ನಿವೃತ್ತ ನೌಕರರಿಗೆ 5.20ಲಕ್ಷ ರೂ. ವಂಚನೆ
Team Udayavani, May 16, 2021, 10:24 AM IST
ಹುಬ್ಬಳ್ಳಿ: ನಗರದ ಬಾಲಾಜಿನಗರದ ನಿವೃತ್ತ ನೌಕರರೊಬ್ಬರಿಗೆ ವಂಚಕರು ಸಿಮ್ ಕಾರ್ಡ್ ಡಾಕ್ಯೂಮೆಂಟ್ ವೇರಿಫಿಕೇಶನ್ ಮಾಡುತ್ತೇನೆಂದು ನಂಬಿಸಿ, ಮೊಬೈಲ್ನಲ್ಲಿ ಏನಿಡೆಸ್ಕ್ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿಸಿ, ದಂಪತಿ ಖಾತೆಯಿಂದ ಹಂತ ಹಂತವಾಗಿ 5.20ಲಕ್ಷ ರೂ.ಗಳನ್ನು ಅಮೆಜಾನ್ ಆನ್ ಲೈನ್ ಪರ್ಚೇಜ್ ಬಳಸಿಕೊಂಡು ಮೋಸ ಮಾಡಿದ್ದಾರೆ.
ಬಿಕಾಶಚಂದ್ರ ಎಂಬುವರೆ ವಂಚನೆಗೊಂಡಿದ್ದಾರೆ. ಇವರ ಮೊಬೈಲ್ ಅಪರಿಚಿತರು ಕರೆ ಮಾಡಿ, ಸಿಮ್ ಕಾರ್ಡ್ ವೆರಿಫಿಕೇಶನ್ ಪೆಂಡಿಂಗ್ ಇದೆ. ಕಸ್ಟಮರ್ ಕೇರ್ ಸರ್ವಿಸ್ ಸಂಖ್ಯೆಗೆ ಕರೆ ಮಾಡಿ, ಇಲ್ಲವಾದರೆ 24ಗಂಟೆಯೊಳಗೆ ಬ್ಲಾಕ್ ಮಾಡುತ್ತೇವೆಂದು ನಂಬಿಸಿದ್ದಾರೆ.
ನಂತರ ಡಾಕ್ಯುಮೆಂಟ್ ವೆರಿಫಿಕೇಶನ್ ಮಾಡುತ್ತೇವೆಂದು ಹೇಳಿ, ದಂಪತಿಯ ಬ್ಯಾಂಕ್ನ ಖಾತೆಯ ಗೌಪ್ಯಮಾಹಿತಿಯನ್ನು ಏನಿಡೆಸ್ಕ್ ಅಪ್ಲಿಕೇಶನ್ ಮೂಲಕ ಪಡೆದಿದ್ದಾರೆ. ದಂಪತಿಯ ಜಂಟಿ ಖಾತೆಗೆ 5.17ಲಕ್ಷ ರೂ.ವರ್ಗಾಯಿಸಿಕೊಂಡು, ನಂತರ ಅದನ್ನು ಬಿಕಾಶಚಂದ್ರರ ಪತ್ನಿ ಖಾತೆಗೆ ವರ್ಗಾವಣೆ ಮಾಡಿ, ಆ ಖಾತೆಯಿಂದಹಂತ ಹಂತವಾಗಿ 50 ಸಾವಿರ ರೂ.ಗಳಂತೆ ಹತ್ತು ಬಾರಿ ಮತ್ತು 20ಸಾವಿರ ರೂ.ವನ್ನು ಅಮೆಜಾನ್ ಆನ್ಲೈನ್ ಪರ್ಚೇಜ್ ಉಪಯೋಗಿಸಿಕೊಂಡು ವಂಚಿಸಿದ್ದಾರೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಗೌರವಕ್ಕೆ ಧಕ್ಕೆ: ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಲ್ಲಿನ ಕೇಶ್ವಾಪುರ ಮಧುರಾ ಪ್ಲಾಟ್ಸ್ನ ಯುವತಿಯೊಬ್ಬರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ, ಅವರ ಸಂಬಂಧಿಕರು, ಸ್ನೇಹಿತರಿಗೆ ಮತ್ತು ಸಹೋದರನಿಗೆ ಅಶ್ಲೀಲ, ಲೈಂಗಿಕ ಸಂದೇಶ ಕಳುಹಿಸಿದ್ದಲ್ಲದೆ, ಇನ್ನೊಂದು ನಕಲಿ ಖಾತೆ ಸೃಷ್ಟಿಸಿ ಅನಾಮಧೇಯರಿಗೆ ಯುವತಿಯ ಫೋಟೋ, ನಿಂದನೆಯ ಸಂದೇಶಗಳನ್ನು ಕಳುಹಿಸಿ ಗೌರವ, ಘನತೆಗೆ ಧಕ್ಕೆ ತಂದಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯಗೆ ಬಂದ ನಿಡಸೋಸಿ ಶ್ರೀ ಕಾರು ಅಪಘಾತ
ಅವಶ್ಯಕತೆ ಇಲ್ಲದ ಜಾಗೆಯಲ್ಲಿ ಶೌಚಾಲಯ
ಕಿಮ್ಸ್ ಶವಾಗಾರದಿಂದ ಚಂದ್ರಶೇಖರ ಗುರೂಜಿ ಮೃತದೇಹ ರವಾನೆ : ಮುಗಿಲು ಮುಟ್ಟಿದ ಆಕ್ರಂದನ
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ : ಮರಣೋತ್ತರ ಪರೀಕ್ಷೆಯಲ್ಲಿ ಮಹತ್ವದ ಸುಳಿವು
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ಸಿದ್ಧತೆ: ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ
MUST WATCH
ಹೊಸ ಸೇರ್ಪಡೆ
ಬಂಟ್ವಾಳ : ಭಾರಿ ಮಳೆಗೆ ಮನೆಯ ಮೇಲೆ ಕುಸಿದ ಗುಡ್ಡ : ಓರ್ವನ ರಕ್ಷಣೆ, ಮೂವರಿಗಾಗಿ ಶೋಧ
ಮುದ್ದೇಬಿಹಾಳ: ಶಿಕ್ಷಕನ ಮೇಲೆ ವಿದ್ಯಾರ್ಥಿನಿಯ ಪೋಷಕರಿಂದ ಗಂಭೀರ ಹಲ್ಲೆ : ಪ್ರಕರಣ ದಾಖಲು
ಡಾ.ಹೆಗ್ಗಡೆ ನಾಮನಿರ್ದೇಶನ ರಾಜ್ಯಕ್ಕೆ ಸಂದ ಗೌರವ : ಸಚಿವ ವಿ.ಸುನೀಲ್ ಕುಮಾರ್
ದಯಾನಿಧಿ ಉಚ್ಚಾಟನೆ ಖಂಡಿಸಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಂದ ಮೋಂಬತ್ತಿ ಮೆರವಣಿಗೆ
ವೀರೇಂದ್ರ ಹೆಗ್ಗಡೆ, ಇಳಯರಾಜ,ವಿಜಯೇಂದ್ರ ಪ್ರಸಾದ್, ಪಿಟಿ ಉಷಾ, ರಾಜ್ಯಸಭೆಗೆ ನಾಮನಿರ್ದೇಶನ