ಭಾರತದ ಶಿಕ್ಷಣಕ್ಕೆ ಜಗತ್ತಿನಲ್ಲಿ 3ನೇ ಸ್ಥಾನ
Team Udayavani, Mar 12, 2019, 7:31 AM IST
ಧಾರವಾಡ: ಭಾರತದ ಶಿಕ್ಷಣ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದ್ದು, ಮೊದಲನೇ ಸ್ಥಾನ ಚೀನಾ ಹಾಗೂ ಎರಡನೇ ಸ್ಥಾನದಲ್ಲಿ ಅಮೆರಿಕ ಇದೆ ಎಂದು ಕೃಷಿ ವಿವಿ ಕುಲಪತಿ ಡಾ|ಎಂ.ಬಿ. ಚಟ್ಟಿ ಹೇಳಿದರು.
ನಗರದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಪದವಿ ವಿದ್ಯಾಲಯ ಹಾಗೂ ಪಿ.ಜಿ. ಸೆಂಟರ್ ಹಮ್ಮಿಕೊಂಡಿದ್ದ “ಉನ್ನತ ಶಿಕ್ಷಣದಲ್ಲಿ ಕೌಶಲ ಅಭಿವೃದ್ಧಿ: ವಿದ್ಯಮಾನಗಳು ಮತ್ತು ಸವಾಲುಗಳು’ ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಬಹಳ ವಿಭಿನ್ನವಾದ ಶಿಕ್ಷಣ ಪದ್ಧತಿ ನಮ್ಮಲ್ಲಿದೆ. 2017ರ ಅಂಕಿ-ಅಂಶದ ಪ್ರಕಾರ ಪದವಿ ಪಡೆದ ಶೇ. 30 ವಿದ್ಯಾರ್ಥಿಗಳು ಮಾತ್ರ ನೌಕರಿ ಪಡೆಯಲು ಅರ್ಹರು. ಇದಕ್ಕೆ ಕಾರಣ ಕೌಶಲದ ಕೊರತೆ. ನಾವು ಶಿಕ್ಷಣ ಕ್ಷೇತ್ರವನ್ನು ಭಾಗಗಳನ್ನಾಗಿ ಮಾಡಿ ಕಲಿಸುತ್ತೇವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಸಂಪ್ರದಾಯ ಇಲ್ಲ. ಕಲಾ ಕ್ಷೇತ್ರದ ಪದವಿ ಪಡೆದ ವಿದ್ಯಾರ್ಥಿ ವಿಜ್ಞಾನ, ಎಂಜಿನಿಯರಿಂಗ್ ಹೀಗೆ ಬೇರೆ ವಿಷಯಗಳಲ್ಲಿ ಸ್ನಾತಕೋತ್ತರ, ಪಿಎಚ್ಡಿ ಪದವಿಯನ್ನು ಮಾಡಿ ತನ್ನ ಅಭಿರುಚಿಗೆ ತಕ್ಕಂತೆ ಕಲಿತು ಯಶಸ್ವಿ ಆಗಬಹುದು ಎಂದರು.
ಧಾರವಾಡದ ಐಐಟಿ ಮುಖ್ಯಸ್ಥ ಪ್ರೊ| ನಾಗೇಶ ಆರ್. ಐಯ್ಯರ ಮಾತನಾಡಿದರು. ಪ್ರಾಂಶುಪಾಲ ಡಾ|ಎಂ.ಎನ್. ಮೀರಾನಾಯಕ ಅಧ್ಯಕ್ಷತೆ ವಹಿಸಿದ್ದರು. ಡಾ| ಎನ್.ವಿ. ಗುದ್ದಣ್ಣವರ, ಡಾ| ಎನ್. ಎಮ್. ಮಕಾನದಾರ, ಡಾ| ಐ.ಎ. ಮುಲ್ಲಾ, ಡಾ| ಎಫ್.ಎಚ್. ನಧಾಪ್, ಪ್ರೊ| ಇಜಾಜ್ ಅಹಮದ್, ಡಾ|ಶಿವಪ್ಪಾ, ಡಾ| ಎಸ್.ವಿ. ಹೆಗಡಾಳ, ಪ್ರೊ|ಎಮ್. ಎಲ್.ಕಿಲ್ಲೇದಾರ, ಡಾ|ಎಮ್.ಏ. ಮುಮ್ಮಿಗಟ್ಟಿ, ಬಿ.ಕೆ.ಹಲಗಿ, ರಾಜೇಂದ್ರ ಕಗ್ಗೂಡಿ, ಶಾದಾಬ ಖಾನಮ್ ಶೇಖ, ಡಾ|ಎಫ್.ಎಮ್. ನಧಾಪ್, ಪ್ರೊ| ಆರ್. ಎಚ್. ದೊಡಮನಿ ಇದ್ದರು. ಬೇಬಿ ಆಯಿಶಾ ಜಾಗಿರದಾರ ನಿರೂಪಿಸಿದರು. ಸಜ್ಜಾದ ಅಹಮ್ಮದ್ ಪರಿಚಯಿಸಿದರು. ರೂಹಿದಾ ನದಾಫ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್