ಬೆಲೆ ಏರಿಕೆಯೇ ಮೋದಿ ಅಚ್ಚೇ ದಿನ: ದೇಶಪಾಂಡೆ
Team Udayavani, Jun 15, 2021, 5:50 PM IST
ಧಾರವಾಡ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ನಗರದ ನರೇಗಲ್ ಪೆಟ್ರೋಲ್ ಬಂಕ್ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ತೈಲ ಬೆಲೆ ಏರಿಕೆ ಕ್ರಮ ಖಂಡಿಸಿದರು. ಆರ್.ವಿ. ದೇಶಪಾಂಡೆ ಮಾತನಾಡಿ, ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ತೈಲ ಬೆಲೆ 60 ರೂ. ಇತ್ತು. ಈಗ 100 ರೂ. ಆಗಿದೆ. ಮೋದಿ ಮೊದಲು ಬಹಳಷ್ಟು ಟ್ರೆಂಡ್ ಕ್ರಿಯೇಟ್ ಮಾಡಿದ್ದರು. ಈಗ ಆ ಸ್ಥಿತಿ ಉಳಿದಿಲ್ಲ. ದಿನೇ ದಿನೇ ತೈಲ ಬೆಲೆ ಏರಿಕೆ ಆಗುತ್ತಲೇ ಇದ್ದು, ಕೂಡಲೇ ಕೇಂದ್ರ ಸರಕಾರ ಬೆಲೆ ಇಳಿಕೆ ಮಾಡಬೇಕು. ಮೋದಿ ಅವರ ಅಚ್ಛೇ ದಿನ ನಮಗೆ ಬೇಕಾಗಿಲ್ಲ. ಬೆಲೆ ಏರಿಕೆಯೇ ಇವರ ಅಚ್ಛೇ ದಿನ ಆಗಿದೆ ಎಂದು ಟೀಕಿಸಿದರು.
ಕೆಪಿಸಿಸಿಯ ರಾಜು ಎಚ್.ಎಂ., ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಇಸ್ಮಾಯಿಲ್ ತಮಟಗಾರ, ಸ್ವಾತಿ ಮಳಗಿ, ದೀಪಕ್ ಚಿಂಚೋರೆ, ಪ್ರಶಾಂತ ಕೆಕೆರೆ, ಸುರೇಖಾ ಪೂಜಾರ, ಮಂಜುನಾಥ ಭೋವಿ, ವಸಂತ ಅರ್ಕಚಾರಿ, ಆನಂದ್ ಸಿಂಗನಾಥ್, ಸತೀಶ್ ತುರುಮರಿ, ನಾಸಿರ ಖಾದ್ರಿ, ಪ್ರಕಾಶ್ ಭಾವಿಕಟ್ಟಿ ಇನ್ನಿತರರಿದ್ದರು.