ಚಿಣ್ಣರ ಮೇಳದಲ್ಲಿ ಮಕ್ಕಳದ್ದೇ ಸಂತೆ
•ಮಕ್ಕಳ ಜಾತ್ರೆಯಲ್ಲಿ ಗಮನ ಸೆಳೆದ ಜಗ್ಗಲಗಿ-ಡೊಳ್ಳುಕುಣಿತ•ಕಳೆಗಟ್ಟಿದ ಕಲಾ ತಂಡಗಳು
Team Udayavani, May 6, 2019, 2:21 PM IST
ಧಾರವಾಡ : ಪರಿಸರ ತೇರು ಎಳೆದ ಚಿಣ್ಣರು.
ಧಾರವಾಡ: ಇಲ್ಲಿಯ ರಂಗಾಯಣ ಆವರಣದಲ್ಲಿ ನಡೆದಿರುವ ಚಿಣ್ಣರ ಮೇಳದಲ್ಲಿ ರವಿವಾರ ಮಕ್ಕಳ ಜಾತ್ರೆ ಹಾಗೂ ಮಕ್ಕಳ ಸಂತೆ ಜರುಗಿತು.
ಪರಿಸರ ತೇರನ್ನು ಮಕ್ಕಳಿಂದ ಎಳೆಯುವ ಮೂಲಕ ಮಕ್ಕಳ ಜಾತ್ರೆ ಹಾಗೂ ಸಂತೆಗೆ ಚಾಲನೆ ನೀಡಲಾಯಿತು. ಇದರಲ್ಲಿ ಜಗ್ಗಲಗಿ, ಡೊಳ್ಳು ಕುಣಿತ ಕಲಾ ತಂಡಗಳು ಪಾಲ್ಗೊಂಡು ಕಳೆ ಕಟ್ಟಿದವು. ಮಕ್ಕಳ ಪಾಲಕರು ಪಾಲ್ಗೊಂಡು ಪರಿಸರ ತೇರು ಎಳೆಯುವುದನ್ನು ನೋಡಿ ಸಂಭ್ರಮಿಸಿದರು.
ಚಿಣ್ಣರ ಮೇಳದ ಮಕ್ಕಳ ಸಂತೆಯಲ್ಲಿ ಮಕ್ಕಳು ತಮ್ಮ ತೋಟದಲ್ಲಿ ಬೆಳೆದ ಹಣ್ಣು-ಹಂಪಲು ಹಾಗೂ ಮನೆಯಲ್ಲಿ ಸಿದ್ಧಪಡಿಸಿದ ವಿವಿಧ ಬಗೆಯ ತಿಂಡಿ-ತಿನಿಸು, ಮನೆಯಲ್ಲಿ ಸಿದ್ಧಪಡಿಸಿದ ತಂಪು ಪಾನೀಯಗಳು ತಂದು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಚಿಣ್ಣರ ಸಂತೆಯಲ್ಲಿ ರಂಗಾಯಣದ ರೆಪರ್ಟರಿ ಕಲಾವಿದರು ವಿವಿಧ ಪಾತ್ರಗಳಾದ ಭಿಕ್ಷುಕ, ಕಣಿ ಹೇಳುವುವರು, ಜೋಗಮ್ಮನ ವೇಷದವರು, ಬುಡಬುಡಿಕೆ, ಹುಲಿ ವೇಷ, ಪೊಲೀಸ್, ಕಳ್ಳ ಮುಂತಾದ ವೇಷಗಳನ್ನು ಧರಿಸಿ ಗ್ರಾಮೀಣ ಸಂತೆಯಲ್ಲಿ ಈ ತರಹದ ಪಾತ್ರಗಳು ಇರುವುದನ್ನು ಮಕ್ಕಳಿಗೆ ಪರಿಚಯಿಸಿದರು.
ಡಿಸಿ ದೀಪಾ ಚೋಳನ್, ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಪಾಲ್ಗೊಂಡು ವೀಕ್ಷಿಸಿದ್ದು ವಿಶೇಷವಾಗಿತ್ತು. ಶಿಬಿರ ಸಂಚಾಲಕ ಉಮೇಶ ಪಾಟೀಲ ಮತ್ತು ಕಲಾವಿದರು, ರಂಗಾಯಣದ ಆಡಳಿತಾಧಿಕಾರಿಕೆ.ಎಚ್.ಚನ್ನೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
MUST WATCH
ಹೊಸ ಸೇರ್ಪಡೆ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
High Court ಎಚ್ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ