ಟ್ರೇನಿಂಗ್ಗೆ ಹಾಜರಾದ ಭೀಮಕ್ಕ
Team Udayavani, Dec 20, 2019, 11:03 AM IST
ಧಾರವಾಡ: ಭಾರತೀಯ ಸೇನೆಗೆ ಆಯ್ಕೆಗೊಂಡಿದ್ದ ತಾಲೂಕಿನ ಮದಿಕೊಪ್ಪ ಭೀಮಕ್ಕ ಚವ್ಹಾಣ ಒಂದು ವರ್ಷದ ಟ್ರೇನಿಂಗ್ ಗಾಗಿ ಬೆಂಗಳೂರಿನಲ್ಲಿರುವ ಸೇನಾ ಪೊಲೀಸ್ ತರಬೇತಿ ಕೇಂದ್ರಕ್ಕೆ ಹಾಜರಾಗಿದ್ದಾರೆ.
ಗ್ರಾಮಸ್ಥರು ಹಾಗೂ ಮನೆಯ ಕುಟುಂಬಸ್ಥರು ಭೀಮಕ್ಕಳಿಗೆ ಸನ್ಮಾನಿಸಿ, ಹಾರೈಸಿ ಕಳುಹಿಸಿದ್ದಾರೆ. ಡಿ.17ರಂದು ಬಸ್ ಮೂಲಕ ಮಂಗಳೂರು ವಿಭಾಗಕ್ಕೆ ಹಾಜರಾಗದ ಭೀಮಕ್ಕ, ಮುಂದಿನ ಟ್ರೇನಿಂಗ್ ಪಡೆಯಲು ಬೆಂಗಳೂರಿಗೆ ಹಾಜರಾಗಲು ಬೇಕಾದ ಪ್ರಕ್ರಿಯೆ ಮುಗಿಸಿದ್ದಾರೆ. ಇದಾದ ಬಳಿಕ ಮಂಗಳೂರಿನಿಂದ ಬೆಂಗಳೂರಿನ ಸೇನಾ ಪೊಲೀಸ್ ತರಬೇತಿ ಕೇಂದ್ರಕ್ಕೆ ಡಿ.18ಕ್ಕೆ ಹಾಜರಾಗಿದ್ದು, ಒಂದು ವರ್ಷದ ಟ್ರೇನಿಂಗ್ ಪಡೆಯಲಿದ್ದಾರೆ. ಡಿ.19ರಿಂದ ಟ್ರೇನಿಂಗ್ ಸಹ ಆರಂಭಗೊಂಡಿದೆ. ದೇಶದ ವಿವಿಧ ಭಾಗದಿಂದ ಆಯ್ಕೆಯಾದ 100 ಯುವತಿಯರು ಈ ಕೇಂದ್ರಕ್ಕೆ ಹಾಜರಾಗಿದ್ದು, ರಾಜ್ಯದಿಂದ ಹಾಜರಾಗಿರುವ 8 ಯುವತಿಯರ ಪೈಕಿ ಭೀಮಕ್ಕಳೂ ಒಬ್ಬರು. ಒಂದು ವರ್ಷದ ಅವಧಿಯ ಟ್ರೇನಿಂಗ್ ಮುಗಿದ ಬಳಿಕ ಸೇನೆಯಲ್ಲಿ ಸೇವೆ ಸಲ್ಲಿಸುವ ಭಾಗ್ಯ ಈ ಯುವತಿಯರ ಪಾಲಾಗಲಿದೆ.
ಬಡ ಕುಟುಂಬದ ಪ್ರತಿಭೆ: ಸರಕಾರಿ ಕನ್ನಡ ಶಾಲೆಯಲ್ಲಿ ಕಲಿತ ಭೀಮಕ್ಕಳದ್ದು ಬಡ ಕುಟುಂಬ. ತಂದೆ ಮಹದೇವಪ್ಪ, ತಾಯಿ ನೀಲಮ್ಮ ಕೂಲಿ ಮಾಡಿಯೇ ಮಕ್ಕಳು ಸಲಹುತ್ತಿದ್ದಾರೆ. ಶಾಲೆಯ ರಜೆ ದಿನಗಳಲ್ಲಿ ಪೋಷಕರೊಂದಿಗೆ ಕೂಲಿ ಕೆಲಸವನ್ನೂ ಮಾಡಿ ಪೋಷಕರ ಕಷ್ಟಗಳಿಗೆ ಕೈ ಜೋಡಿಸಿದ್ದ ಈ ಭೀಮಕ್ಕ, ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಬಿಕಾಂ ಪದವೀಧರೆ. ಮದಿಕೊಪ್ಪ ಗ್ರಾಮದಲ್ಲಿ ತಾನು ಕಲಿತ ಶಾಲೆಯಲ್ಲಿ ಕಷ್ಟಪಟ್ಟು ಮಾಡಿದ ವ್ಯಾಯಾಮ, ಪೋಷಕರ ಕಷ್ಟಗಳಿಗೆ ಕೈ ಜೋಡಿಸಲು ಮಾಡಿದ ಕೆಲಸಗಳೇ ಈಗ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
MUST WATCH
ಹೊಸ ಸೇರ್ಪಡೆ
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ