ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣಪತ್ರ
ಕರ್ನಾಟಕದಲ್ಲಿ 6,500 ಜನರಿಗೆ ಡಿಪ್ಲೊಮಾ ತರಬೇತಿ ಪೂರ್ಣ; ದೇಶಕ್ಕೆ ಮೊದಲ ಸ್ಥಾನದ ಹೆಗ್ಗಳಿಕೆ
Team Udayavani, May 10, 2019, 11:59 AM IST
ಧಾರವಾಡ: ಡಿಪ್ಲೊಮಾ ತರಬೇತಿ ಮುಗಿದ ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣಪತ್ರ ವಿತರಣಾ ಸಮಾರಂಭವನ್ನು ಡಾ| ವಿ.ಎಸ್. ಉಷಾರಾಣಿ ಉದ್ಘಾಟಿಸಿದರು.
ಧಾರವಾಡ: ಇಲ್ಲಿಯ ಕೃಷಿ ವಿವಿ ಆವರಣದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ, ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ ತರಬೇತಿ ಮುಗಿದ ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣಪತ್ರ ವಿತರಣಾ ಸಮಾರಂಭ ಗುರುವಾರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಡಾ| ವಿ.ಎಸ್. ಉಷಾರಾಣಿ ಮಾತನಾಡಿ, ದೇಶದಲ್ಲಿ ಇದುವರೆಗೂ 35,000 ಕೃಷಿ ಪರಿಕರ ಮಾರಾಟಗಾರರು ಡಿಪ್ಲೊಮಾ ಪ್ರಮಾಣಪತ್ರ ಪಡೆದಿದ್ದು, ಅದರಲ್ಲಿ ಕರ್ನಾಟಕ ರಾಜ್ಯದಿಂದ 6,500 ಜನ ಡಿಪ್ಲೊಮಾ ತರಬೇತಿ ಮುಗಿಸಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದೆ. ಕೃಷಿ ಪರಿಕರ ಮಾರಾಟಗಾರರು ತರಬೇತಿಯಲ್ಲಿ ಪಡೆದ ಜ್ಞಾನ-ಅನುಭವದ ಆಧಾರದ ಮೇಲೆ ಸ್ಥಾನಿಕವಾಗಿ ರೈತರಿಗೆ ಉತ್ಪಾದನಾ ವೆಚ್ಚ ಕಡಿಮೆ ಮಾಡುವ ಹಾಗೂ ಉತ್ಪಾದಕತೆ ಹೆಚ್ಚಿಸುವ ದಿಸೆಯಲ್ಲಿ ಮಾರ್ಗದರ್ಶನ ಮಾಡಬೇಕು. ಹೊಸ ಸಮಸ್ಯೆಗಳಿಗೆ ಪರಿಹಾರ ಬೇಕಾದಲ್ಲಿ ತರಬೇತಿ ನೀಡಿದ ವಿಜ್ಞಾನಿಗಳೊಡನೆ ಸಲಹೆ ಪಡೆದು ರೈತರಿಗೆ ತಿಳಿಸಬೇಕು ಎಂದರು.
ಇಂಪಾಲ್ದ ಕೇಂದ್ರೀಯ ವಿವಿ ಕುಲಪತಿ ಡಾ| ಎಸ್. ಅಯ್ಯಪ್ಪನ್ ಮಾತನಾಡಿ, ಕೃಷಿ ಅಭಿವೃದ್ಧಿ ಕ್ರಿಯೆಯ ಸರಪಳಿಯಲ್ಲಿ ಕೃಷಿ ಪರಿಕರ ಮಾರಾಟಗಾರರು ಮುಖ್ಯ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಕೃಷಿ ಪರಿಕರಗಳ ಉಪಯೋಗಕ್ಕೆ ನಿಖರವಾದ ಸಲಹೆ-ಸೂಚನೆ ನೀಡಬೇಕು. ಪದವಿ ಪಡೆದ ಕೃಷಿ ಪರಿಕರ ಮಾರಾಟಗಾರರಿಗೆ ಹವಾಮಾನ ಬದಲಾವಣೆ, ಒಣ ಬೇಸಾಯ ಮುಂತಾದ ಆದ್ಯತಾ ವಿಷಯಗಳಲ್ಲಿ ವಿಶೇಷ ತರಬೇತಿಗಳನ್ನು ವಿಶ್ವವಿದ್ಯಾಲಯಗಳು ಹಾಗೂ ಇತರ ಸಂಸ್ಥೆಗಳು ಏರ್ಪಡಿಸುವ ಅವಶ್ಯಕತೆ ಎಂದು ಹೇಳಿದರು.
ಕೃವಿವಿ ಕುಲಪತಿ ಡಾ|ಎಮ್.ಬಿ. ಚೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಂಟು ಜಿಲ್ಲೆಗಳಿಂದ 320 ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಡಾ|ಎಂ.ಎನ್. ಶೀಲವಂತರ, ಡಾ|ಎಸ್.ಬಿ. ದಂಡಿನ, ಡಾ|ಎಂ.ಜಿ. ಚಂದ್ರಕಾಂತ, ಡಾ| ಎ.ಬಿ. ಪಾಟೀಲ ಇದ್ದರು.
ದೇಸಿ ಪುಸ್ತಕ ಹಾಗೂ ದೇಸಿ ಯಶೋಗಾಥೆ ಕುರಿತ ಸಿಡಿ ಬಿಡುಗಡೆಗೊಳಿಸಲಾಯಿತು. ಡಾ| ಎನ್.ಎ. ಎಲೇದಹಳ್ಳಿ ಸ್ವಾಗತಿಸಿದರು. ಡಾ| ಸುರೇಖಾ ಸಂಕನಗೌಡರ ಹಾಗೂ ಡಾ| ಎಸ್. ದೇವೇಂದ್ರಪ್ಪ ನಿರೂಪಿಸಿದರು. ಡಾ|ಎಸ್.ಪಿ. ಹಲಗಲಿಮಠ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ
MUST WATCH
ಹೊಸ ಸೇರ್ಪಡೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ
Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ