ಅಪ್ಪ-ಅಮ್ಮ ಆಸ್ಪತ್ರೆಯಲ್ಲಿ : ಮಕ್ಕಳಿಗೆ ಅಗತ್ಯ ಸಾಮಗ್ರಿ ಪೂರೈಸಿದ ಕೋವಿಡ್ ಕಾರ್ಯಪಡೆ
Team Udayavani, May 28, 2021, 7:14 PM IST
ಧಾರವಾಡ: ತಂದೆ ಕಿಮ್ಸನಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಆಸರೆಯಾಗಿ ತಾಯಿಯೂ ಅಲ್ಲೇ ಇದ್ದಾರೆ. ಹೀಗಾಗಿ ಈ ಸಂಕಷ್ಟ ಸಮಯದಲ್ಲಿ ದಿನಸಿ ಸಾಮಗ್ರಿ ಹಾಗೂ ತರಕಾರಿ ಇಲ್ಲದೇ ತೊಂದರೆ ಆಗಿದ್ದು, ದಯವಿಟ್ಟು ಸಹಾಯ ಮಾಡುವಂತೆ ಮಾಡಿದ ಮಗಳ ಕೋರಿಕೆಗೆ ಫಲ ಸಿಕ್ಕಿದ್ದು, ಮನೆಗೆ ಅಗತ್ಯ ಸಾಮಗ್ರಿ ದೊರೆತಿದೆ.
ಮುಮ್ಮಿಗಟ್ಟಿ ಗ್ರಾಮದ ಟೋಪೋಜಿ ದೇವರ್ ಅವರು ಕೊರೊನಾ ಸೋಂಕಿತರಾಗಿ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಂಡತಿಯೂ ಅವರಿಗೆ ಆಸರೆಯಾಗಿ ಹುಬ್ಬಳ್ಳಿ ಕಿಮ್ಸನಲ್ಲಿಯೇ ಇದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಮುಮ್ಮಿಗಟ್ಟಿ ಮನೆಯಲ್ಲಿ ಇದ್ದಾರೆ. ಗ್ರಾಮದಲ್ಲಿ ಇವರಿಗೆ ಯಾರೂ ಸಂಬಂಧಿಕರಿಲ್ಲ. ವಿಕಲಚೇತನರಾಗಿರುವ 14 ವರ್ಷದ ಮಗಳು ಕವಿತಾ, ಮನೆಯ ಮುಖ್ಯಸ್ಥರಿಬ್ಬರು ಆಸ್ಪತ್ರೆಯಲ್ಲಿರುವುದರಿಂದ ಮಕ್ಕಳಿಗೆ ಊಟ, ಉಪಹಾರಕ್ಕೆ ದಿನಸಿ, ತರಕಾರಿ ಮತ್ತು ಆಹಾರ ಸಾಮಗ್ರಿಗಳ ಕೊರತೆ ಉಂಟಾಗಿದೆ. ದಯವಿಟ್ಟು ಸಹಾಯ ಮಾಡುವಂತೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಕೋರಿದ್ದಳು. ಇದಕ್ಕೆ ತಕ್ಷಣ ಸ್ಪಂದಿಸಿದ ಮುಮ್ಮಿಗಟ್ಟಿ ಗ್ರಾಪಂ ಕೋವಿಡ್ ಕಾರ್ಯಪಡೆ ಅಗತ್ಯವಿರುವ ದಿನಸಿ, ತರಕಾರಿ, ಆಹಾರ ಸಾಮಗ್ರಿಗಳನ್ನು ಪೂರೈಸಲು ಕ್ರಮ ಕೈಗೊಂಡಿದೆ.
ತಹಶೀಲ್ದಾರ್ ಸಂತೋಷ ಬಿರಾದಾರ ಹಾಗೂ ತಾಪಂ ಇಒ ಎಸ್.ಎಸ್. ಖಾದ್ರೋಳಿ ಅವರ ನಿರ್ದೇಶನದ ಮೇರೆಗೆ ಟೋಪೋಜಿ ದೇವರ್ ಅವರ ಮನೆಗೆ ಪಿಡಿಒ ಜಿ.ಎನ್.ಗಣಾಚಾರಿ, ಗ್ರಾಮ ಲೆಕ್ಕಾ ಧಿಕಾರಿ ಬಸವರಾಜ ಕುಲಾವಿ ಹಾಗೂ ಗ್ರಾಪಂ ಕಾರ್ಯಪಡೆಯ ಸದಸ್ಯರು ಭೇಟಿ ನೀಡಿ ಅವಶ್ಯಕ ದಿನಸಿ, ಆಹಾರ ಸಾಮಗ್ರಿ ಮತ್ತು ತರಕಾರಿ ಪೂರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ