ಬೇಂದ್ರೆ-ಮಧುರಚೆನ್ನರದ್ದು ಮೈತ್ರಿಯೋಗ: ಡಾ|ಇಟ್ಟಣ್ಣವರ


Team Udayavani, Aug 2, 2017, 12:13 PM IST

hub3.jpg

ಧಾರವಾಡ: ವರಕವಿ ಬೇಂದ್ರೆ ಮತ್ತು ಮಧುರಚೆನ್ನ ಇಬ್ಬರೂ ಕವಿಗಳು, ಸಂಶೋಧಕರು, ನೋವುಂಡವರು, ಆಧ್ಯಾತ್ಮವಾದಿಗಳಾಗಿದ್ದವರು ಎಂದು ಸಾಹಿತಿ ಡಾ| ಶ್ರೀರಾಮ ಇಟ್ಟಣ್ಣವರ ಹೇಳಿದರು. ಇಲ್ಲಿಯ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಮಧುರಚೆನ್ನರ ಜನ್ಮದಿನದ ಪ್ರಯುಕ್ತ ಆಡುಂಬೊಲ ಸಾಹಿತ್ಯ ಸಂವಾದ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಬೇಂದ್ರೆ-ಮಧುರಚೆನ್ನರ ಸಖ್ಯ ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಬದುಕನ್ನ ಮತ್ತು ಬದುಕಿನಾಚೆಯ ವಿಶಾಲ ವಿಶ್ವವನ್ನರಸುತ್ತಿದ್ದ ಈ ಇಬ್ಬರೂ ಮೊದಲ ಭೆಟ್ಟಿಯಲ್ಲಿಯೇ ಅದಾವುದೋ ವಿಶಿಷ್ಟ ಆಕರ್ಷಣೆಗೊಳಗಾದರು. ಗೆಳೆತನವೆಂಬುದೇ ಒಂದು ಯೋಗವಾಗಿದ್ದು, ಅಪರೂಪದ ಒಂದು ಮೈತ್ರಿಯೋಗ ಅವರಲ್ಲಿ ಬೆಸೆದುಕೊಂಡಿತ್ತು. ಇಂಥದೊಂದು ನೆಲೆಯಲ್ಲಿ ಓದುವುದು, ಚರ್ಚಿಸುವುದು, ಸಾಧ್ಯವಾದರೆ ಬರೆಯುವದೆಂಬ ಸೂತ್ರ ಹಲಸಂಗಿಯ ಗೆಳೆಯರ ಮತ್ತು ಸಾಧನಕೇರಿಯ ಗೆಳೆಯರ ಗುಂಪಿನ ಆದರ್ಶವಾಗಿತ್ತು ಎಂದರು.

ಶ್ರೀಮಂತ ಕಾವ್ಯ ರಾಶಿಯನ್ನೇ ಸೃಷ್ಟಿಸಿದ ಬೇಂದ್ರೆ ಪ್ರೀತಿಯ ಬಣ್ಣದೆಳೆಗಳ ಅದೆಷ್ಟೋ ಕವಿತೆಗಳನ್ನು ಮಧುರಚೆನ್ನರ ಮೇಲೆ ಚಿತ್ರಿಸಿದ್ದರೆ ಮಧುರಚೆನ್ನರ ಗೀತೆಗಳ್ಳೋ ಅವುಗಳನ್ನು ಹಾಡುತ್ತಲೇ ಹೋಗಬೇಕೆಂದೆನಿಸುವ ಹಾಗೂ ವಿಶ್ಲೇಷಣೆಗಳನ್ನೇ ಬೇಡದ ಅಮರಗೀತೆಗಳಾಗಿವೆ. ಜ್ಞಾನಪಥದ ಬೇಂದ್ರೆ ಮತ್ತು ಭಕ್ತಿ ಪಥದ ಮಧುರಚೆನ್ನರು ಸಾಹಿತ್ಯದಲ್ಲಿ ಕರ್ನಾಟಕದ ನವೋದಯ ಯುಗವನ್ನು ಸೃಷ್ಟಿಸಿದ ದೃಷ್ಟಾರರಾಗಿದ್ದರು ಎಂದರು.

ಡಾ| ಶಾಲಿನಿ ರಘುನಾಥ, ಸರೋಜಾ ಇಟ್ಟಣ್ಣವರ, ಪಂ| ಬಿ.ಎಸ್‌.ಮಠ, ಪೊ| ಎ.ಜಿ.ಸಬರದ, ಸುರೇಶ ವೆಂ. ಕುಲಕರ್ಣಿ, ಎಸ್‌.ಸಿ. ಪಾಟೀಲ, ಪಂ| ವಾದಿರಾಜ ನಿಂಬರಗಿ, ಡಾ| ದೀಪಕ ಆಲೂರ, ಡಾ| ವಿರುಪಾಕ್ಷ ಬಡಿಗೇರ, ಉಮೇಶ ಮುನವಳ್ಳಿ, ವಿ.ಜಿ. ತಿಗರಿ, ರವಿಶಂಕರ ಗಡಿಯಪ್ಪನವರ, ವಸಂತ ವಾಯಿ ಇದ್ದರು. ಸಹನಾ  ತಾಮಣಕರ ಅವರು, ಮಧುರಚೆನ್ನರ ಆಯ್ದ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಡಾ| ಶ್ಯಾಮಸುಂದರ ಬಿದರಕುಂದಿ ಸ್ವಾಗತಿಸಿದರು. ನರಸಿಂಹ ಪರಾಂಜಪೆ ವಂದಿಸಿದರು. 

ಟಾಪ್ ನ್ಯೂಸ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.