ಕೃಷಿ ಒತ್ತಡಗಳಿಗೆ ಸುಸ್ಥಿರ ಮಾದರಿ ಪರಿಹಾರ
Team Udayavani, Feb 28, 2021, 3:32 PM IST
ಧಾರವಾಡ: ಕುಸಿಯುತ್ತಿರುವ ಅಂತರ್ಜಲ,ಮಣ್ಣಿನ ಸವಕಳಿ ಹಾಗೂ ಹವಾಮಾನ ವೈಪರಿತ್ಯದಂತಹ ಸವಾಲುಗಳು ಕೃಷಿ ಕ್ಷೇತ್ರವನ್ನೇ ಒತ್ತಡಕ್ಕೆ ನೂಕಿದ್ದು, ಸುಸ್ಥಿರ ಕೃಷಿ ಮಾರ್ಪಾಡುಗಳಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ| ಅಶುತೋಷ ಶರ್ಮಾ ಹೇಳಿದರು.
ಇಲ್ಲಿನ ಕೃಷಿ ವಿವಿಯ 33ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿಆನ್ಲೈನ್ ಮೂಲಕ ಘಟಿಕೋತ್ಸವಭಾಷಣ ಮಾಡಿದ ಅವರು, ಕೃಷಿಯಲ್ಲಿಸಾಕಷ್ಟು ಮಾರ್ಪಾಟುಗಳಾಗಲುಅಂತರ್ಜಲ ಮಟ್ಟ ಕಾಪಾಡುವುದು, ನೀರಾವರಿಯಲ್ಲಿ ಅಧಿಕ ನೀರು ಬಳಕೆ ಕಡಿಮೆ ಮಾಡುವುದು, ಅತ್ಯಧಿಕ ರಸಾಯನಿಕಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಕಡಿವಾಣ ಹಾಕಬೇಕಿದೆ. ಅಲ್ಲದೇ ಜಾಗತಿಕ ತಾಪಮಾನ ಬದಲಾವಣೆ ಹಾಗೂ ಹಸಿರುಮನೆ ಪರಿಣಾಮಗಳಿಂದ ಕೃಷಿಗೆ ತೀವ್ರ ಹಿನ್ನೆಡೆಯುಂಟಾಗುವಸಾಧ್ಯತೆ ಇದ್ದು, ಇದಕ್ಕೆ ಸುಸ್ಥಿರ ಪರಿಹಾರ ಕಂಡುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂದರು.
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಸಾಧಿಸಲು ಹಸಿರು, ನೀಲಿ, ಶ್ವೇತ ಹಾಗೂಹಳದಿ ಕ್ರಾಂತಿಗಳು ಕಾರಣವಾಗಿವೆ. ರೈತನ ಆದಾಯ ದ್ವಿಗುಣಗೊಳಿಸಲುಕೊಯ್ಲೋತ್ತರ ನಿರ್ವಹಣೆಯ ತಂತ್ರಜ್ಞಾನಅಳವಡಿಕೆಗೆ ಹೆಚ್ಚು ಒತ್ತು ನೀಡಬೇಕು.ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ,ಪ್ರಧಾನಮಂತ್ರಿ ಫಸಲ್ ವಿಮಾಯೋಜನೆಗಳ ಲಾಭ ಪಡೆಯಲು ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಪ್ರೊ| ಶರ್ಮಾ ಹೇಳಿದರು.
ರೈತನ ಮಕ್ಕಳಿಗೆ ಶೇ.50 ಮೀಸಲು: ಘಟಿಕೋತ್ಸವದಲ್ಲಿ ಪದವಿಗಳನ್ನು ಪ್ರದಾನ ಮಾಡಿ ಪ್ರತಿಜ್ಞಾವಿಧಿ ಬೋಧಿಸಿದ ಕೃಷಿ ಸಚಿವರು ಹಾಗೂ ವಿವಿ ಸಹಕುಲಾಧಿಪತಿಗಳು ಆಗಿರುವ ಬಿ.ಸಿ. ಪಾಟೀಲ ಮಾತನಾಡಿ, ರಾಜ್ಯದಕೃಷಿ ವಿಶ್ವವಿದ್ಯಾಲಯದಲ್ಲಿ ಓದಲುಬರುವ ರೈತರ ಮಕ್ಕಳಿಗೆ ಮೀಸಲಿರುವ ಶೇ.40 ಸೀಟುಗಳನ್ನು ಶೇ.50ಕ್ಕೆಹೆಚ್ಚಿಸುವ ಕುರಿತು ಮುಖ್ಯಮಂತ್ರಿಗೆಮನವಿ ಮಾಡಿಕೊಳ್ಳಲಾಗಿದೆ. ಇದನ್ನುಮುಖ್ಯಮಂತ್ರಿಗಳು ಬಜೆಟ್ನಲ್ಲಿ ಈಡೇರಿಸುವ ಭರವಸೆ ಇದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ನಡೆಸಿರುವ ರೈತರ ಹೊಲದಲ್ಲಿನ ಮಣ್ಣು ಪರೀಕ್ಷೆ ಮಾಡುವ ಕೃಷಿ ಸಂಜೀವಿನಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಯೋಚನೆ ಇದೆ. ಇನ್ನು ರೈತರಿಗೆ ಸ್ವಾಭಿಮಾನಿ ಗುರುತಿನ ಚೀಟಿಯನ್ನು ಕೂಡವಿತರಿಸುವ ಯೋಜನೆಯನ್ನು ರಾಜ್ಯವ್ಯಾಪಿವಿಸ್ತರಿಸಲಾಗುವುದು ಎಂದು ತಿಳಿಸಿದರು.
ಕೃಷಿಯಲ್ಲಿ ನವೋದ್ಯಮಕ್ಕೆ ಒತ್ತು ನೀಡಲಾಗುತ್ತಿದ್ದು, ಮಹಿಳಾ ಉದ್ದಿಮೆದಾರರ ಪ್ರಮಾಣ ಶೇ.14 ಹಾಗೂ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ.25 ಮಾತ್ರ ಇದೆ. ಆಹಾರ ಸಂಸ್ಕರಣೆಕೇವಲ ಶೇ.2ರಷ್ಟಿದೆ. ಕೃಷಿ ಉತ್ಪನ್ನಗಳಮೌಲ್ಯವರ್ಧನೆಗೆ ಒತ್ತು ನೀಡದ ಹೊರತುಕೃಷಿ ಅಭಿವೃದ್ಧಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳುಸಾವಿರಾರು ಕೋಟಿ ರೂ. ಅನುದಾನವನ್ನುರೈತರಿಗೆ ನೀಡುತ್ತಿದ್ದು, ರೈತರಲ್ಲೂ ಹೊಸ ಕೃಷಿ ಮಾದರಿ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಚಿವ ಪಾಟೀಲ ಹೇಳಿದರು.
ಕುಲಪತಿ ಡಾ| ಮಹದೇವ ಬ. ಚೆಟ್ಟಿ ವಿಶ್ವವಿದ್ಯಾಲಯದ ಸಂಕ್ಷಿಪ್ತ ವಾರ್ಷಿಕ ವರದಿ ನೀಡಿದರು. ರಮೇಶ ದೇಸಾಯಿ ಸೇರಿದಂತೆ ವಿವಿಧ ನಿಕಾಯಗಳ ಡೀನ್ಗರು, ವಿದ್ಯಾ ವಿಷಯಕ ಪರಿಷತ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ರಾಜ್ಯದ ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿ ಕೃಷಿಕರನ್ನು ಕೃಷಿ ಉದ್ಯಮಿಗಳನ್ನಾಗಿ ಪರಿವರ್ತಿಸಲು ಸಮಗ್ರ ಕೃಷಿ ನೀತಿ ರೂಪಿಸಲು ಸಮಿತಿ ರಚಿಸಲಾಗಿದೆ. 60 ಸಾವಿರನವೋದ್ಯಮಗಳಲ್ಲಿ 500 ಕೃಷಿ ನವೋದ್ಯಮಗಳಿದ್ದು, ಇವುಗಳ ಪ್ರೇರೇಪಿಸಿ, ಕೃಷಿ ನವೋದ್ಯಮ ನೀತಿ ಜಾರಿಗೆ ತರಲಾಗುವುದು. – ಬಿ.ಸಿ. ಪಾಟೀಲ, ಕೃಷಿ ಸಚಿವ
ಕೃಷಿಗೆ ನೀರಿನ ಲಭ್ಯತೆ ಮುಂದಿನ ದಿನಗಳಲ್ಲಿ ತೀವ್ರವಾಗಿ ಕುಸಿತ ಕಾಣಲಿದ್ದು, ಶೇ.83ರಿಂದ 70ಕ್ಕೆ ಇಳಿಯಲಿದೆ. ಕೃಷಿ ವಿದ್ಯುತ್ ಬಳಕೆ ಕಡಿಮೆ ಮಾಡಬೇಕಾಗಿದೆ. ಪಂಜಾಬ, ಹರಿಯಾಣದಲ್ಲಿ ಬೆಳೆಯ ನಂತರ ಉಳಿವ ಮೇವು ಮತ್ತು ಹೊಟ್ಟನ್ನು ಸುಟ್ಟು ಹಾಕುವ ಬದಲು ಅದನ್ನು ಶಕ್ತಿಯಾಗಿ ಕೃಷಿಗೆ ಬಳಸಿಕೊಳ್ಳಬೇಕಿದೆ. – ಪ್ರೊ| ಅಶುತೋಷ ಶರ್ಮಾ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್
ರಾಜ್ಯದಲ್ಲಿ ಎನ್ಕೌಂಟರ್ ಕಾನೂನು ಜಾರಿ ಅವಶ್ಯ: ಸಂತೋಷ್ ಲಾಡ್
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ