13, ನಿರಂಜನ್‌, ಅರ್ಕ ಪುನೀತ್‌, ಸುಂದರ್‌ ಷಾ, ಅರ್ಕನೀಲ ಕಿರಣ್‌, ರಂಗೂನ್‌ ಗೋವಾ, ಲಾಲ್ಖಾತ್ರ, ಚಿರುಕು ರಸಂ, ಪೂಸಾ ಸೂರ್ಯ, ಮಾನ್ಯ-2, ಬನೇಶಾನ್‌, ಬಂದಾರಿಯಾ, ಇಲೈಸಿ, ಐಶ್ವರ್ಯ….

ಅರೇ ಇವೆಲ್ಲಾ ಏನು ಅನ್ನಿಸಬಹುದು. ಇವು ಹಣ್ಣುಗಳ ರಾಜ… ಎಂದೇ ಕರೆಯಲ್ಪಡುವ ಮಾವಿನ ವಿವಿಧ ತಳಿಗಳ ಹೆಸರು!.

ಹ್ಹಾ …ಆಮ್ಲೆಟ್, ಕಲರ್‌ಪಳ್‌, ಮರಿಗೌಡ, ಗೋಲಿಲ್ನಾಟಿ, ಆಮ್ರಪಾಲಿ, ಎಚ್-13, ನಿರಂಜನ್‌, ರತ್ನ, ಮಾನ್ಯ… ಎನ್ನುವಂತಹ ಮಾವಿನ ಹಣ್ಣುಗಳು ಇದಾವಾ ಎಂದು ಆಶ್ಚರ್ಯ ಆಗಬಹುದು. ನಿಜವಾಗಿಯೂ ಇವು ಮಾವಿನ ಹಣ್ಣುಗಳ ವಿವಿಧ ತಳಿಗಳು. ಅಂತಹ ಎಲ್ಲ ಮಾವಿನ ಹಣ್ಣುಗಳನ್ನ ಒಟ್ಟಿಗೆ ನೋಡಬೇಕು ಎನ್ನುವುದಾದರೆ ಗಾಜಿನಮನೆಗೆ ಭೇಟಿ ನೀಡಿದರೆ ಸಾಕು. ಒಂದೇ ಕಡೆ 30ಕ್ಕೂ ಹೆಚ್ಚು ವಿವಿಧ ಮಾವಿನ ಹಣ್ಣುಗಳನ್ನ ನೋಡಬಹುದು, ಮಾತ್ರವಲ್ಲ ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನ ಮನಃಪೂರ್ವಕವಾಗಿ ಸವಿಯಲೂಬಹುದು.

ನೈಸರ್ಗಿಕವಾಗಿ ಮಾಗಿಸಿದ, ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ಒದಗಿಸುವ, ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆ, ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಒಳಗೊಂಡಂತೆ ವಿವಿಧ ಉದ್ದೇಶದೊಂದಿಗೆ ಆಯೋಜಿಸಲಾಗಿರುವ ಮೇಳದಲ್ಲಿ ಸಂತೇಬೆನ್ನೂರು, ಹಾವೇರಿ ಮುಂತಾದ ಕಡೆಯಲ್ಲಿ ಬೆಳೆಯಲಾಗಿರುವ ಹಣ್ಣುಗಳನ್ನ ಗ್ರಾಹಕರು ಯೋಗ್ಯ ಬೆಲೆಗೆ ಕೊಂಡುಕೊಳ್ಳಬಹುದು.

ಅಡಕೆ ಮಾವು… ಎಂಬ ಸಣ್ಣ ಗಾತ್ರದ ಮಾವಿನ ರುಚಿ ಸಖತ್‌ ಟೇಸ್ಟ್‌. ನೋಡಲಿಕ್ಕೆ ಅಡಕೆ ಗಾತ್ರದಂತಿರುವ ಈ ಮಾವಿನ ಹಣ್ಣನ್ನು ನಮ್ಮ ಸಂತೇಬೆನ್ನೂರು ಬಳಿ ಬೆಳೆಯಲಾಗುತ್ತದೆ. ಆದರೆ, ಅಡಕೆ ಮಾವು ಹೆಚ್ಚಾಗಿ ಬೆಳೆಯುವುದಿಲ್ಲ ಎನ್ನುವುದೇ ವಿಶೇಷ. ಹಣ್ಣಿನ ಗಾತ್ರ ಸಣ್ಣದ್ದಾಗಿದ್ದರೂ ರುಚಿ ಬಹಳ ಚೆನ್ನಾಗಿ ಇರುತ್ತದೆ ಎನ್ನುತ್ತಾರೆ ಸಂತೇಬೆನ್ನೂರಿನ ರೋಷನ್‌.

ಕರ್ನಾಟಕದಲ್ಲಿ ಅತಿ ಕಡಿಮೆಯಾಗಿ ಬೆಳೆಯುವ ಕೇಸರ್‌… ಹಣ್ಣು ಬಹಳ ರುಚಿಯಾಗಿರುತ್ತದೆ. ನಮಗಿಂತಲೂ ಮಹಾರಾಷ್ಟ್ರದಲ್ಲಿ ಬಹಳ ಹೆಚ್ಚಾಗಿ ಕೇಸರ್‌… ಮಾವಿನಹಣ್ಣು ಬೆಳೆಯಲಾಗುತ್ತದೆ. ಮೇಳದ ಅಂಗವಾಗಿ ದೂರದ ಮಹಾರಾಷ್ಟ್ರದಿಂದ ತರಿಸಿ, ಮಾರಾಟ ಮಾಡಲಾಗುತ್ತಿದೆ.

ಇತರೆ ಎಲ್ಲಾ ಹಣ್ಣುಗಳಿಗಿಂತಲೂ ಡಿಫರೆಂಟ್ ಟೇಸ್ಟ್‌ನ ಮಲಗೋವಾ, ಸ್ಥಳೀಯ ತಳಿ ಸಿಂಧೂರ, ನಾರು ಹೆಚ್ಚಾಗಿ ಇರದ, ಸಿಪ್ಪೆ ತಿನ್ನುತ್ತಿದ್ದಂತೆ ಸಕ್ಕರೆ ತಿಂದ ಸವಿ ನೀಡುವ ಬೇನಿಶಾನ್‌, ಎಲ್ಲಕ್ಕಿಂತಲೂ ಬಲು ರುಚಿಯ ದಶೆಹರಿ, ಸಾರ್ವಜನಿಕರು, ಮಾವಿನ ಪ್ರಿಯರು ಅತೀ ಹೆಚ್ಚಾಗಿಯೇ ಬಯಸುವ ಬಾದಾಮಿ, ಅತಿ ಹೆಚ್ಚಿನ ಉದ್ದನೆಯ, ಭರಪೂರ ಸಿಹಿಯ ಮಲ್ಲಿಕಾ… ಎಲ್ಲಾ ಬಗೆಯ ಹಣ್ಣುಗಳು ಮೇಳದಲ್ಲಿ ಲಭ್ಯ. ರಾಜ್ಯ ಮಾರುಕಟ್ಟೆ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ತೋಟಗಾರಿಕಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಈ ತಿಂಗಳ 23ರ ವರೆಗೆ ನಡೆಯಲಿದೆ. ಮಾವು ಪ್ರಿಯರು ಎಲ್ಲ ರೀತಿಯ ಹಣ್ಣುಗಳ ಸವಿಯನ್ನು ಸವಿಯಬಹುದು.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.