ಲಾಟರಿ ನೆಪದಲ್ಲಿ 6 ಲಕ್ಷ ರೂ. ಪಂಗನಾಮ
Team Udayavani, Nov 2, 2019, 10:14 AM IST
ಹುಬ್ಬಳ್ಳಿ: ನಗರದ ಓರ್ವರಿಗೆ ಅಪರಿಚಿತನೊಬ್ಬ 25 ಲಕ್ಷ ರೂ. ಲಾಟರಿ ಲಭಿಸಿದೆ ಎಂದು ವಾಟ್ಸ್ಆ್ಯಪ್ ಮೂಲಕ ಕರೆ ಮಾಡಿ ನಂಬಿಸಿ ಜಿಎಸ್ಟಿ, ಇನ್ಸೂರೆನ್ಸ್, ಡಾಕ್ಯುಮೆಂಟೇಶನ್ ಚಾರ್ಜ್, ಇತರೆ ಚಾರ್ಜ್ ಎಂದು ಹೇಳಿ ಬೇರೆ ಬೇರೆ ಖಾತೆಗಳಿಗೆ ಒಟ್ಟು 5,99,500 ರೂ. ಜಮಾ ಮಾಡಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ.
ಕುಲಕರ್ಣಿ ಹಕ್ಕಲದ ಯಶೋಧಾ ಆರ್. ಶಿಂಧೆ ವಂಚನೆಗೊಳಗಾಗಿದ್ದಾರೆ. ಇವರಿಗೆ ಅ. 10ರಂದು ವಾಟ್ಸ್ಆ್ಯಪ್ ಮುಖಾಂತರ ಓರ್ವ ಕರೆ ಮಾಡಿ, ಕೌನ್ ಬನೇಗಾ ಕರೋಡಪತಿ ಮುಂಬಯಿದಿಂದ ಮಾತನಾಡುತ್ತಿರುವುದಾಗಿ ನಂಬಿಸಿ, ನಿಮ್ಮ ಮಗಳು ಪೂಜಾ ಹೆಸರಿನಲ್ಲಿ 25 ಲಕ್ಷ ರೂ. ಲಾಟರಿ ಹತ್ತಿದೆ. ಹೆಚ್ಚಿನ ಮಾಹಿತಿಗಾಗಿ ಇನ್ನೊಂದು ಸಂಖ್ಯೆಯ ಮೊಬೈಲ್ಗೆ ಕರೆ ಮಾಡಿ ಎಂದು ಹೇಳಿದ್ದಾನೆ. ಇವರ ಮಗಳು ವ್ಯಾಟ್ಸ್ಆ್ಯಪ್ ಮೂಲಕ ಕರೆ ಮಾಡಿದಾಗ ಇನ್ನೊಬ್ಬ ಅಪರಿಚಿತನು ಅಕೌಂಟ್ ಆಫೀಸರ್ ಎಂದು ಹೇಳಿ, ಇನ್ಸೂರೆನ್ಸ್ ಕಂಪೆನಿಯ ಪಾಲಸಿ ಬಾಂಡ್, ಬಾಂಡ್ಪೇಪರ್ ಮತ್ತು ಐಡೆಂಟಿಟಿ ಕಾರ್ಡ್, ಆಧಾರ್ ಕಾರ್ಡ್
ಫೋಟೋಗಳನ್ನು ಯಶೋಧಾ ಅವರ ಮೊಬೈಲ್ ವಾಟ್ಸ್ಆ್ಯಪ್ಗೆ ಕಳಿಸಿದ್ದಾರೆ. ನಂತರ ಇಬ್ಬರು ಸೇರಿ ಅ. 11ರಿಂದ ನ. 1ರೊಳಗೆ ವಿವಿಧ ಮೊಬೈಲ್ ಸಂಖ್ಯೆಗಳಿಂದ ಮಾತನಾಡಿ ಜಿಎಸ್ಟಿ, ಇನ್ಸೂರೆನ್ಸ್, ಡಾಕ್ಯುಮೆಂಟೇಶನ್ ಚಾರ್ಜ್, ಇತರೆ ಚಾರ್ಜ್ ಎಂದು ಬೇರೆ ಬೇರೆ ಖಾತೆಗಳಿಗೆ ಒಟ್ಟು 5,99,500 ರೂ. ಜಮಾ ಮಾಡಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್
ರಾಜ್ಯದಲ್ಲಿ ಎನ್ಕೌಂಟರ್ ಕಾನೂನು ಜಾರಿ ಅವಶ್ಯ: ಸಂತೋಷ್ ಲಾಡ್
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ