ಗಮನ ಸೆಳೆದ ನವನವೀನ ಕೃಷಿ ಯಾಂತ್ರಿಕತೆ


Team Udayavani, Jan 20, 2020, 11:15 AM IST

huballi-tdy-2

ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಹಲವು ನೂತನ ಯಂತ್ರಗಳು, ಆವಿಷ್ಕಾರಗಳು ಗಮನ ಸೆಳೆದವು. ರೈತರ ಅನುಕೂಲಕ್ಕಾಗಿ ಕಡಿಮೆ ವೆಚ್ಚದ, ಹೆಚ್ಚು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅಭಿವೃದ್ಧಿಪಡಿಸಿದ ಹಾಗೂ ವಿನ್ಯಾಸಗೊಳಿಸಿದ ಯಂತ್ರಗಳು ರೈತರನ್ನು ಹೆಚ್ಚು ಆಕರ್ಷಿಸಿದವು.

ಸಣ್ಣ ಪ್ರಮಾಣದ ಇನ್‌ ಕ್ಯುಬೇಟರ್‌: ಕಡಿಮೆ ವೆಚ್ಚದಲ್ಲಿ ಕೋಳಿಗಳನ್ನು ಮರಿ ಮಾಡುವ ಯಂತ್ರ ಗಮನ ಸೆಳೆಯಿತು. ಹುಬ್ಬಳ್ಳಿಯ ನಾಗರಾಜ ಗುಡ್ಡಪ್ಪ ಗೋಕಾವಿ ಎಂಬ ಬಿ.ಟೆಕ್‌ ಪದವೀಧರ ಅಭಿವೃದ್ಧಿಪಡಿಸಿರುವ ಯಂತ್ರ ಕುಕ್ಕುಟೋದ್ಯಮ ಕ್ಷೇತ್ರದ ಮೊಟ್ಟೆಯಿಂದ ಮರಿಮಾಡುವ ಸವಾಲನ್ನು ಸಮರ್ಥವಾಗಿ ಎದುರಿಸುವಲ್ಲಿ ಪೂರಕವಾಗಿದೆ. ಸ್ಪಾರ್ಕ್‌ ಟೆಕ್ನಾಲಜಿಸ್‌ ಸಂಸ್ಥೆಯನ್ನು ಆರಂಭಿಸಿ ಯಂತ್ರಗಳನ್ನು ರೂಪಿಸುತ್ತಿದ್ದಾರೆ. 110 ವ್ಯಾಟ್‌ ನಿಂದ 2800 ವ್ಯಾಟ್‌ ಸಾಮರ್ಥ್ಯದ ಯಂತ್ರಗಳನ್ನು ನಿರ್ಮಿಸಲಾಗುತ್ತದೆ.

ಕೋಳಿ ಸಾಕಣೆದಾರರಿಗೆ ಮೊಟ್ಟೆಯಿಂದ ಮರಿ ಮಾಡುವುದು ಸವಾಲಿನ ಕಾರ್ಯ. ಕಡಕನಾಥ ಸೇರಿದಂತೆ ಕೆಲ ಕೋಳಿಗಳು ಕಾವು ಕೊಟ್ಟು ಮೊಟ್ಟೆಮಾಡುವುದಿಲ್ಲ. ಇಂಥ ಸಂದರ್ಭದಲ್ಲಿ ನಾಟಿಕೋಳಿಗಳ ಕಾವು ಕೊಟ್ಟು ಕಡಕನಾಥ ಕೋಳಿಮರಿಗಳನ್ನು ಪಡೆಯಲಾಗುತ್ತದೆ. ಆದರೆ ಇದರಲ್ಲಿ ಮೊಟ್ಟೆಗಳ ಹಾನಿಯ ಪ್ರಮಾಣ ಹೆಚ್ಚಾಗಿರುತ್ತದೆ. ಮೊಟ್ಟೆಗಳನ್ನು ಮರಿ ಮಾಡಲು ಹಲವು ಯಂತ್ರಗಳನ್ನು ಅಭಿವೃದ್ಧಿ ಪಡಿಸಲಾಗಿದ್ದರೂಹಲವು ತಾಂತ್ರಿಕ ಕಾರಣಗಳಿಂದಾಗಿ ಅವುಗಳ ಫಲಿತಾಂಶ ಕುಕ್ಕುಟೋದ್ಯಮಕ್ಕೆ ಪೂರಕವಾಗಿಲ್ಲ.

ಮೊಟ್ಟೆಯಿಂದ ಕೋಳಿ ಮರಿಗಳನ್ನು ಪಡೆಯಲು ಹ್ಯಾಚರಿ ಯುನಿಟ್‌ಗಳಿಗೆ ಹೋಗಬೇಕಾಗುತ್ತದೆ. ಅಲ್ಲಿ ನೀಡಿದ ಮೊಟ್ಟೆಗಳಿಗೆ ಇಷ್ಟೇ ಪ್ರಮಾಣದ ಮೊಟ್ಟೆಗಳು ಬರುತ್ತವೆ ಎಂಬ ಖಾತ್ರಿಯಿಲ್ಲ. ಅಲ್ಲದೇ ಮರಿಗಳನ್ನು ಮಾಡಲು ಹಣ ನೀಡಬೇಕಾಗುತ್ತದೆ. ಇದನ್ನು ಮನಗಂಡ ನಾಗರಾಜ ತಾವೇ ಒಂದು ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ. ಆರಂಭದಲ್ಲಿ ಪ್ಲೈವುಡ್‌ ಬಳಕೆ ಮಾಡಿ ಅದಕ್ಕೆ ಬಲ್ಬ್ಗಳನ್ನು ಜೋಡಿಸಿ, ಪಿವಿಸಿ ಪೈಪ್‌,ತೇವಾಂಶ ನಿಯಂತ್ರಣಕ್ಕೆ ನೀರಿನ ಪಾತ್ರೆ, ಸೆನ್ಸರ್‌ ಅಳವಡಿಸಿ ರೂಪಿಸಿದರು. ಇದರಿಂದ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಆದ್ದರಿಂದ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಿದ್ದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು. ನಾಗರಾಜ ಅವರ ಆವಿಷ್ಕಾರವನ್ನು ಮನಗಂಡ ಕೃಷಿ ವಿಶ್ವವಿದ್ಯಾಲಯ ಕಡಿಮೆ ವೆಚ್ಚದಲ್ಲಿ ಕೋಳಿ ಮರಿ ಮಾಡುವ ಯಂತ್ರ ರೂಪಿಸಿದ್ದಕ್ಕೆ ಪ್ರಮಾಣಪತ್ರ ನೀಡಿ ಗೌರವಿಸಿದೆ.

ಯಂತ್ರಕ್ಕೆ ಸೋಲಾರ್‌ ಪ್ಯಾನೆಲ್‌ ಹಾಗೂ ಬ್ಯಾಟರಿ ಅಳವಡಿಸಬಹುದಾಗಿದ್ದು, ವಿದ್ಯುತ್‌ಸಮಸ್ಯೆಯಿಲ್ಲದೇ 21 ದಿನಗಳಲ್ಲಿ ಮೊಟ್ಟೆಯಿಂದ ಮರಿ ಪಡೆಯಬಹುದಾಗಿದೆ. 50ರಿಂದ 500 ಕೋಳಿಮರಿವರೆಗೆ ವಿವಿಧ ಸಾಮರ್ಥ್ಯದ ಯಂತ್ರ ಅವರು ರೂಪಿಸಿಕೊಡುತ್ತಾರೆ. ಯಂತ್ರದ ರೊಟೇಟರ್‌ನಿಂದಾಗಿ ಮೊಟ್ಟೆಗಳು ತಾವಾಗಿಯೇರೊಟೇಟ್‌ ಆಗುತ್ತವೆ. ಇದರಿಂದ ಇಡೀ ಮೊಟ್ಟೆಗೆ ಶಾಖ ತಲುಪಲು ಸಾಧ್ಯವಾಗುತ್ತದೆ.

 ಕೀಟ ನಿಯಂತ್ರಣಕ್ಕೆ ಸೋಲಾರ್‌ ಟ್ರ್ಯಾಪ್‌ : ಮಹಾರಾಷ್ಟ್ರದ ಸಾಂಗ್ಲಿ ಮೂಲದ ಕಿಸಾನ್‌ ಎಕ್ಸ್‌ ಸಂಸ್ಥೆ ಅಭಿವೃದ್ಧಿಪಡಿಸಿದ ಸೋಲಾರ್‌ ಟ್ರ್ಯಾಪ್‌ ರೈತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಕೀಟಗಳ ನಿರ್ವಹಣೆ ಕೃಷಿ ಕ್ಷೇತ್ರದ ಬಹುದೊಡ್ಡ ಸಮಸ್ಯೆ. ಇದನ್ನು ಮನಗಂಡ ಆಗ್ಶಾ ಪ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ಸೋಲಾರ್‌ ಟ್ರ್ಯಾಪ್‌ ಅಭಿವೃದ್ಧಿಪಡಿಸಿದೆ. ಸೌರಶಕ್ತಿ ಬಳಕೆ ಮಾಡುವುದರಿಂದ ದಿನಪೂರ್ತಿಇದರಲ್ಲಿನ ಬ್ಯಾಟರಿ ಚಾರ್ಜ್‌ ಆಗಿ ರಾತ್ರಿ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ. ನೀಲಿ ಹಾಗೂ ಹಳದಿ ಬಣ್ಣದ ದೀಪ ಅಳವಡಿಸಲಾಗಿದೆ. ಕೆಲವು ಕೀಟಗಳು ನೀಲಿ ಬಣ್ಣಕ್ಕೆ ಆಕರ್ಷಿತಗೊಂಡರೆ, ಇನ್ನು ಕೆಲವು ಕೀಟಗಳು ಹಳದಿ ಬಣ್ಣಕ್ಕೆ ಆಕರ್ಷಿತವಾಗುತ್ತವೆ. ದೀಪಗಳ ಬುಡದಲ್ಲಿರುವ ಬುಟ್ಟಿಯಲ್ಲಿ ನೀರು ಹಾಕಿರುವುದರಿಂದ ದೀಪದ ಹತ್ತಿರಕ್ಕೆ ಬರುವ ಕೀಟಗಳು ಬುಟ್ಟಿಗೆ ಬೀಳುತ್ತವೆ. ಒಂದು ಎಕರೆಗೆ ಒಂದು ಸೋಲಾರ್‌ ಟ್ರ್ಯಾಪ್‌ ಅಳವಡಿಸಬಹುದಾಗಿದೆ. ದ್ರಾಕ್ಷಿ, ಕಲ್ಲಂಗಡಿ, ದಾಳಿಂಬೆ ಬೆಳೆಗೆ ಸೋಲಾರ್‌ ಟ್ರ್ಯಾಪ್‌ ಅನುಕೂಲಕರವಾಗಿದೆ. ಪೌಡರ್‌ ಕೋಟೆಡ್‌ ಬಾಡಿ ಹೊಂದಿರುವ ಟ್ರ್ಯಾಪ್‌ ದೀರ್ಘಾವಧಿ ಬಾಳಿಕೆ ಬರುತ್ತದೆ. 6 ವೊಲ್ಟೆಜ್‌ ಬ್ಯಾಟರಿಯಿದ್ದು, ಇದಕ್ಕೆ 6 ತಿಂಗಳ ವಾರಂಟಿ ನೀಡಲಾಗುತ್ತದೆ.

 

-ವಿಶ್ವನಾಥ ಕೋಟಿ

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.