ಛೋಟಾ ಬಾಂಬೆ ಸಿನಿಮಾ ಶೂಟಿಂಗ್ ಹುಬ್ಳೀಲಿ ಶುರು
Team Udayavani, Jun 10, 2019, 1:17 PM IST
ಹುಬ್ಬಳ್ಳಿ: ಛೋಟಾ ಬಾಂಬೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು.
ಹುಬ್ಬಳ್ಳಿ: ವೈಕೆ ಕ್ರಿಯೇಷನ್ಸ್ದಡಿ “ಛೋಟಾ ಬಾಂಬೆ’ ಕನ್ನಡ ಚಲನಚಿತ್ರದ ಚಿತ್ರೀಕರಣ ಇಲ್ಲಿನ ಗೋಕುಲ ರಸ್ತೆಯ ಲೋಟಸ್ ಗಾರ್ಡನ್ದಲ್ಲಿ ರವಿವಾರದಿಂದ ಆರಂಭಗೊಂಡಿತು. ಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ಯುಸುಫ ಖಾನ್ ಹಾಗೂ ಸಹ ನಿರ್ಮಾಪಕ ಅಶಾದ್ ಖಾನ ಕಿತ್ತೂರ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ನಿರ್ದೇಶಕ ಯುಸುಫ ಖಾನ್, ಹೂ ಬಳ್ಳಿ ಎನ್ನುವ ಊರು ಛೋಟಾ ಬಾಂಬೆ ಹೇಗಾಯಿತು. ಈ ಛೋಟಾ ಬಾಂಬೆ ಪುನಃ ಹೂ ಬಳ್ಳಿ ಆಗಲು ಏನು ಮಾಡಬೇಕು ಎಂಬ ಸಂದೇಶ ನೀಡುವುದೇ ಚಿತ್ರದ ಮುಖ್ಯ ತಿರುಳಾಗಿದೆ. 40 ದಿನಗಳ ಕಾಲ ಹುಬ್ಬಳ್ಳಿಯಲ್ಲಿಯೇ ಚಿತ್ರೀಕರಣವಾಗಲಿದೆ. ಇದರಲ್ಲಿ ಐದು ಹಾಡುಗಳಿವೆ ಎಂದರು.
ನಾನು ಇಲ್ಲಿಯೇ ಹುಟ್ಟಿ ಬೆಳೆದವ. ಸದ್ಯ ಮುಂಬಯಿಯಲ್ಲಿ ವಾಸುತ್ತಿದ್ದು, ಬಾಲಿವುಡ್ ನಟ ನಾನಾ ಪಾಟೇಕರ ಅವರ ಜೊತೆ ಕೆಲಸ ಮಾಡಿದ ಅನುಭವವಿದೆ. ಈ ಮೊದಲು ‘ನೀ ನನ್ನ ಜೀವ’ ಚಿತ್ರ ನಿರ್ಮಿಸಿದ್ದೆ. ಉತ್ತರ ಕರ್ನಾಟಕ ಭಾಗದ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ಛೋಟಾ ಬಾಂಬೆ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಾಯಕ, ನಾಯಕಿ ಸೇರಿದಂತೆ ಬಹುತೇಕ ಕಲಾವಿದರು ಈ ಭಾಗದವರೇ ಆಗಿದ್ದಾರೆ ಎಂದು ತಿಳಿಸಿದರು. ನಟರಾದ ಸೂರಜ್ ಸಾಸನೂರ, ಅಭಿಷೇಕ ಜಾಲಿಹಾಳ, ಶೆನೋಯ್ ಕಾಟವೆ, ಯಶಸ್ವಿನಿ ಶೆಟ್ಟಿ, ಶಿವು ಹಿರೇಭೈರಗಿ, ಸುನಿಲ ಪತ್ರಿ, ಸಲೀಂ ಎಂ. ಇನ್ನಿತರೆ ಕಲಾವಿದರು ಹಾಗೂ ಗಣ್ಯರಾದ ಪ್ರಸಾದ ಶೆಟ್ಟಿ, ಪ್ರಶಾಂತ ಶೆಟ್ಟಿ ಮೊದಲಾದವರಿದ್ದರು.
ತಾರಾಗಣ:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
MUST WATCH
ಹೊಸ ಸೇರ್ಪಡೆ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ