ಬಡವರಿಗೆ ಆಸರೆಯಾಗದ ಆಶ್ರಯ ಯೋಜನೆ

ಸಾಲ ಮಾಡಿ ಮನೆ ಕಟ್ಟಿಕೊಂಡವರು ಅತಂತ್ರ

Team Udayavani, Jul 24, 2020, 9:02 AM IST

ಬಡವರಿಗೆ ಆಸರೆಯಾಗದ ಆಶ್ರಯ ಯೋಜನೆ

ನವಲಗುಂದ: ಕೋವಿಡ್ ಪ್ರಾರಂಭದಿಂದ ಒಂದಿಲ್ಲೊಂದು ಕಷ್ಟಗಳು ಸಾರ್ವಜನಿಕರ ಮೇಲೆ ಬೀಳುತ್ತಿದೆ. ಅದರಲ್ಲಿಯೂ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ವಾಜಪೇಯ ವಸತಿ ಯೋಜನೆಯ ಫಲಾನುಭವಿಗಳು ಹೇಳಲಾರದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ವಸತಿ ರಹಿತ ಕುಟುಂಬಗಳಿಗೆ ಆಸರೆಯಾಗಲಿ ಎಂದು ರಾಜ್ಯ ಹಾಗೂ ಕೇಂದ್ರ ಸರಕಾರ ಸೇರಿ ಸ್ವಂತ ಜಾಗೆಯುಳ್ಳವರಿಗೆ ವಾಜಪೇಯಿ-ಡಾ| ಬಿ.ಆರ್‌. ಅಂಬೇಡ್ಕರ್‌ ನಿವಾಸ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು 2.70 ಲಕ್ಷ ರೂ. ಹಾಗೂ ಎಸ್‌ಸಿ-ಎಸ್‌ಟಿಯವರಿಗೆ 3.70 ಲಕ್ಷ ರೂ. ಸಹಾಯಧನ ನೀಡುತ್ತದೆ. ಆದರೆ ಇದು ಹೆಸರಿಗೆ ಮಾತ್ರ. ಫಲಾನುಭವಿಗಳು ಹಣ ಮಂಜೂರಾತಿಗೆ ವರ್ಷಪೂರ್ತಿ ಕಾಯುವಂತಾಗಿದೆ.

ಸಾಲವೇ ಶೂಲವಾಯ್ತು: ಪುರಸಭೆ ವ್ಯಾಪ್ತಿಯಲ್ಲಿ 2017-18ರಲ್ಲಿ ವಾಜಪೇಯಿ ವಸತಿ ಯೋಜನೆಯಲ್ಲಿ ಆಯ್ಕೆಯಾದವರು ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಮನೆಯ ಬುನಾದಿಯಿಂದ ಹಂತ ಹಂತವಾಗಿ ಜಿಪಿಎಸ್‌ ಆದ ಮೇಲೆಯೇ ಸರಕಾರ ಅವರ ಖಾತೆಗಳಿಗೆ ಹಣವನ್ನು ಬಿಡುಗಡೆ ಮಾಡುತ್ತದೆ. ಆದರೆ, ಅಂತಹ ಫಲಾನುಭವಿಗಳಿಗೆ ಈವರೆಗೆ 1.20 ಲಕ್ಷ ರೂ ಮಾತ್ರ ಬಂದಿದೆ. ಇನ್ನುಳಿದ 1.50 ಲಕ್ಷ ರೂ. ಸಹಾಯಧನಕ್ಕಾಗಿ ಫಲಾನುಭವಿಗಳು ಪುರಸಭೆಗೆ ಅಲೆದಾಡುವಂತಾಗಿದೆ. ಇನ್ನು ಎಸ್‌ಸಿ-ಎಸ್‌ ಟಿಯವರಿಗೆ ಮನೆ ಮಂಜೂರಾತಿ ದೊರೆತರೂ 3.70 ಲಕ್ಷ ರೂ. ಪೈಕಿ ನಯಾಪೈಸೆ ಬಂದಿಲ್ಲ. ಸಾಲ ಮಾಡಿಕೊಂಡಿ ಮನೆ ಕಟ್ಟಿಕೊಂಡಿದ್ದು, ಸಾಲ ಮರುಪಾವತಿ ಮಾಡುವುದು ಹೇಗೆ ಎಂಬುದು ತಿಳಿಯುತ್ತಿಲ್ಲ ಎಂದು ನಿಂಗವ್ವ ಕುಳಗೇರಿ ನೋವನ್ನು ತೋಡಿಕೊಂಡರು.

ಇದೊಂದು ರೀತಿಯಾದರೆ ಇನ್ನು 2018-19ರಲ್ಲಿ ವಾಜಪೇಯಿ ವಸತಿ ಯೋಜನೆಯಲ್ಲಿ ಆಯ್ಕೆಯಾದ 150 ಫಲಾನುಭವಿಗಳ ಯಾದಿ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಮುಂದೆಯೇ ಹೋಗದ ಕಾರಣ ಫಲಾನುಭವಿಗಳು ಕಾಯುತ್ತ ಕೂರುವಂತಾಗಿದೆ. ವಸತಿ ಮುಕ್ತ ರಾಜ್ಯ-ರಾಷ್ಟ್ರವೆಂದು ಸರಕಾರ ಘೋಷಣೆ ಮಾಡುತ್ತದೆ. ಆದರೆ, ನೈಜವಾಗಿ ಪರೀಕ್ಷೆ ಮಾಡಿದರೆ ಬಡವರು ಸೂರಿಗಾಗಿ ಕಚೇರಿಗಳಿಗೆ ಅಲೆದಾಡುವದು ತಪ್ಪಿಲ್ಲ.

ಜನಪ್ರತಿನಿಧಿಗಳೇ, ಬಡವರಿಗೆ ಸ್ಪಂದಿಸಿ :  ಸರಕಾರದ ವಸತಿ ಯೋಜನೆ ಪ್ರಯೋಜನ ಪಡೆಯುವ ಫಲಾನುಭವಿಗಳು ಅತೀ ಬಡ ಕುಟುಂಬಗಳಾಗಿವೆ. ಕೂಲಿ ಕಾರ್ಮಿಕರಾಗಿದ್ದು, ಕೊರೊನಾದಿಂದ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಕಷ್ಟದಾಯಕವಾಗಿದೆ. ಸರಕಾರ ವಸತಿ ಯೋಜನೆಗೆ ಮೀಸಲಿಟ್ಟ ಹಣವನ್ನು ವಸತಿ ಯೋಜನೆಯ ಫಲಾನುಭವಿಗಳಿಗೆ ಬಳಕೆ ಮಾಡದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಸ್ಥಳೀಯ ಜನಪ್ರತಿನಿಧಿ ಗಳು ಸರಕಾರದ ಗಮನಕ್ಕೆ ತಂದು ಮುತುವರ್ಜಿ ವಹಿಸಿ ಬಡವರ ಬಾಳಿಗೆ ಆಶಾಕಿರಣವಾಗಬೇಕಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ :  2017-18ರಲ್ಲಿ ವಾಜಪೇಯಿ ವಸತಿ ಯೋಜನೆಯಲ್ಲಿ ಮನೆ ಕಟ್ಟಲು ಆದೇಶ ಬಂದಿತ್ತು. ಆದರೆ ಇನ್ನೂ 1.50 ಲಕ್ಷ ರೂ. ಬರಬೇಕಾಗಿದೆ. ಸರಕಾರ ನೀಡುವ ಹಣ ಬರಬಹುದೆಂಬ ಆಸೆಯಿಂದ ಸಾಲ ಮಾಡಿ ಮನೆ ಪೂರ್ತಿಗೊಳಿಸಿದ್ದು, ಸಂಕಷ್ಟಕ್ಕೆ ಸಿಲುಕಿದ್ದೇನೆ. ಶಾಸಕರು, ಸಂಸದರು, ಮುಖ್ಯಮಂತ್ರಿಗಳಿಗೂ ಮನವಿ ನೀಡಿದ್ದೇನೆ. ಯಾರಿಂದಲೂ ಸ್ಪಂದನೆ ಇಲ್ಲ. ಪುರಸಭೆ ಅಧಿಕಾರಿಗಳು ಮಂಜೂರಾದ ಹಣವನ್ನು ನೀಡಿದ್ದೇವೆ, ಉಳಿದ ಹಣವನ್ನು ಸರಕಾರದಿಂದ ಮಂಜೂರಾದ ಮೇಲೆ ಕೊಡಲಾಗುವುದೆಂದು ಹೇಳಿದ್ದಾರೆ. ನಾನೊಬ್ಬ ಕಾರ್ಮಿಕನಾಗಿದ್ದು, ಇತ್ತ ಕೊರೊನಾದಿಂದ ದುಡಿಯಲು ಕೆಲಸವಿಲ್ಲ. ಮನೆಗಾಗಿ ಮಾಡಿದ ಸಾಲಕ್ಕೆ ಆತ್ಮಹತ್ಯೆ ಮಾಡಿ ಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಆಶ್ರಯ ಪ್ಲಾಟ್‌ ಫಲಾನುಭವಿ ಲಕ್ಷ್ಮಣ ಹನಮಂತಪ್ಪ ಶಿಂಧೆ ಅಳಲು ತೋಡಿಕೊಂಡರು.

2017-18ರಿಂದ ವಸತಿ ಯೋಜನೆಯಲ್ಲಿ ಮಂಜೂರಾತಿ ನೀಡಿದವರಿಗೆ ಅತಿವೃಷ್ಟಿ, ಕೋವಿಡ್ ದಿಂದ ಸರಕಾರದಿಂದ ಅನುದಾನ ಮಂಜೂರಾಗಿಲ್ಲ. ಸರಕಾರದಿಂದ ಅನುದಾನ ಬರುವವರಿಗೂ ಫಲಾನುಭವಿಗಳು ಕಾಯಬೇಕು.  ಎನ್‌.ಎಚ್‌. ಖುಂದಾನವರ, ಪುರಸಭೆ ಮುಖ್ಯಾಧಿಕಾರಿ

2019ರಲ್ಲಿ ಆಯ್ಕೆಯಾದ 150 ಬಡ ಕುಟುಂಬದ ಫಲಾನುಭವಿಗಳಿಗೆ ಒಂದು ವರ್ಷವಾದರೂ ಮಂಜೂರಾತಿ ದೊರೆತಿಲ್ಲ. ಸರಕಾರ ವಸತಿ ಯೋಜನೆಯಲ್ಲಿ ಕಷ್ಟಪಡುತ್ತಿರುವ ಬಡವರನ್ನು ನೋಡುತ್ತಿಲ್ಲ. ವಸತಿ ಯೋಜನೆಯಲ್ಲಿ ಮನೆ ಕಟ್ಟಿಸಿಕೊಂಡವರು ಅನುದಾನ ಬರದೆ ತೊಂದರೆ ಅನುಭವಿಸುತ್ತಿದ್ದಾರೆ.  ಮಂಜು ಜಾಧವ,  ಪುರಸಭೆ ಸದಸ್ಯ

 

ಪುಂಡಲೀಕ ಮುಧೋಳೆ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.