ಚಿನ್ನ ಕಳ್ಳತನ ಪ್ರಕರಣದ ಕಿಂಗ್ಪಿನ್ ಕಿರಣ ನಿವಾಸ ತಪಾಸಣೆ
Team Udayavani, Jun 9, 2021, 6:15 PM IST
ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ್ದ 4.9 ಕೆಜಿ ಚಿನ್ನ ಕಳ್ಳತನ ಪ್ರಕರಣದ ತನಿಖೆಯನ್ನು ಸಿಐಡಿ ಅಧಿ ಕಾರಿಗಳು ತೀವ್ರಗೊಳಿಸಿದ್ದಾರೆ.
ಪ್ರಕರಣದ ಕಿಂಗ್ಪಿನ್ ಕಿರಣ ವಿ. ಪಾಟೀಲನ ಇಲ್ಲಿನ ಕೇಶ್ವಾಪುರ ಶಿವಗಂಗಾ ಲೇಔಟ್ ನಲ್ಲಿರುವ ನಿವಾಸಕ್ಕೆ ಮಂಗಳವಾರ ಕರೆತಂದು ತೀವ್ರ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಸೋಮವಾರ ಕಿರಣನನ್ನು ಬಂಧಿಸಿ, 14 ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ವಶಪಡಿಸಿಕೊಂಡ ಬೆನ್ನಲ್ಲೇ ಮಂಗಳವಾರ ನಗರಕ್ಕೆ ಕರೆತಂದು ಆತನನ್ನು ಹಾಗೂ ಆತನ ತಂದೆ ನಿವೃತ್ತ ಡಿವೈಎಸ್ಪಿ ವೀರನಗೌಡರನ್ನು ವಿಚಾರಣೆ ನಡೆಸಿದರು.
ಕದ್ದಿರುವ ಚಿನ್ನವನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿರಬಹುದೆಂಬ ಸಂಶಯದ ಮೇಲೆ ಸಿಐಡಿ ಅಧಿಕಾರಿಗಳ ತಂಡವು ಸತತ ಒಂದೂವರೆ ಗಂಟೆಕಾಲ ಮನೆಯ ಮೂಲೆ ಮೂಲೆ ಹುಡುಕಾಡಿದೆ ಎನ್ನಲಾಗಿದೆ.