ನೋಡುಗರ ಮನಗೆದ್ದ ಅತ್ತೆ ಸಿಂಗಾರಿ-ಸೊಸೆ ಬಂಗಾರಿ!

101ನೇ ಪ್ರಯೋಗದ ಹಿನ್ನೆಲೆಯಲ್ಲಿ ಕಲಾ ಪೋಷಕರಿಗೆ ಅಭಿನಂದನೆ ಸಮಾರಂಭ

Team Udayavani, Jun 8, 2019, 12:26 PM IST

hubali-tdy-5..

ಧಾರವಾಡ: ಅತ್ತೆ ಸಿಂಗಾರಿ, ಸೊಸೆ ಬಂಗಾರಿ ಹಾಸ್ಯ ನಾಟಕದ ಸನ್ನಿವೇಶ.

ಧಾರವಾಡ: ಮಂಡಲಗಿರಿಯ ಗುರು ತೋಂಟದಾರ್ಯ ನಾಟ್ಯ ಸಂಘವು ನಗರದ ಸಿಬಿಟಿ ಎದುರಿನ ನಿತಿನ್‌ ಗಿರಿ ಅವರ ಜಾಗದಲ್ಲಿ ಎರಡು ತಿಂಗಳಿಂದ ಠಿಕಾಣಿ ಹೂಡಿದ್ದು, ಈ ತಂಡದ ‘ಅತ್ತೆ ಸಿಂಗಾರಿ, ಸೊಸೆ ಬಂಗಾರಿ’ ನಾಟಕ ಧಾರವಾಡಿಗರ ಮನ ಗೆದ್ದಿದೆ.

ಈ ಹಾಸ್ಯ ನಾಟಕದ 101ನೇ ಪ್ರಯೋಗದ ಹಿನ್ನೆಲೆಯಲ್ಲಿ ಜೂ. 9ರಂದು ಸಂಜೆ 6:15 ಗಂಟೆಗೆ ಕಲಾ ಪೋಷಕರಿಗೆ ಅಭಿನಂದನೆ ಸಮಾರಂಭ ಆಯೋಜಿಸಲಾಗಿದೆ. ಪಾಲಿಕೆ ಸದಸ್ಯ ಸುಭಾಸ ಶಿಂಧೆ ಉದ್ಘಾಟಿಸಲಿದ್ದು, ನ್ಯಾಯವಾದಿ ಉದಯಕುಮಾರ ದೇಸಾಯಿ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಹಾಯಕ ಪೊಲೀಸ್‌ ಆಯುಕ್ತ ಎಂ.ಎನ್‌. ರುದ್ರಪ್ಪ, ಕಲಾ ಪೋಷಕರಾದ ನಿತಿನ್‌ ಗಿರಿ, ಬಸವಲಿಂಗಯ್ಯ ಹಿರೇಮಠ, ಸದಾನಂದ ಡಂಗನವರ, ಗೋವಾ ಸೂರ್ಯೋದಯ ಕನ್ನಡ ಸಂಘದ ಅಧ್ಯಕ್ಷ ಗಂಗಯ್ಯ ಹಿರೇಮಠ, ಕಾರ್ಯದರ್ಶಿ ಬಸವರಾಜ ಮೇಟಿ ಹಾಗೂ ಕಿರಣ ಸಿದ್ದಾಪೂರ ಪಾಲ್ಗೊಳ್ಳಲಿದ್ದಾರೆ.

ಇಲ್ಲೇ ಮೊದಲ ಪ್ರದರ್ಶನ: ನಾಲ್ಕು ವರ್ಷಗಳ ಹಿಂದೆ ಈ ನಾಟಕ ಧಾರವಾಡದಿಂದಲೇ ಮೊದಲ ಪ್ರದರ್ಶನ ಕಂಡಿದೆ. ಈಗಾಗಲೇ ಬನಶಂಕರಿ, ಕೊಪ್ಪಳ, ಗೊಡಚಿ ಜಾತ್ರೆಗಳಲ್ಲಿ ತಲಾ 100 ಪ್ರದರ್ಶನ, ಅಮನಗಿ, ಕೊಕಟನೂರ, ಮುದೇನೂರ ಜಾತ್ರೆಗಳಲ್ಲಿ ತಲಾ 50 ಪ್ರದರ್ಶನ ಕಂಡಿದೆ. ಧಾರವಾಡದ ಜನತೆ ಸಹ ನಾಟಕವನ್ನು ಉತ್ತಮವಾಗಿ ಸ್ವೀಕರಿಸಿದ್ದು, ನವೆಂಬರ್‌-ಡಿಸೆಂಬರ್‌ ತಿಂಗಳವರೆಗೆ ನಿರಂತರವಾಗಿ ಪ್ರದರ್ಶನ ನಡೆಸಲು ನಾಟ್ಯ ಸಂಘ ತೀರ್ಮಾನಿಸಿದೆ ಎಂದು ನಾಟ್ಯ ಸಂಘದ ವ್ಯವಸ್ಥಾಪಕ ಸಂಗಮೇಶ ಕವಡಿಮಟ್ಟಿ ತಿಳಿಸಿದ್ದಾರೆ.

ಸಾಕ್ಷರತೆ ಮೂಡಿಸುವ ಸಲುವಾಗಿ ಈ ನಾಟಕ ರಚಿಸಿದ್ದೇನೆ. ಒಬ್ಬ ತಾಯಿ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ, ನೈತಿಕತೆ ಕಲಿಸದಿದ್ದರೆ ಏನೆಲ್ಲ ಪಡಿಪಾಟಲು ಪಡಬೇಕಾಗುತ್ತದೆ ಎನ್ನುವುದೇ ನಾಟಕದ ಪ್ರಮುಖ ಅಂಶ. ಅಣ್ಣನ ಮಗಳನ್ನು ತನ್ನ ಮೂರು ಮಕ್ಕಳಲ್ಲಿ ಒಬ್ಬರಿಗೆ ಮದುವೆ ಮಾಡಿಕೊಡಬೇಕೆಂಬ ಹಠದಲ್ಲಿ ಅಣ್ಣ ಹಾಗೂ ಆತನ ಮಗಳೊಂದಿಗೆ ನಡೆಸುವ ಸನ್ನಿವೇಶಗಳಲ್ಲಿ ಹಾಸ್ಯ ಅಡಗಿದೆ ಎಂದು ಹೇಳುತ್ತಾರೆ ನಾಟಕ ಬರೆದ ಆನಂದ ಬೆಂಗಳೂರ.

ಇಡೀ ನಾಟಕ ಹಾಸ್ಯಪೂರ್ಣವಾಗಿದ್ದರೂ ಕೊನೆ ಸನ್ನಿವೇಶ ಮಾತ್ರ ಕಣ್ಣೀರು ತರಿಸುತ್ತದೆ. ಮಾವನ ಮಗಳನ್ನು ಮದುವೆಯಾಗೆಂದು ಹಠಕ್ಕೆ ಬಿದ್ದ ತಾಯಿ ಅನಕ್ಷರಸ್ಥ ಮೂವರು ಮಕ್ಕಳನ್ನು ಮತ್ತಷ್ಟು ಹಾದಿ ತಪ್ಪಿಸುತ್ತಾಳೆ. ಆಗ ಮಕ್ಕಳು ಕಲಿಸುವ ಪಾಠವೇ ಪ್ರೇಕ್ಷಕರಿಗೆ ಕಣ್ಣೀರು ತರಿಸುತ್ತದೆ.

ಎಸ್‌. ಮಮತಾಶ್ರೀ ಅತ್ತೆ ಪಾತ್ರದಲ್ಲಿ, ನೇತ್ರಾ ಅರಳಿಹಳ್ಳಿ ಸೊಸೆ ಪಾತ್ರದಲ್ಲಿ, ನೇತ್ರಾ ಹಿರೇಮಠ ಹಾಸ್ಯ ಪಾತ್ರ, ಮಾರುತಿ ಗದಗ ಶಕುನಿ, ಮಹಾಂತೇಶ ಹಿರೇಮಠ ತಂದೆ ಪಾತ್ರ, ಉಮೇಶ ಮಹಾಲಿಂಗಪುರ ಮನೆ ಆಳಿನ ಪಾತ್ರ ಹಾಗೂ ಕೆ.ಎಸ್‌. ನಟರಾಜ, ಆನಂದ ಮತ್ತು ಶಿವು ಮೂರು ಮಕ್ಕಳ ಪಾತ್ರದಲ್ಲಿದ್ದಾರೆ. ವಿಜಯ ಹಾಗೂ ಚೇತನಕುಮಾರ ಬನ್ನಟ್ಟಿ ಸಂಗೀತ ನೀಡಿದ್ದಾರೆ. 25 ಜನ ಕಲಾವಿದರನ್ನು ಒಳಗೊಂಡ ಈ ನಾಟಕ ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲಿದೆ.

ಟಾಪ್ ನ್ಯೂಸ್

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.