ದೇವನಗರಿಯಲ್ಲಿ ಸಡಗರದ ಬಲಿಪಾಡ್ಯ
ಮನೆ-ಕಚೇರಿ-ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆಭರ್ಜರಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಜನ
Team Udayavani, Oct 30, 2019, 11:20 AM IST
ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿಯ ಕೊನೆಯ ದಿನ ಬಲಿಪಾಡ್ಯಮಿಯನ್ನು ಸಂಪ್ರದಾಯ, ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ದೀಪಾವಳಿಯ ಪಾಡ್ಯದ ಹಿನ್ನೆಲೆಯಲ್ಲಿ ಮಂಗಳವಾರ ಮನೆ, ಅಂಗಡಿ, ವಾಣಿಜ್ಯ ಸಂಕೀರ್ಣ, ಹೋಟೆಲ್, ಗ್ಯಾರೇಜ್, ಕಚೇರಿಗಳಲ್ಲಿ ಶ್ರದ್ಧಾಭಕ್ತಿ, ಸಂಪ್ರದಾಯಬದ್ಧವಾಗಿ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು.
ಮನೆಗಳ ಮುಂದಿನ ಸುಂದರ ರಂಗೋಲಿ ಹಬ್ಬದ ಸಂಭ್ರಮದ ಪ್ರತೀಕದಂತೆ ಕಂಡು ಬಂದಿತು. ಮನೆಗಳಲ್ಲಿ ಹಿರಿಯರ ಪೂಜೆ, ಹಟ್ಟಿ ಲಕ್ಕಮ್ಮನ ಪೂಜೆಗಳು ನಡೆದವು. ತಮ್ಮ ಕುಟುಂಬದ ಹಿರಿಯರ ಫೋಟೋ ಇಟ್ಟು, ವಿಶೇಷ ಖಾದ್ಯಗಳು, ಅವರು ಇಷ್ಟಪಡುತ್ತಿದ್ದ ತಿಂಡಿ-ತಿನಿಸು ಇತರೆಗಳನ್ನಿಟ್ಟು ಪೂಜೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸುವುದು, ಸ್ಮರಿಸುವುದು ಹಬ್ಬದ ವಿಶೇಷ.
ದೀಪಾವಳಿ ಹಿನ್ನೆಲೆಯಲ್ಲಿ ಮನೆ-ಕಚೇರಿಗಳ ಮುಂದೆ ಬಣ್ಣ ಬಣ್ಣ ಚಿತ್ತಾಕರ್ಷಕ ಆಕಾಶಬುಟ್ಟಿ, ಹಣತೆಗಳ ಲೋಕವೇ ಅನಾವರಣಗೊಂಡಿತ್ತು. ಇನ್ನು ಹಬ್ಬದ ಸ್ಪೆಷಲ್ ಎಂದರೆ ಪಟಾಕಿ. ದೀಪಾವಳಿ ಎಂದರೆ ಪಟಾಕಿ ಹಬ್ಬ ಎಂದೇ ಹೇಳಲಾಗುತ್ತದೆ. ಅದಕ್ಕೆ ಅನ್ವಯವಾಗಿ ಭಾರೀ ಸದ್ದಿನ ಪಟಾಕಿ, ಸರ ಪಟಾಕಿ, ರಾಕೆಟ್, ಬಿರುಸಿನ ಕುಡಿಕೆ, ಸುರ ಸುರ್ ಬತ್ತಿ, ದ್ರಾಕ್ಷಿ ಬಳ್ಳಿ, ಡಬ್ಬಲ್ ಸೌಂಡ್, ತ್ರಿಬ್ಬಲ್ ಸೌಂಡ್, ಹಂಡ್ರೆಡ್, ಥೌಸಂಡ್ ಶಾಟ್ಸ್… ಹೀಗೆ ವಿವಿಧ ನಮೂನೆಯ ಪಟಾಕಿ ಸಿಡಿಸುವ ಮೂಲಕ ಮಕ್ಕಳು, ವಯೋವೃದ್ಧರಾದಿಯಾಗಿ ಸಂಭ್ರಮಿಸಿದರು.
ಹಬ್ಬದ ಕೊನೆಯ ದಿನ ದಾವಣಗೆರೆಯ ಮಾರುಕಟ್ಟೆ ಜನಜಂಗುಳಿಯಿಂದ ತುಂಬಿ ಹೋಗಿತ್ತು. ಹೂವು- ಹಣ್ಣು, ಬಟ್ಟೆ. ದಿನಸಿ, ಪಟಾಕಿ… ಹೀಗೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಕೊಂಡುಕೊಳ್ಳುವಲ್ಲಿ ಜನರು ನಿರತರಾಗಿದ್ದರು.
ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಪಟಾಕಿ ಮಳಿಗೆಗಳಲ್ಲಿ ಭಾರೀ ಜನಸಂದಣಿ ಕಂಡು ಬಂದಿತು. ಸಂಜೆಯಾಗುತ್ತಿದ್ದಂತೆ ಪಟಾಕಿ ಖರೀದಿ ಭರ್ಜರಿಯಾಗಿತ್ತು. ದೀಪಾವಳಿ ಹಬ್ಬದ ಮುಂಚೆ ಸುರಿಯುತ್ತಿದ್ದ ಮಳೆ ಸಹ ಹಬ್ಬಕ್ಕಾಗಿಯೇ ಬಿಡುವು ಮಾಡಿಕೊಟ್ಟಿದ್ದು ಸಂಭ್ರಮ ಹೆಚ್ಚಾಗಲು ಕಾರಣವಾಗಿತ್ತು. ಮೂರು ದಿನಗಳ ಬೆಳಕಿನ ಹಬ್ಬ ದೀಪಾವಳಿಯನ್ನ ದಾವಣಗೆರೆಯ ಜನರು ಸಡಗರ, ಸಂಭ್ರಮದಿಂದ ಆಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ