ಕೋವಿಡ್ 19 ಎಫೆಕ್ಟ್; ಮಾವು ಮೇಳ ಡೌಟ್‌

ಹೊಸ ಕಲ್ಪನೆಯ ಮ್ಯಾಂಗೋ ಟೂರಿಸ್‌ಂಗೂ ಬೀಳಲಿದೆ ಹೊಡೆತ

Team Udayavani, Apr 27, 2020, 11:46 AM IST

ಕೋವಿಡ್ 19 ಎಫೆಕ್ಟ್; ಮಾವು ಮೇಳ ಡೌಟ್

ಧಾರವಾಡ: ಹಣ್ಣುಗಳ ರಾಜ ಮಾವಿನ ಸುಗ್ಗಿ ಆರಂಭಗೊಂಡಿದೆ.ಆದರೀಗ ಕೋವಿಡ್ 19 ಲಾಕ್‌ ಡೌನ್‌ ಮೇ 3ರ ಬಳಿಕವೂ ಮುಂದುವರಿದರೆ ಮಾವು ಬೆಳೆಗಾರರು ಹಾಗೂ ಗ್ರಾಹಕರಿಗೆ ನಡುವೆ ವೇದಿಕೆಯಾಗಿದ್ದ ಮಾವಿನ ಮೇಳಕ್ಕೂ ಕೊಕ್ಕೆ ಬೀಳಲಿದೆ.

ಹೌದು. ಪ್ರತಿ ವರ್ಷ ಮೇ  ತಿಂಗಳ 2 ಅಥವಾ 3ನೇ ವಾರದಲ್ಲಿ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಈ ಮಾವು ಮೇಳ ನಡೆಯುತ್ತದೆ. ಈ ವೇಳೆ 100-150 ಟನ್‌ ಮಾವು ಮಾರಾಟವಾಗಿ, 1 ಕೋಟಿ ರೂ.ವರೆಗೂ ವಹಿವಾಟು ನಡೆಯುತ್ತಿತ್ತು. ಆದರೆ ಇದೀಗ ಕೋವಿಡ್ 19 ದಿಂದ ಲಾಕ್‌ಡೌನ್‌ ಜಾರಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವ ಕಾರಣ ಈ ಸಲ ಮಾವು ಮೇಳಕ್ಕೆ ಬ್ರೇಕ್‌ ಬೀಳುವ ಸಾಧ್ಯತೆಯೇ ಹೆಚ್ಚಾಗಿದೆ.

ನೇರಾ-ನೇರ: ರೈತರು ಹಾಗೂ ಗ್ರಾಹಕರ ಮಧ್ಯೆ ನೇರವಾಗಿ ವ್ಯಾಪಾರದ ಸಂಪರ್ಕ ಕೊಂಡಿಯಾಗಿ ಕಳೆದ ಒಂದು ದಶಕದಿಂದ ಉತ್ತಮ ವೇದಿಕೆ ಕಲ್ಪಿಸಿದೆ ಈ ಮಾವು ಮೇಳ. ಗ್ರಾಹಕರು ಹಾಗೂ ಮಾವು ಬೆಳೆಗಾರರಿಗೆ ಒಳ್ಳೆಯ ವೇದಿಕೆಯಾಗಿರುವ ಈ ಮೇಳಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ಇದೆ. ಹೀಗಾಗಿ ಕಳೆದ ವರ್ಷ ನಡೆದ ಮೂರು ದಿನಗಳ ಮಾವು ಮೇಳವು ಗ್ರಾಹಕರ ಮತ್ತು ರೈತರ ಒತ್ತಾಸೆಯ ಮೇರೆಗೆ ನಾಲ್ಕು ದಿನಕ್ಕೆ ವಿಸ್ತರಣೆ ಆಗಿತ್ತು. ಇದಲ್ಲದೇ ಆ ನಾಲ್ಕು ದಿನಗಳಲ್ಲಿ ಮಾವಿನ ಹಣ್ಣಿನ ಮಾರಾಟವೂ ಸಹ ಕೋಟಿ ರೂ. ದಾಟಿತ್ತು.

ಈ ಮೇಳದ ಯಶಸ್ಸಿನಿಂದ ಪ್ರೋತ್ಸಾಹ ಪಡೆದಿದ್ದ ತೋಟಗಾರಿಕೆ ಇಲಾಖೆ ಮಾವು ಮೇಳದ ಜೊತೆ-ಜೊತೆಗೆ ಮ್ಯಾಂಗೋ ಟೂರಿಸಂ ಎಂಬ ಹೊಸ ಕಲ್ಪನೆಯನ್ನೂ ಪರಿಚಯಿಸಿತ್ತು. ಈ ಕಲ್ಪನೆ ಅಡಿ ಗ್ರಾಹಕರು ನೇರವಾಗಿ ಮಾವು ಬೆಳೆದ ರೈತರ ತೋಟಕ್ಕೆ ತೆರಳಿ ಖರೀದಿ ಮಾಡಬಹುದಾಗಿತ್ತು. ಎರಡು ವರ್ಷ ಉತ್ತಮ ಸ್ಪಂದನೆ ಸಿಕ್ಕ ಬಳಿಕ ಕಳೆದ ವರ್ಷ ಇದಕ್ಕೆ ಸ್ಪಂದನೆ ಸಿಗಲಿಲ್ಲ. ಇದೀಗ ಕೋವಿಡ್ 19  ಎಫೆಕ್ಟ್ ನಿಂದಾಗಿ ಮಾವಿನ ಮೇಳದ ಜೊತೆ-ಜೊತೆಗೆ ಮ್ಯಾಂಗೋ ಟೂರಿಸಂ ಕೂಡ ಇಲ್ಲದಂತೆ ಆಗುವ ಲಕ್ಷ್ಮಣಗಳೇ ಗೋಚರಿಸುವಂತಾಗಿದೆ.

ಕುಸಿದ ಮಾವಿನ ಫಸಲು: ಜಿಲ್ಲೆಯಲ್ಲಿ 10,500 ಹೆಕ್ಟೇರ್‌ ಪ್ರದೇಶದಲ್ಲಿ ಮಾವಿನ ಬೆಳೆ ಇದ್ದು, ಪ್ರತಿ ಸಲ 80,000 ಸಾವಿರ ಮೆಟ್ರಿಕ್‌ ಟನ್‌ಗಳಷ್ಟು ಮಾವು ಉತ್ಪಾದನೆ ಸಾಮರ್ಥಯವುಂಟು. ಆದರೆ ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪ, ತಡವಾಗಿ ಹೂ ಬಿಟ್ಟಿರುವ ಮಾವು ಹಾಗೂ ಮಳೆ-ಗಾಳಿಗೆ ಉದುರಿರುವ ಕಾರಣ ಶೇ.50ರಷ್ಟು ಮಾವಿನ ಫಸಲಿನ ಕೊರತೆ ಉಂಟಾಗಿದೆ.

ಸದ್ಯ 50,000 ಮೆಟ್ರಿಕ್‌ ಟನ್‌ಗಳಷ್ಟು ಮಾವು ಸಿಗಬಹುದೆಂಬ ಲೆಕ್ಕಾಚಾರವಿದ್ದರೂ ಸಹ ಅದಕ್ಕಿಂತೂ ಕಡಿಮೆ ಪ್ರಮಾಣದಲ್ಲಿ ಮಾವಿನ ಫಸಲು ಸಿಗುವ ಸಾಧ್ಯತೆ ಇದೆ. ಈ ಆತಂಕ ಹಾಗೂ ಲೆಕ್ಕಾಚಾರದ ಮಧ್ಯೆಯೇ ತೋಟಗಾರಿಕೆ ಇಲಾಖೆಯಂತೂ ಮೇ ತಿಂಗಳಲ್ಲಿ ಮಾವು ಮೇಳ ಆಯೋಜನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಸದ್ಯ ಕೋವಿಡ್ 19  ಲಾಕ್‌ ಡೌನ್‌ ತೆರವಿಗಾಗಿ ಕಾಯುವಂತಾಗಿದೆ. ಒಂದು ವೇಳೆ ಲಾಕ್‌ಡೌನ್‌ ತೆರವಾದರೂ ಸಹ ಈ ಸಲ ಮಾವು ಮೇಳ ಆಯೋಜನೆ ಕಷ್ಟಕರ. ಗ್ರಾಹಕರ ಹಿಂದೇಟು ಹಾಗೂ ಈ ಸಲ ಫಸಲೂ ಕೂಡ ಕಡಿಮೆ ಪ್ರಮಾಣದಲ್ಲಿ ಬಂದಿರುವ ಕಾರಣ ಮಾವು ಮೇಳಕ್ಕೆ ಒಂದು ರೀತಿ ಹಿನ್ನಡೆಯಾಗಲಿದೆ.

ಮಾವು ಸುಗ್ಗಿ ಶುರುವಾಗಿದ್ದು, 2 ಡಜನ್‌ ಹಣ್ಣು ಒಳಗೊಂಡ ಬಾಕ್ಸಿಗೆ 500 ರೂ.ಗಳಿಂದ 1 ಸಾವಿರ ಬೆಲೆ ಸದ್ಯಕ್ಕುಂಟು. ಮೇ ತಿಂಗಳಲ್ಲಿ ಸ್ಥಳೀಯ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟು, ಆಗ ಬೆಲೆಯಲ್ಲಿ ಏರಿಳಿತ ಉಂಟಾಗಲಿದೆ. ಇನ್ನೂ ಕೋವಿಡ್ 19  ಎಫೆಕ್ಟ್ ನಿಂದ ಮಾವು ಬೆಳೆಗಾರರಿಗೆ ಪಾಸು ವಿತರಿಸಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕೆಲಸವಂತೂ ಸಾಗಿದೆ. ಜಿಲ್ಲೆಯಲ್ಲಿ 10 ಹಾಪ್‌ಕಾಪ್ಸ್‌ ಮಳಿಗೆಗಳ ಜೊತೆಗೆ ಸಂಚಾರ ಹಾಪ್‌ಕಾಪ್ಸ್‌ ವಾಹನಗಳ ಸೇವೆ ಒದಗಿಸಲಾಗಿದೆ. ಇದಲ್ಲದೇ ಕೆಲ ಮಾವು ರೈತರೇ ಪ್ರತಿ ವರ್ಷದ ತಮ್ಮ ಗ್ರಾಹಕರನ್ನು ಒಳಗೊಂಡ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡಿದ್ದು, ಅದರ ಮೂಲಕವೇ ಗ್ರಾಹಕರಿಗೆ ನೇರವಾಗಿ ಹಣ್ಣು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ 2-3 ರೈತ ಉತ್ಪಾದಕರ ಸಂಘಗಳು ಸಹ ನೇರವಾಗಿ ರೈತರಿಂದ ಮಾವು ಖರೀದಿ ಗ್ರಾಹಕರಿಗೆ ತಲುಪಿಸುವ ಕೆಲಸವೂ ಸಾಗಿದೆ.

ಪ್ರಸಕ್ತ ವರ್ಷ ಶೇ.50ರಷ್ಟು ಮಾವಿನ ಫಸಲಿನ ಕೊರತೆ ಇದ್ದು, ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಬೆಳೆದ ಮಾವು ಬರಲಿದೆ. ಸದ್ಯ 2 ಅಥವಾ 3ನೇ ವಾರದಲ್ಲಿ ಮಾವು ಮೇಳಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಮೇ 3ರ ಬಳಿಕವೂ ಲಾಕ್‌ಡೌನ್‌ ಮುಂದುವರಿದರೆ ಮಾವು ಮೇಳ ಆಯೋಜನೆ ಅಸಾಧ್ಯವಾಗಬಹುದು. ಆಗ ಮಾವು ಮೇಳ ಆಯೋಜನೆಯೂ ಸರಕಾರದ ಮಾರ್ಗಸೂಚಿ ಮೇಲೆ ಅವಲಂಬಿತವಾಗಲಿದೆ.-ರಾಮಚಂದ್ರ ಮಡಿವಾಳ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

 

 -ಶಶಿಧರ ಬುದ್ನಿ

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.