ಘನತ್ಯಾಜ್ಯ ವಿಲೇವಾರಿಯದ್ದೇ ಚಿಂತೆ
ಘಟಕದಲ್ಲಿ ನಿರ್ಮಿಸಲಾದ ಕಾವಲುಗಾರ ಕೋಣೆ ಸಿಬ್ಬಂದಿ ನೇಮಕವಿಲ್ಲದೇ ನಿರುಪಯುಕ್ತ
Team Udayavani, Aug 3, 2019, 10:47 AM IST
ದೇವದುರ್ಗ: ಪೊಲೀಸ್ ಠಾಣೆ ಹತ್ತಿರ ಬೆಟ್ಟದಲ್ಲಿ ಹಾಕಲಾಗಿರುವ ಕಸ
ನಾಗರಾಜ ತೇಲ್ಕರ್
ದೇವದುರ್ಗ: ಪಟ್ಟಣದ 23 ವಾರ್ಡ್ಗಳಿಂದ ಸಂಗ್ರಹವಾಗುವ ಒಣ, ಹಸಿ ಕಸ ವಿಲೇವಾರಿಯದ್ದೇ ಚಿಂತೆಯಾಗಿದೆ. ಘಟಕದಲ್ಲಿ ಜಾಲಿಗಿಡ ಬೆಳೆದ ಹಿನ್ನೆಲೆಯಲ್ಲಿ ಅಸ್ವಚ್ಛತೆ ವಾತಾವರಣ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ಘನತ್ಯಾಜ್ಯ ಕಸ ಎಸೆಯುವುದರಿಂದ ರೋಗರುಜಿನಿಗಳ ಭೀತಿ ಕಾಡುತ್ತಿದೆ. ಸಮಸ್ಯೆಗೆ ಪುರಸಭೆ ಅಧಿಕಾರಿಗಳೇ ಕಾರಣ ಎನ್ನಲಾಗುತ್ತಿದೆ.
ಪಟ್ಟಣದ ಹೊರವಲಯದ ಕೊಪ್ಪರ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯೆ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಪುರಸಭೆ ಎಸ್ಎಫ್ಸಿ ಯೋಜನೆ ಅಡಿ 10 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಡ್ ನಿರ್ಮಿಸಿದೆ. ಘಟಕ ಒಳಗೆ ಜಾಲಿಗಿಡಗಳು ಬೆಳೆದು ಅಸ್ವಚ್ಛತೆ ನಿರ್ಮಾಣವಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಚ್ಛತೆಗೆ ಗಮನಹರಿಸಲು ಹಿಂದೇಟು ಹಾಕಿದ ಪರಿಣಾಮ ಇದೀಗ ಕಸ ವಿಲೇವಾರಿ ಸಮಸ್ಯೆಯಾಗಿ ಕಾಡುತ್ತಿದೆ.
ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಕಾವಲುಗಾರ ಕೋಣೆ ನಿರ್ಮಿಸಲಾಗಿದೆ. ಸಿಬ್ಬಂದಿ ನೇಮಕವಿಲ್ಲದೇ ಕಾವಲುಗಾರ ಕೋಣೆ ನಿರುಪಯುಕ್ತವಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಳಸಿದ ಔಷಧಿ ಬಾಟಲ್ ಸೇರಿ ಇತರೆ ವಸ್ತುಗಳನ್ನು ವಾಹನದಲ್ಲಿ ತಂದು ಘಟಕದಲ್ಲಿ ಹಾಕಲಾಗುತ್ತಿದೆ.
ಪಟ್ಟಣದ 23 ವಾರ್ಡ್ಗಳಲ್ಲಿ ಸಂಗ್ರಹವಾಗುವ ಒಣ, ಹಸಿ ಕಸ ವಿಲೇವಾರಿ ಘನತ್ಯಾಜ್ಯ ವಸ್ತು ಘಟಕಕ್ಕೆ ಕಸ ಒಯ್ಯದೇ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಡಾನ್ ಬಾಸ್ಕೋ ವಿದ್ಯಾ ಸಂಸ್ಥೆ ಹತ್ತಿರ, ವೆಂಗಳಾಪುರಕ್ಕೆ ಹೋಗುವ ಮಾರ್ಗದ ಪೊಲೀಸ್ ಠಾಣೆ ಹತ್ತಿರ ಬೆಟ್ಟದಲ್ಲಿ ಕಸ ಎಸೆಯಲಾಗುತ್ತಿದೆ. ಪ್ಲಾಸ್ಟಿಕ್ ಸೇರಿ ಇತರೆ ವಸ್ತುಗಳನ್ನುವಾರಕ್ಕೊಂದು ಬಾರಿ ಬೆಂಕಿ ಹಚ್ಚಿ ಸುಟ್ಟು ಹಾಕಬೇಕು. ಪುರಸಭೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆ ಇದೀಗ ಸಾಂಕ್ರಮಿಕ ರೋಗರುಜಿನಿಗಳ ಭೀತಿಯಲ್ಲಿ ನಿವಾಸಿಗಳು ತತ್ತರಿಸಿದ್ದಾರೆ.
ಒಣ, ಹಸಿ ಕಸ ವಿಲೇವಾರಿ ಮಾಡುವ ಉದ್ದೇಶದಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ಆರು ಟಂಟಂ ವಾಹನಗಳನ್ನು ಖರೀದಿಸಲಾಗಿದೆ. ವಾಹನಕ್ಕೆ ವಿಮೆ ಮಾಡಿಸಲು ಹಣವಿಲ್ಲದೇ ಕಾರಣ ಕಳೆದ ಆರೇಳು ತಿಂಗಳಿಂದ ನೈರ್ಮಲ್ಯ ಕಚೇರಿ ಆವರಣದಲ್ಲಿ ವಾಹನಗಳನ್ನು ನಿಲ್ಲಿಸಲಾಗಿದೆ. ಪಟ್ಟಣದಲ್ಲಿ ದಿನೇ ದಿನೇ ಘನತ್ಯಾಜ್ಯ ಅತಿ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಆದರೆ ವಿಲೇವಾರಿ ಮಾಡಲು ಸಿಬ್ಬಂದಿ ಹೈರಾಣಾಗಿದ್ದಾರೆ.
ಪುರಸಭೆಯಲ್ಲಿ ದಿನಗೂಲಿ ಕೆಲಸ ಮಾಡುವ 45 ಸಿಬ್ಬಂದಿಗೆ ಕಳೆದ 15 ತಿಂಗಳಿಂದ ವೇತನ ಪಾವತಿ ಮಾಡಿಲ್ಲ. ಇದರಿಂದ ಕುಟುಂಬ ನಿರ್ವಹಣೆ ತೀರ ಸಂಕಷ್ಟವಾಗಿದೆ. ಇಂದೋ ನಾಳೆ ಪಾವತಿಸುವುದಾಗಿ ಅಧಿಕಾರಿಗಳ ಹುಸಿ ಭರವಸೆ ಸಿಬ್ಬಂದಿ ಪರದಾಡುವಂತಾಗಿದೆ. ಹಲವು ಬಾರಿ ಹೋರಾಟ ಮಾಡಿದರೂ ಸಿಬ್ಬಂದಿ ಸಮಸ್ಯೆ ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ಅಳಲು ತೊಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!