ಕೆಸಿಡಿ ಸ್ಥಾಪಿಸಲು ಅರಟಾಳರ ಶ್ರಮ ದೊಡ್ಡದು: ಗುರುದೇವಿ
Team Udayavani, Aug 11, 2017, 12:31 PM IST
ಧಾರವಾಡ: ಉತ್ತರ ಕರ್ನಾಟಕದ ಭಾಗದಲ್ಲಿ ಕರ್ನಾಟಕ ಕಾಲೇಜು ಸ್ಥಾಪನೆ ಕುರಿತಂತೆ ಬ್ರಿಟಿಷ್ ಅ ಧಿಕಾರಿಗಳಿಗೆ ಕಾಲೇಜು ಸ್ಥಾಪನೆಯ ಬಗ್ಗೆ ಮಹತ್ವ ತಿಳಿಸಿ ಕೊಡುವಲ್ಲಿ ರಾವ್ ಬಹಾದ್ದೂರ ಅರಟಾಳ ರುದ್ರಗೌಡರು ಮಹತ್ವದ ಪಾತ್ರ ವಹಿಸಿದ್ದರು ಎಂದು ಬೆಳಗಾವಿಯ ಲಿಂಗರಾಜು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ| ಗುರುದೇವಿ ಹುಲೆಪ್ಪನವರಮಠ ಅಭಿಪ್ರಾಯಪಟ್ಟರು.
ಕರ್ನಾಟಕ ಕಾಲೇಜಿನ ಫ್ಯಾರೇನ್ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ 100ನೇ ಸಂಸ್ಥಪನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಮಾಲೆಯಲ್ಲಿ ರಾವ್ ಬಹಾದ್ದೂರ ಅರಟಾಳ ರುದ್ರಗೌಡರ ಕುರಿತು ಮಾತನಾಡಿದರು.
ಕರ್ನಾಟಕ ಕಾಲೇಜು ಸ್ಥಾಪನೆಗೆ ಅರಟಾಳ ರುದ್ರಗೌಡರು ಮತ್ತು ಶ್ರೀನಿವಾರಾಯರು ಸೇರಿ 2.64 ಲಕ್ಷ ರೂಪಾಯಿಗಳನ್ನು ಜನರಿಂದ ವಂತಿಗೆಯನ್ನು ಸಂಗ್ರಹಿಸಿ ಕರ್ನಾಟಕ ಕಾಲೇಜು ಸ್ಥಾಪನೆಗೆ ಅವಿರತ ದೃಢ ಸಂಕಲ್ಪದೊಂದಿಗೆ ದುಡಿದ ಮಹಾತ್ಮರು. ಅರಟಾಳ ರುದ್ರಗೌಡರು ಕೇವಲ ಕರ್ನಾಟಕ ಕಾಲೇಜು ಮಾತ್ರವಲ್ಲದೆ ಈಗಿನ ಕೆ.ಎಲ್.ಇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಅವರು ಪ್ರಮುಖ ಕಾರಣೀಭೂತರು ಎಂದರು.
ಅರಟಾಳ ರುದ್ರಗೌಡರ ಜೀವನ ಸರಳತೆಯಿಂದ ಕೂಡಿದ್ದು, ಇವರ ಬರಹಗಳಿಂದ ಮತ್ತು ಲೇಖನಗಳಿಂದ ಇಂದಿಗೂ ನಮ್ಮ ಮಧ್ಯೆ ಬೌದ್ಧಿಕವಾಗಿ ಇದ್ದಾರೆ. ಆದ್ದರಿಂದ ಅವರ ಜೀವನದ ಸಾಧನೆ ಮತ್ತು ಅವರು ಬದುಕಿದ ರೀತಿ ಇಂದಿನ ಸಮಾಜಕ್ಕೆ ಮಾದರಿಯಾಗಿಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪೊ| ಎಂ.ಎನ್. ಜೋಶಿ ಮಾತನಾಡಿ, ಕರ್ನಾಟಕ ಕಾಲೇಜು ಸ್ಥಾಪನೆಗೆ ಕಾರಣರಾದ ತ್ರಿಮೂರ್ತಿಗಳು ನಮ್ಮೆಲ್ಲರಿಗೂ ಮಾದರಿ.
ಆದ್ದರಿಂದ ಅವರ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಏನನ್ನಾದರೂ ಸಾ ಧಿಸಲು ಸಾಧ್ಯ ಎಂದರು. ಪ್ರಾಚಾರ್ಯರಾದ ಡಾ| ರಾಜೇಶ್ವರಿ ಮಹೇಶ್ವರಯ್ಯ, ಡಾ| ಸಿ.ಎಫ್. ಮೂಲಿಮನಿ ಮತ್ತು ಸಾಹಿತಿ ಹರ್ಷ ಡಂಬಳ ಸೇರಿದಂತೆ ಹಲವರು ಇದ್ದರು. ಡಾ| ಎ.ಎಸ್ ಬೆಲ್ಲದ್ ಸ್ವಾಗತಿಸಿದರು. ಡಾ|ಜಿ.ಎಚ್. ಮಳಿಮಠ ನಿರೂಪಿಸಿದರು. ಡಾ| ಎಂ.ಎನ್. ಮ್ಯಾಗೇರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ