ಏಕಾಂಗಿ ಬದುಕಿನ ಕಲಾ ಪ್ರಪಂಚ
Team Udayavani, Jan 8, 2020, 12:27 PM IST
ಹುಬ್ಬಳ್ಳಿ: ಕಸದಿಂದ ರಸ ಮಾಡುವ ಅನೇಕರು ನಮ್ಮ ಮಧ್ಯದಲ್ಲಿದ್ದಾರೆ. ಕಲೆ ಯಾರಿಗಾದರೂ ಒಲಿಯಬಹುದು. ಒಡೆದು ಹೋದ ದೇವರ ಫೋಟೊಗಳು ಕೂಡ ಕಲಾವಿದರ ಕಲಾಕೃತಿಗೆ ಕಾರಣವಾಗುತ್ತವೆ!
ಇಲ್ಲಿನ ಕಿಮ್ಸ್ ಆವರಣದಲ್ಲಿ ಕಳೆದೊಂದು ತಿಂಗಳಿಂದ ಕಲಾವಿದನೊಬ್ಬ ಗಾಜಿನ ಕಲಾಕೃತಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾನೆ. ಕಲಾಕೃತಿ ಇಷ್ಟವಾದರೆ ಖರೀದಿ ಮಾಡಿರಿ ಎಂದು ಹೇಳುತ್ತಾನೆ. ಒಡೆದ ಫೋಟೊಗಳನ್ನು ಸಂಗ್ರಹಿಸಿಕೊಂಡು ಬಂದು ಗಾಜನ್ನು ತೆಗೆದು ಅದನ್ನು ಸ್ವತ್ಛಗೊಳಿಸಿ ಅದನ್ನು ಕೊರೆದು ಹಡಗು,ಮನೆ ಸೇರಿದಂತೆ ವಿವಿಧ ಅಲಂಕಾರಿಕ ಕಲಾಕೃತಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾನೆ.
ಬೆಳಗಾವಿಯ ಕೃಷ್ಣ ಇಟಗಿ ಎಂಬ ಕಲಾವಿದ ಕಿಮ್ಸ್ ಆಸ್ಪತ್ರೆಗೆ ಬರುವ ಜನರಿಗೆ ತನ್ನ ಕಲಾಕೃತಿಗಳನ್ನು ಮಾರಾಟ ಮಾಡುತ್ತಿದ್ದಾನೆ. ಮಡದಿ, ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ಕೃಷ್ಣನದು ಏಕಾಂಗಿ ಬದುಕು. ಕಲಾಕೃತಿಗಳು, ಗಾಜಿನ ತುಂಡುಗಳು, ಬಣ್ಣದ ಕಾಗದಗಳೇ ಅವನ ಆಸ್ತಿ. ಬಯಲೇ ಆಲಯ. ಗಾಜಿನ ತುಂಡುಗಳನ್ನು ಜೋಡಿಸಿ ಕಲಾಕೃತಿ ರಚಿಸುತ್ತಾನೆ. ಕಲಾಕೃತಿಗಳ ಮಾರಾಟವಾದರೆ ಊಟ. ಇಲ್ಲದಿದ್ದರೆ ಕಿಮ್ಸ್ ಹಾಸ್ಟೆಲ್ ವಿದ್ಯಾರ್ಥಿಗಳು ನೀಡುವ ತಂಗಳನ್ನ ತಿಂದು ಜೀವನ ನಡೆಸುತ್ತಿದ್ದಾನೆ. ದಿನಕ್ಕೆ 4 ಕಲಾಕೃತಿಗಳು ಮಾರಾಟವಾದರೂ ಸಾಕು, ಹೊಟ್ಟೆ ತುಂಬ ಊಟ ಮಾಡಬಹುದು ಎನ್ನುತ್ತಾನೆ.
ಎರಡು ತಿಂಗಳು ಸಿದ್ಧಾರೂಢ ಮಠದ ಆವರಣದಲ್ಲಿ ಕಲಾಕೃತಿಗಳನ್ನು ಮಾರಾಟ ಮಾಡುತ್ತಿದ್ದ ಕೃಷ್ಣ, ಮಠದಲ್ಲಿ ಊಟ ಮಾಡುತ್ತಿದ್ದ. ಈಗ ಕಿಮ್ಸ್ ಆವರಣದಲ್ಲಿ ವಾಸವಾಗಿದ್ದು, ಮುಂದೆ ಎಲ್ಲಿ ಹೋಗುವುದೋ ಗೊತ್ತಿಲ್ಲ ಎನ್ನುತ್ತಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ
Hubli: ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ: ಗುಣಧರನಂದಿ ಮಹಾರಾಜ
L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ
Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ
MUST WATCH
ಹೊಸ ಸೇರ್ಪಡೆ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ