ಕೈಗಾರಿಕಾ ವಲಯ ವೇಗೋತ್ಕರ್ಷಕ್ಕೆ ಮಹತ್ವದ ಹೆಜ್ಜೆ


Team Udayavani, Aug 23, 2019, 10:14 AM IST

huballi-tdy-3

ಹುಬ್ಬಳ್ಳಿ: ಹೇಳಿಕೊಳ್ಳುವುದಕ್ಕೆ ವಾಣಿಜ್ಯ ನಗರಿ. ಆದರೆ ನೋಡುವುದಕ್ಕೂ ಒಂದು ದೊಡ್ಡ ಉದ್ಯಮವಿಲ್ಲ. ಉದ್ಯಮ ಆಕರ್ಷಣೆಗೆ ಪೂರಕ ವಾತಾವರಣ ಅದೆಷ್ಟೋ ಮೈಲುಗಳ ದೂರದಲ್ಲಿದೆ. ಇದ್ದ ಕೈಗಾರಿಕಾ ಪ್ರದೇಶಗಳು ಕೊಳಗೇರಿಗಳಿಗೂ ಸವಾಲೊಡ್ಡುವ ಸ್ಥಿತಿಯಲ್ಲಿವೆ. ಇರುವ ಕೆಲ ಉದ್ಯಮಿಗಳು ಬೇರೆ ಕಡೆ ಅವಕಾಶ ಸಿಕ್ಕರೆ ಹೋಗುವುದೇ ಸೂಕ್ತ ಎನ್ನುವ ಮನೋಸ್ಥಿತಿಯಲ್ಲಿದ್ದಾರೆ…

-ಇದು ಹು.ಧಾ. ಕೈಗಾರಿಕಾ ವಲಯ ಚಿತ್ರಣ. ಕೈಗಾರಿಕಾ ವಲಯ ನೆಗೆತ, ಉದ್ಯಮಿಗಳಿಗೆ ಉತ್ತೇಜನ, ಹೊರಗಿನ ಉದ್ಯಮಿಗಳ ಆಕರ್ಷಣೆ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇರಿಸುವ ಯತ್ನವೊಂದು ರೂಪುಗೊಂಡಿದೆ. ಸಾರ್ವಜನಿಕರು, ಉದ್ಯಮಿಗಳ ಪಾಲ್ಗೊಳ್ಳುವಿಕೆ ಜತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳ ನೆರವು-ಪ್ರೋತ್ಸಾಹದಿಂದ ಹುಬ್ಬಳ್ಳಿ-ಧಾರವಾಡವನ್ನು ಉದ್ಯಮಸ್ನೇಹಿಯಾಗಿಸುವ ಮಹತ್ವದ ಕಾರ್ಯಕ್ಕೆ ಅನೇಕ ಸಮಾನ ಮನಸ್ಸುಗಳು ಒಗ್ಗೂಡಿವೆ. ತಮ್ಮದೇ ಚಿಂತನೆ, ಅನುಭವಗಳೊಂದಿಗೆ ಸರಕಾರಗಳ ಮೇಲೆ ಪ್ರಭಾವ ಬೀರುವ, ಉದ್ಯಮಕ್ಕೆ ಚೇತರಿಕೆಯ ಸಾರ್ಥಕ ಹೆಜ್ಜೆ ಇರಿಸಲು ಮುಂದಾಗಿವೆ.

ಹು-ಧಾ ಅಭಿವೃದ್ಧಿ ವೇದಿಕೆ: ಹು-ಧಾದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣಕ್ಕೆ ‘ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ವೇದಿಕೆ'(ಎಚ್‌ಡಿಡಿಎಫ್) ಅಸ್ತಿತ್ವಕ್ಕೆ ಬಂದಿದೆ. ವಿಆರ್‌ಎಲ್ ಸಮೂಹ ಸಂಸ್ಥೆ ಚೇರ್ಮನ್‌ ಡಾ| ವಿಜಯ ಸಂಕೇಶ್ವರ ಅವರು ವೇದಿಕೆ ಚೇರ್ಮನ್‌ರಾಗಿದ್ದು, ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಶ ಶೆಟ್ಟರ ಉಪ ಚೇರ್ಮನ್‌ರಾಗಿದ್ದಾರೆ. ಅನೇಕ ಉದ್ಯಮಿಗಳು ಪದಾಧಿಕಾರಿಗಳಾಗಿದ್ದಾರೆ.

ಉದ್ಯಮಸ್ನೇಹಿ ವಾತಾವರಣ ನಿರ್ಮಾಣ ನಿಟ್ಟಿನಲ್ಲಿ ಸಾರ್ವಜನಿಕರ ಇನ್ನಿತರರ ಅಭಿಪ್ರಾಯ ಸಂಗ್ರಹ, ಉದ್ಯಮ ವಾತಾವರಣ ಬಲವರ್ಧನೆಗೆ ವಿವಿಧ ಸಲಹೆ-ಶಿಫಾರಸು, ಉದ್ಯಮ ಬೆಳವಣಿಗೆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು, ಚರ್ಚೆ, ಸಂವಾದ, ಗೋಷ್ಠಿಗಳ ಆಯೋಜನೆ ಇನ್ನಿತರ ಕಾರ್ಯಗಳೊಂದಿಗೆ ವೇದಿಕೆ ಹು-ಧಾ, ಉತ್ತರ ಕರ್ನಾಟಕದಲ್ಲಿ ಉದ್ಯಮ ವೇಗೋತ್ಕರ್ಷಕ್ಕೆ ಮಹತ್ವದ ಕೊಡುಗೆ ನೀಡಲು ಮುಂದಾಗಿದೆ.

ಅವಳಿ ನಗರದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ, ಬೃಹತ್‌ ಕೈಗಾರಿಕೆಗಳ ಆಕರ್ಷಣೆಗೆ ವೇದಿಕೆ ಒದಗಿಸಲು ಮುಂದಾಗಿದೆ. ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಉದ್ಯಮ ಬೆಳವಣಿಗೆ ಕಾಣಬೇಕು, ಸ್ಥಳೀಯ ಉದ್ಯಮಿಗಳು ಇನ್ನಷ್ಟು ಸಾಧನೆ ಮಾಡುವಂತಾಗಬೇಕೆಂಬುದು ವೇದಿಕೆ ಮಹದಾಸೆ.

ಗಂಭೀರ ಚಿಂತನೆ ಅಗತ್ಯ: ಹು-ಧಾ ಕೈಗಾರಿಕಾ ಬೆಳವಣಿಗೆ ದರ ಋಣಾತ್ಮಕ ಸ್ಥಿತಿಯಲ್ಲಿದೆ. ಅವಳಿ ನಗರದ ರಸ್ತೆಗಳು ಮಳೆ ಬಂದರೆ ಕೆಸರುಗದ್ದೆ, ಮಳೆ ನಿಂತರೆ ಧೂಳುಮಯ ಸ್ಥಿತಿ. ಸ್ವಚ್ಛತೆ ಕೊರತೆ, ನೀರಿನ ಸಮಸ್ಯೆ ಒಂದು ಕಡೆಯಾದರೆ, ಇಲ್ಲಿನ ತಾರಿಹಾಳ, ಗೋಕುಲ, ಗಾಮನಗಟ್ಟಿ, ಲಕಮನಹಳ್ಳಿ ಇನ್ನಿತರ ಕೈಗಾರಿಕಾ ಪ್ರದೇಶಗಳು ಕೊಳಗೇರಿಗಳಿಗೂ ಸವಾಲೊಡ್ಡುವ ಸ್ಥಿತಿಯಲ್ಲಿವೆ. ಹೊರಗಿನ ಹೂಡಿಕೆದಾರರು ಯಾರಾದರೂ ಇಲ್ಲಿ ಉದ್ಯಮ ಆರಂಭಕ್ಕೆ ಮುಂದಾದರೆ, ಅವಳಿ ನಗರ ಅವಸ್ಥೆ, ಕೈಗಾರಿಕಾ ವಲಯಗಳ ದುಸ್ಥಿತಿ ಕಂಡು ಹೂಡಿಕೆ ನಿರ್ಧಾರ ಕೈಬಿಡುವ ಸಾಧ್ಯತೆ ಇಲ್ಲದಿಲ್ಲ. ಇಂತಹ ಸ್ಥಿತಿಯಲ್ಲಿ ಹೂಡಿಕೆದಾರರ ಆಕರ್ಷಣೆ ಹೇಗೆ ಸಾಧ್ಯ ಎಂಬ ಗಂಭೀರ ಚಿಂತನೆ ನಡೆಯಬೇಕಾಗಿದೆ.

ದೊಡ್ಡ ಕೈಗಾರಿಕೆಗಳ ಆರಂಭಕ್ಕೆ ಭೂ ಬ್ಯಾಂಕ್‌ ಸೌಲಭ್ಯದ ಅವಶ್ಯಕತೆ ಇದೆ. ಇನ್ನೊಂದು ಕಡೆ ಐಟಿ ಉದ್ಯಮಕ್ಕೆ ನಿಗದಿ ಪಡಿಸಿದ ಭೂಮಿ ಇದ್ದರೂ ಇಂದಿಗೂ ಸಮರ್ಪಕ ರೀತಿಯಲ್ಲಿ ಹಂಚಿಕೆಯಾಗಿಲ್ಲ. ಕೈಗಾರಿಕಾ ವಲಯಗಳಲ್ಲಿ ಕನಿಷ್ಠ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಇಲ್ಲವಾಗಿದೆ.

ಎಚ್‌ಡಿಡಿಎಫ್‌ಗೆ ಲೋಪ-ಕೊರತೆ ಮೀರಿ ಸಾಗುವ ಸವಾಲು:

ಅವಳಿ ನಗರ ಸುಧಾರಣೆ ನಿಟ್ಟಿನಲ್ಲಿ ಈ ಹಿಂದೆ ಪಾಲಿಕೆಯಿಂದ ಸಿಟಿಜನ್‌ ಫೋರಂ ರೂಪಿಸಲಾಗಿತ್ತು. ಅನೇಕ ತಜ್ಞರು, ಅನುಭವಿಗಳು, ಚಿಂತಕರಿಂದ ನಾಗರಿಕ ಸನ್ನದು ರೂಪುಗೊಂಡಿತ್ತು. ಸ್ಥಳೀಯ ಆಡಳಿತ, ಸ್ವಚ್ಛತೆಯಲ್ಲಿ ಸಾರ್ವಜನಿಕರ ಪಾಲುದಾರಿಕೆ ಮಹತ್ವದ ಮನವರಿಕೆ ಯತ್ನಗಳು ನಡೆದಿದ್ದವು. ದಿನಗಳೆದಂತೆ ಅದು ತೆರೆಗೆ ಸರಿದಿತ್ತು. ವಾರ್ಡ್‌ ಸಭೆಗಳು ಅರ್ಥ ಕಳೆದುಕೊಂಡಿವೆ, ಉದ್ಯಮಿಗಳ ಬಗೆಗಿನ ಸಾರ್ವಜನಿಕರ ಭಾವನೆಗಳು ಬದಲಾಗಬೇಕಾಗಿದೆ. ಅವಳಿ ನಗರದ ಎಲ್ಲ ಕೊರತೆ, ಲೋಪಗಳನ್ನು ಮೆಟ್ಟಿ ನಿಂತು ಉದ್ಯಮ ಬೆಳವಣಿಗೆಯ ನಗೆ ಬೀರಬೇಕಾಗಿದೆ. ಅಂತಹ ಯತ್ನದತ್ತ ವೇದಿಕೆ ಸಾಗುವಂತಾಗಬೇಕಾಗಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಹು-ಧಾ ಅಭಿವೃದ್ಧಿ ವೇದಿಕೆ ತಾನು ರಾಜಕೀಯೇತರ ಸಂಸ್ಥೆ ಎಂಬುದನ್ನು ಮನದಟ್ಟು ಮಾಡಬೇಕಾಗುತ್ತದೆ.

ಟಾಪ್ ನ್ಯೂಸ್

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.