ಉನ್ನತ ಗುರಿಯಿದ್ದಾಗ ಏಕಾಗ್ರತೆಯಿರಲಿ: ನಿಖಿಲ್
Team Udayavani, Jun 22, 2018, 5:20 PM IST
ಬೆಳಗಾವಿ: ಜೀವನದಲ್ಲಿ ಒಳ್ಳೆಯ ಗುರಿಯೊಂದಿಗೆ ಸಾಧನೆ ಮಾಡುವಾಗ ಮೊಬೈಲ್, ಇಂಟರ್ನೆಟ್, ವಾಟ್ಸಪ್ ಮೊದಲಾದವುಗಳಿಂದ ಸಾಧ್ಯವಾದಷ್ಟು ದೂರ ಇರಬೇಕು ಎಂದು ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ನಿಖಿಲ್ ನಿಪ್ಪಾಣಿಕರ ಹೇಳಿದರು.
ಸುವರ್ಣ ವಿಧಾನಸೌಧದಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ನಡೆದ ಜಾಣ ಜಾಣೆಯರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜೀವನದಲ್ಲಿ ನಿಶ್ಚಿತ ಗುರಿ ಇರಬೇಕು. ಅದಕ್ಕೆ ಅಡೆತಡೆಗಳು ಹೆಚ್ಚಿದ್ದರೂ ಅದರಿಂದ ಹಿಂದೆ ಸರಿಯಬಾರದು. ನಾನೂ ಸಹ 10 ವರ್ಷದವನಿದ್ದಾಗ ತಂದೆಯನ್ನು ಕಳೆದುಕೊಂಡೆ. ರ್ಯಾಂಕ್ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಗಣಿತ ಹಾಗೂ ವಿಜ್ಞಾನ ಬಹಳ ಕಷ್ಟದ ವಿಷಯಗಳಾಗಿದ್ದವು. ಡಿಪ್ಲೊಮಾ ಸೇರಿಕೊಂಡಾಗ ಉಪನ್ಯಾಸಕರೊಬ್ಬರು ಇದು ನಿನಗೆ ಆಗುವದಿಲ್ಲ ಬಿಟ್ಟುಹೋಗುಎಂದಿದ್ದರು,. ಮುಂದೆ ಅದೇ ಉಪನ್ಯಾಸಕರು ನನಗೆ ಕಾಲೇಜಿನ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಕೊಟ್ಟರು. ಇದು ನನ್ನ ಪರಿಶ್ರಮದ ಫಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ
Hubli: ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ: ಗುಣಧರನಂದಿ ಮಹಾರಾಜ
L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ
Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ
UPSC ಪರೀಕ್ಷೆಯಲ್ಲಿ 101ನೇ ರ್ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ