ಲಾರಿ-ಆಟೋ ರಿಕ್ಷಾ ಚಾಲಕರ ಸಂಘದಿಂದ ಪ್ರತಿಭಟನೆ
Team Udayavani, Feb 9, 2021, 5:17 PM IST
ಧಾರವಾಡ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಲಾರಿ ಮಾಲೀಕರ ಹಾಗೂ ಸಾಗಾಣಿಕೆದಾರರ ಸಂಘ, ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘದ ವತಿಯಿಂದ ನಗರದ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಏರಿಕೆ ಆಗಿರುವ ಡೀಸೆಲ್, ಪೆಟ್ರೋಲ್ ಬೆಲೆ ಲೀಟರ್ಗೆ 50 ರೂ. ಒಳಗೆ ಇಳಿಸಬೇಕು. ಸರಕು ಸಾಗಾಣಿಕೆಗೆ ಕಿಲೋ ಮೀಟರ್ ಪ್ರಕಾರ ಸೂಕ್ತ ಬಾಡಿಗೆ ನಿಗದಿ ಮಾಡಬೇಕು. ಹು-ಧಾ ಬೈಪಾಸ್ನಲ್ಲಿ ಸ್ಥಳೀಯ ವಾಹನಗಳಿಗೆ ಶುಲ್ಕ ರಹಿತ ಸಂಚರಿಸಲು ಮುಕ್ತ ಅವಕಾಶ ಕಲ್ಪಿಸಬೇಕು. 4 ವರ್ಷಗಳಿಂದ ಆಟೋಗಳ ಪ್ರಯಾಣ ದರ ಪುನರ್ ವಿಮರ್ಶಿಸಿಲ್ಲ. ಹೀಗಾಗಿ ಸಭೆ ಕರೆದು ದರ ನಿಗದಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿ ವರ್ಷ ವಾಹನ ವಿಮೆ ಏರಿಕೆ ನಿಲ್ಲಿಸಬೇಕು. ಸರ್ಕಾರ ಟ್ರಕ್ ಟರ್ಮಿನಲ್ಗೆ ಮೀಸಲಿಟ್ಟ ಜಾಗದಲ್ಲಿ ಟರ್ಮಿನಲ್ ನಿರ್ಮಿಸಿ ಟ್ರಾನ್ಸ್ಪೊàರ್ಟ್ಗಳಿಗೆ ಜಾಗ ಒದಗಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ನವೀಕರಣ (ಪಾಸಿಂಗ್) ಮಾಡಿಸದ ಆಟೋಗಳಿಗೆ ಯಾವುದೇ ದಂಡ ವಿ ಧಿಸದೆ ನವೀಕರಣಕ್ಕೆ 3 ತಿಂಗಳ ಅವಕಾಶ ನೀಡಬೇಕು. ಆಟೋ ಮೀಟರ್ ಗಳಿಗೆ ಹೆಚ್ಚಿನ ದಂಡ ವಿ ಧಿಸುವುದನ್ನು ಕೈಬಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಪ್ರಸ್ತುತ ದಿನಗಳಲ್ಲಿ ಸಾಗಣೆ ವಾಹನದ ಮೂಲಕ ಜೀವನ ಸಾಗಿಸುವುದೇ ದುಸ್ತರವಾಗಿದ್ದು, ಇಂತಹ ಸಮಯದಲ್ಲಿ ದುಬಾರಿ ದಂಡ ವಿಧಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ :ಮಕ್ಕಳ ಕಲಿಕಾ ಫಲ ಸಂವರ್ಧನೆಗೆ ಶ್ರಮಿಸಿ
ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ,ಪಿ.ಎಚ್. ನೀರಲಕೇರಿ, ಗೈಬುಸಾಬ ಹೊನ್ಯಾಳ, ಗಂಗಾಧರ ಹೊಸಮನಿ, ಶಂಬುಕುಮಾರ ಸುಂಕದ, ಆರ್.ಎಸ್. ಪಠಾಣ, ಸುನೀಲ ಕಲಾಲ, ಐ.ಎಂ. ಜವಳಿ, ಬಿ.ಎ. ಮುಧೋಳ, ದೇವಾನಂದ ಜಗಾಪುರ, ಬಾಬಾಜಾನ ಮುಧೋಳ, ರಮೇಶ ಬೋಸ್ಲೆ, ಎ.ಎಸ್. ಪೀರಜಾದೆ, ಬಶೀರಹ್ಮದ ಮುಲ್ಲಾ, ಸುನೀಲ ಆಗಲಾವಿ, ಅಜೀಮ ಮೊಮೀನ, ಎಂ.ಎಂ. ಬೇಪಾರಿ, ಸುಲೇಮಾನ ಶೇಖ, ಚಂದ್ರಶೇಖರ ಬೆಟಗೇರಿ, ಲಕ್ಷ್ಮಣ ಬಕ್ಕಾಯಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
MUST WATCH
ಹೊಸ ಸೇರ್ಪಡೆ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್