ಶ್ರೀರಾಮನಿಗೆ ಮುಕ್ತಿ ಸಿಕ್ತು: ಮುತಾಲಿಕ್
30 ಲಕ್ಷ ಜನರ ತ್ಯಾಗ-ಬಲಿದಾನಕ್ಕೆ ಇದೀಗ ದೊರೆತಿದೆ ನ್ಯಾಯಸಿಹಿ ಹಂಚಿ ಸಂಭ್ರಮ
Team Udayavani, Nov 10, 2019, 11:33 AM IST
ದಾವಣಗೆರೆ: ಅಯೋಧ್ಯೆಯ ರಾಮ ಜನ್ಮಭೂಮಿ ಸಂಬಂಧ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ನೀಡಿರುವ ತೀರ್ಪು ಅತ್ಯಂತ ಸ್ವಾಗತಾರ್ಹ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಜನ್ಮಭೂಮಿ ಬಗೆಗಿನ ಹೋರಾಟ 500 ವರ್ಷಗಳದ್ದು. ಸರ್ವೋಚ್ಛ
ನ್ಯಾಯಾಲಯದ ತೀರ್ಪಿನಿಂದ ಈಗ ಶ್ರೀರಾಮನಿಗೆ ಮುಕ್ತಿ ಸಿಕ್ಕಿದೆ. ಕಳೆದ 500 ವರ್ಷಗಳ 76 ಸಂಘರ್ಷಗಳಲ್ಲಿ ಮಡಿದ 30 ಲಕ್ಷ ಜನರ ತ್ಯಾಗ-ಬಲಿದಾನಕ್ಕೆ ಇದೀಗ ನ್ಯಾಯ ದೊರೆತಿದೆ. ತೀರ್ಪಿನ ದಿನ ಭಾರತೀಯರಿಗೆ ಅತ್ಯಂತ ಸಂತಸದ ದಿನವಾಗಿದೆ. ಐತಿಹಾಸಿಕವಾಗಿ ಇದು ಶ್ರೇಷ್ಠ ದಿನ. ಲಕ್ಷಾಂತರ ಜನರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಬಣ್ಣಿಸಿದರು.
ನ್ಯಾಯಾಲಯದ ತೀರ್ಪಿನಿಂದಾಗಿ ಮುಂದಿನ ದಿನಗಳಲ್ಲಿ ಶ್ರೀರಾಮನ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣವಾಗುವುದು ಖಚಿತ ಆಯಿತು. ಮುಸ್ಲಿಮರಿಗೂ ಜಾಗ ನೀಡಲು ನ್ಯಾಯಾಲಯ ಆದೇಶಿಸಿದೆ. ಅದು ಅವರಿಗೆ ಬಿಟ್ಟ ವಿಷಯ. ರಾಮನ ಮೂಲ ಸ್ಥಾನ ದಾಖಲೆ ಮೂಲಕ ಸಿಕ್ಕದ್ದು ನಮ್ಮ ವಿಜಯ ಎಂದು ಹೇಳಿದರು.
ರಾಮ ಮಂದಿರ ನಿರ್ಮಾಣದ ಬಗ್ಗೆ ವಿಶ್ವ ಹಿಂದೂ ಪರಿಷತ್ ನ ರಾಮ ಜನ್ಮಭೂಮಿ ನ್ಯಾಸ್ ಮಂಚ್ ಎಂಬ ಟ್ರಸ್ಟ್ ರಚನೆಯಾಗಿದೆ. ಈಗಾಗಲೇ ಮಂದಿರದ ನಿರ್ಮಾಣಕ್ಕಾಗಿ ಗೋಡೆ, ಮೇಲ್ಛಾವಣಿ, ಕಟ್ಟಡ ಸಿದ್ಧಗೊಂಡಿವೆ. 6 ತಿಂಗಳ ಒಳಗೆ ದೇವಸ್ಥಾನ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರ ಮಂದಿರ ನಿರ್ಮಾಣ ಕಾರ್ಯವನ್ನು ಆ ಟ್ರಸ್ಟ್ಗೆ ವಹಿಸುವುದು ಸೂಕ್ತ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ