ಸರ್ಕಾರದಿಂದಲೇ ಕೋವಿಡ್‌ ಚಿಕಿತ್ಸಾ ವೆಚ್ಚ ಭರಣ


Team Udayavani, Aug 15, 2020, 2:34 PM IST

ಸರ್ಕಾರದಿಂದಲೇ ಕೋವಿಡ್‌ ಚಿಕಿತ್ಸಾ ವೆಚ್ಚ ಭರಣ

ಹುಬ್ಬಳ್ಳಿ: ಬಡವರು, ಶ್ರೀಮಂತರು ಎನ್ನದೆ ಕೋವಿಡ್‌ -19 ಸೋಂಕಿತರೆಲ್ಲರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸುತ್ತದೆ. ಯಾರಾದರು ಖಾಸಗಿಯಾಗಿ ಚಿಕಿತ್ಸೆ ಪಡೆಯಲು ಮುಂದಾದರೆ ಮಾತ್ರ ಆಸ್ಪತ್ರೆಗಳು ಅಂಥವರಿಗೆ ಸರಕಾರ ನಿಗದಿ ಪಡಿಸಿದ ದರ ಆಕರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಸ್ಥಳೀಯ ಮಜೇಥಿಯಾ ಫೌಂಡೇಶನ್‌ ವತಿಯಿಂದ ನವನಗರದ ದಿ ಕೆಸಿಟಿಆರ್‌ಐ ಆವರಣದಲ್ಲಿ ಹಾಸ್ಪೈಸ್‌ ಪ್ರಾಜೆಕ್ಟ್‌ನಡಿ ನಿರ್ಮಿಸಲಾದ 60 ಹಾಸಿಗೆಯ “ರಮೀಲಾ ಪ್ರಶಾಂತಿ ಮಂದಿರ’ವನ್ನು ಕೋವಿಡ್‌ ಆರೋಗ್ಯ ಕೇಂದ್ರದ ಉದ್ದೇಶಕ್ಕಾಗಿ ಹಸ್ತಾಂತರಿಸುವ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಖಾಸಗಿಯ 300 ಆಸ್ಪತ್ರೆಗಳ ಸಹಯೋಗದೊಂದಿಗೆ ಸದ್ಯ 750 ಬೆಡ್‌ ಗಳಿವೆ. ಕಿಮ್ಸ್‌ ಒಳಗೊಂಡು ಒಂದು ಸಾವಿರಕ್ಕೂ ಅಧಿಕ ಬೆಡ್‌ಗಳು ಸಿದ್ಧವಾಗಿವೆ. ಜಿಲ್ಲೆಯಲ್ಲಿ ಈಗ ಕೋವಿಡ್‌ -19 ಹಾಸಿಗೆಗಳಿಗೆ ಕೊರತೆಯಿಲ್ಲ. ಮಜೇಥಿಯಾ ಫೌಂಡೇಶನ್‌ದವರು 60 ಹಾಸಿಗೆಗಳ ಆರೋಗ್ಯ ಕೇಂದ್ರ ಸ್ಥಾಪಿಸಿರುವುದು ಮತ್ತಷ್ಟು ಅನುಕೂಲವಾಗಿದೆ ಎಂದರು.

ಮಜೇಥಿಯಾ ಫೌಂಡೇಶನ್‌ದವರು ರೆಸಾರ್ಟ್‌ ರೀತಿ ದೇಶದಲ್ಲೇ ಮಾದರಿಯಾದ ಹಾಸ್ಪೆ çಸ್‌ ನಿರ್ಮಿಸುವ ಕನಸಿನ ಯೋಜನೆ ಹೊಂದಿದ್ದಾರೆ. ಅದು ಬೇಗನೆ ಫಲಪ್ರದವಾಗಲಿ ಎಂದರು. ಕೆಸಿಟಿಆರ್‌ಐದ ಡಾ| ಬಿ.ಆರ್‌. ಪಾಟೀಲ ಮಾತನಾಡಿ, ಕೆಸಿಟಿಆರ್‌ಐನ ಕ್ಯಾನ್ಸರ್‌ ಆಸ್ಪತ್ರೆ ಕಳೆದ 43 ವರ್ಷಗಳಿಂದ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ.ಕೋವಿಡ್‌-19 ಹೆಲ್ತ್‌ ಕೇರ್‌ ಸೆಂಟರ್‌ನಲ್ಲಿ, ಮನೆಯಲ್ಲಿ ಇರಲಾಗದವರಿಗೆ ಮೈಲ್ಡ್‌ ಮಾಲ್ಡರೇಟ್‌ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು. ಮಜೇಥಿಯಾ ಫೌಂಡೇಶನ್‌ದವರು ರೋಗಿಗಳಿಗೆ, ಸಿಬ್ಬಂದಿಗೆ ಉಚಿತವಾಗಿ ಉಪಹಾರ, ಊಟ ನೀಡುತ್ತಾರೆ. ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಕೋವಿಡ್‌-19ರಿಂದ ಗುಣಮುಖರಾದ 19 ಜನರು ಪ್ಲಾಸ್ಮಾ ದಾನ ಮಾಡಿದ್ದಾರೆ. ಇದು ಹೆಮ್ಮೆಯ ವಿಷಯ ಎಂದು ಹೇಳಿದರು.

ಮಜೇಥಿಯಾ ಫೌಂಡೇಶನ್‌ ಚೇರ¾ನ್‌ ಜಿತೇಂದ್ರ ಮಜೇಥಿಯಾ ಪ್ರಾಸ್ತಾವಿಕ ಮಾತನಾಡಿ, ಜಿಲ್ಲಾಧಿಕಾರಿಗಳು ರಾಜ್ಯ ಮತ್ತು ಕೇಂದ್ರ ಸರಕಾರದ ನಿಧಿಯನ್ನು ಅವಳಿ ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತಂದು ಮೆಟ್ರೋ ಸಿಟಿಗಳ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಆ ನಿಟ್ಟಿನಲ್ಲಿ ಅವಳಿನಗರದಲ್ಲಿನ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಂಘ-ಸಂಸ್ಥೆಗಳ ಸಹಕಾರ ಪಡೆದುಕೊಳ್ಳಬೇಕು ಎಂದರು.

ಮಜೇಥಿಯಾ ಫೌಂಡೇಶನ್‌ ಅಧ್ಯಕ್ಷೆ ನಂದಿನಿ ಕೆ. ಮಜೇಥಿಯಾ, ಕಶ್ಯಪ್‌ ಮಜೇಥಿಯಾ, ಹಾಸ್ಪೆ ಸ್‌ ಆಡಳಿತ ನಿರ್ದೇಶಕರಾದ ಡಾ| ಕೆ. ರಮೇಶಬಾಬು, ಎಚ್‌.ಆರ್‌. ಪ್ರಹ್ಲಾದರಾವ್‌, ಸಂಜೀವ ಜೋಶಿ, ಡಾ| ವಿ.ಬಿ. ನಿಟಾಲಿ, ಅಮರೇಶ ಹಿಪ್ಪರಗಿ, ಕೆಸಿಟಿಆರ್‌ಐ ಆಡಳಿತಾಧಿಕಾರಿ ಮಂಜುಳಾ ರೂಗಿ, ಸುಭಾಸ ಸಿಂಗ್‌ ಜಮಾದಾರ, ಮಹೇಂದ್ರ ಸಿಂಘಿ ಮೊದಲಾದವರಿದ್ದರು.

ರೋಗಿಗಳಿಗೆ ಏನೆಲ್ಲಾ ಸೌಲಭ್ಯ? : ರಮೀಲಾ ಪ್ರಶಾಂತಿ ಮಂದಿರದಲ್ಲಿ ಕೋವಿಡ್‌-19 ಲಕ್ಷಣ ಹೊಂದಿದ ಮೈಲ್ಡ್‌ ಮಾಲ್ಡರೇಟ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. 65 ವರ್ಷ ಮೇಲ್ಪಟ್ಟ, ಕ್ಯಾನ್ಸರ್‌, ರಕ್ತದೊತ್ತಡ, ಮಧುಮೇಹದಂತಹ ತೊಂದರೆ ಹೊಂದಿದವರಿಗೆ, ಉಸಿರಾಟ ತೊಂದರೆ ಇದ್ದವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಆಕ್ಸಿಜನ್‌ ನೀಡಿದ ಮೇಲೂ ನಿರ್ವಹಣೆ ಆಗದವರಿಗೆ ಹಾಗೂ ರಕ್ತ ತಪಾಸಣೆ ಮಾಡಿದಾಗ ಗಂಭೀರ ಸ್ಥಿತಿ ಹೊಂದಿದವರಿಗೆ ಡಿಸಿಎಚ್‌ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಎಬಿಆರ್‌ಕೆಗೆ ಒಳಗಾದವರಿಗೆ ಸರಕಾರದ ಯೋಜನೆಯಂತೆ ಚಿಕಿತ್ಸೆ ನೀಡಲಾಗುತ್ತದೆ. ಖಾಸಗಿಯಾಗಿ ಚಿಕಿತ್ಸೆ ಪಡೆಯುವವರಿಗೆ ಸರಕಾರ ನಿಗದಿಪಡಿಸಿದ ದರದಂತೆ ಜನರಲ್‌ ವಾರ್ಡ್‌, ಸ್ಪೆಷಲ್‌ ವಾರ್ಡ್‌, ಆಕ್ಸಿಜನ್‌ ವಾರ್ಡ್ ದಂತೆ ಮೂರು ವಿಧಗಳಲ್ಲಿ ಖರ್ಚು ಆಕರಿಸಲಾಗುತ್ತದೆ. 60 ಹಾಸಿಗೆ ಸೌಲಭ್ಯ ಇದ್ದು, 40 ಹಾಸಿಗೆಗೆ ಆಕ್ಸಿಜನ್‌ ಸೌಲಭ್ಯವಿದೆ. ರಿಕ್ರಿಯೇಶನ್‌ ಸೌಲಭ್ಯ, ಅಡುಗೆಗೆ ಪ್ರತ್ಯೇಕ ಕೋಣೆ, ಇನ್ನಿತರ ಸೌಲಭ್ಯಗಳನ್ನು ಕೇಂದ್ರ ಹೊಂದಿದೆ.

ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಹಾಸ್ಪೈಸ್‌ಗಳಿಲ್ಲ. 4ನೇ ಹಂತ ತಲುಪಿದ ಕ್ಯಾನ್ಸರ್‌ ರೋಗಿಗಳಿಗಾಗಿ ಹಾಸ್ಪೈಸ್‌ ನಿರ್ಮಿಸಲಾಗಿದೆ. ಇದನ್ನು ದೇಶದಲ್ಲೇ ಮಾದರಿಯಾದ ರೆಸಾರ್ಟ್‌ ರೀತಿ ಸ್ಥಾಪಿಸಲು ಯೋಜಿಸಲಾಗಿದೆ. ಈಗ ಇದನ್ನು ಕೋವಿಡ್ ದಂತಹ ವಿಷಮ ಸ್ಥಿತಿಯಲ್ಲಿ ಕೋವಿಡ್‌-19 ಆಸ್ಪತ್ರೆಗೆ ಮೀಸಲಿಡಲಾಗಿದೆ. – ಜಿತೇಂದ್ರ ಮಜೇಥಿಯಾ, ಚೇರ್ಮೇನ್, ಮಜೇಥಿಯಾ ಫೌಂಡೇಶನ್‌

ಕಿಮ್ಸ್‌ನಲ್ಲಿ 250, ಜಿಲ್ಲಾಸ್ಪತ್ರೆಯಲ್ಲಿ 125, ತಾಲೂಕಾಸ್ಪತ್ರೆಗಳಲ್ಲಿ 150 ಆಕ್ಸಿಜನ್‌ ಹಾಸಿಗೆಗಳನ್ನು ಒಂದು ತಿಂಗಳ ಅವಧಿಯಲ್ಲಿ ನಿರ್ಮಿಸಲಾಗಿದೆ. ಆದರೆ ಮಜೇಥಿಯಾ ಫೌಂಡೇಶನ್‌ದವರು ಅದಕ್ಕೂ ಕಡಿಮೆ ಅವಧಿಯಲ್ಲಿ 40 ಆಕ್ಸಿಜನ್‌ ಹಾಸಿಗೆ ಸೇರಿ ಒಟ್ಟು 60 ಹಾಸಿಗೆಗಳ ಕೋವಿಡ್‌-19 ಆರೋಗ್ಯ ಕಾಳಜಿ ಕೇಂದ್ರ ನಿರ್ಮಿಸಿದ್ದಾರೆ. ಇದು ರಾಜ್ಯಕ್ಕೆ ಮಾದರಿಯಾಗಿದೆ. ಇನ್ನು ಅವಶ್ಯವೆನಿಸಿದರೆ ಹಾಸಿಗೆಗಳನ್ನು ಹೆಚ್ಚಿಸುವುದಾಗಿಯೂ ತಿಳಿಸಿದ್ದಾರೆ. – ನಿತೇಶ ಪಾಟೀಲ, ಜಿಲ್ಲಾಧಿಕಾರಿ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.