ಪದ್ಮ ಶ್ರೀ ಪಂ| ವೆಂಕಟೇಶಕುಮಾರಗೆರಾಮಚಂದ್ರ ಸ್ವರಶ್ರೀ ಪ್ರಶಸ್ತಿಪ್ರದಾನ
Team Udayavani, May 4, 2018, 5:33 PM IST
ಹುಬ್ಬಳ್ಳಿ: ಹಣಕ್ಕಾಗಿ ಸಂಗೀತ ಕಚೇರಿ ನಡೆಸದೆ ಸಂಗೀತ ಬೆಳೆಸುವುದಕ್ಕಾಗಿ ಸಂಗೀತ ಪ್ರಸ್ತುತ ಪಡಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಡಾ|ಪಂ. ವೆಂಕಟೇಶಕುಮಾರ ಹೇಳಿದರು. ಇಲ್ಲಿನ ಡಾ| ಡಿ.ಎಸ್.ಕರ್ಕಿ ಕನ್ನಡ ಭವನದಲ್ಲಿ ಗುರುವಾರ ದಿ.ಆರ್.ಜಿ. ದೇಸಾಯಿ ಗವಾಯಿಗಳ 98ನೇ ಜಯಂತಿ ಹಾಗೂ ಶಾಂತಾರಾಮ ಸಂಗೀತ ಶಾಲೆಯ 28ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ‘ರಾಮಚಂದ್ರ ಸ್ವರಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಮಕ್ಕಳು ಘರಾಣಾಗಳಲ್ಲಿ ಒಂದು ಹಂತದವರಿಗೆ ಸಂಗೀತ ಕಲಿಯಬೇಕು. ನಂತರ ಮರೆಯಬೇಕು. ಘರಾಣಾದಿಂದ ಶಿಸ್ತು, ಬದ್ಧತೆ ಬರುತ್ತದೆ. ಸಂಗೀತ ಕಲಿಯುವುದರಲ್ಲಿ ಸರಿಯಾದ ದಾರಿಯಲ್ಲಿ ಹೋಗಬೇಕಾದರೆ ಘರಾಣಾ ಅವಶ್ಯ ಎಂದರು. ಗದುಗಿನ ಆಶ್ರಮ ಗುರುಗಳ ಆಶೀರ್ವಾದ ಹಾಗೂ ಜನ್ಮಜನ್ಮದ ಸಂಸ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಬಂದಿದ್ದು, ಅದರಿಂದ ನಾನು ದೊಡ್ಡವನಾಗಿಲ್ಲ. ಬದಲಾಗಿ ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರು.
ಗುರು ಶಿಷ್ಯರ ಪರಂಪರೆ ಬೆಳೆಸಿದವರು ಪಂ| ಪಂಚಾಕ್ಷರಿ ಹಾಗೂ ಪಂ| ಪುಟ್ಟರಾಜ ಗವಾಯಿಗಳು. ಅವರು ಎಂದಿಗೂ ತಾವು ಬೆಳೆಯುವ ಕುರಿತು ಚಿಂತೆ ಮಾಡದೆ ತಮ್ಮ ಶಿಷ್ಯರನ್ನು ಬೆಳೆಸಿದರು. ಅದೇ ರೀತಿ ಗುರುಗಳಿಂದ ಸಂಗೀತ ಕಲಿಯುವವರು ಶ್ರದ್ಧೆ-ಆಸಕ್ತಿಯಿಂದ ಕಲಿಯಬೇಕು. ಮಕ್ಕಳು ಮೊದಲು ತಂಬೂರಿ ನುಡಿಸುವುದು, ತಬಲಾ ಬಾರಿಸುವುದು ಕಲಿಯಬೇಕು.ಅಂದಾಗ ಮಾತ್ರ ಅವರು ಮುಂದೆ ಸಾಗಲು ಸಾಧ್ಯ ಎಂದರು.
ಸಿದ್ಧಾರೂಢಸ್ವಾಮಿ ಮಠದ ಶ್ರೀ ಅಭಿನವ ಶಿವಪುತ್ರ ಸ್ವಾಮೀಜಿ ಮಾತನಾಡಿ, ನಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಸೂಕ್ತ ವೇದಿಕೆಗಾಗಿ ಕಾಯಬೇಕು. ಅವಕಾಶ ಸಿಕ್ಕಾಗ ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ನಂತರ ಸರಳಾ ಮಧುಸೂಧನ ಹಾಗೂ ಪಂ| ವೆಂಕಟೇಶಕುಮಾರ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಡಾ| ಎಸ್.ಪಿ.ಬಳಿಗಾರ, ಸಿದ್ದಣ್ಣಾ ಮೆಣಸಿನಕಾಯಿ, ಜಯಲಕ್ಷ್ಮೀ ಕಾಮತ, ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ