ಕೋವಿಡ್ ಗೆದ್ದು ಬಂದ ದಾಸನೂರ ಕುಟುಂಬದ ಹನ್ನೊಂದು ಸದಸ್ಯರು
Team Udayavani, Jun 10, 2021, 5:06 PM IST
ಹುಬ್ಬಳ್ಳಿ: ಇಲ್ಲಿನ ಅಮರಗೋಳದ ಒಂದೇ ಕುಟುಂಬದ 11 ಸದಸ್ಯರು ಕೋವಿಡ್ ಗೆದ್ದು ಬಂದಿದ್ದಾರೆ. ಧೈರ್ಯಗೆಡದೆ, ಭೀತಿಗೊಳಗಾಗದೆ ಸೂಕ್ತ ಚಿಕಿತ್ಸೆ ಪಡೆದರೆ ಕೊರೊನಾ ಗೆದ್ದು ಬರಬಹುದು ಎಂಬುದಕ್ಕೆ ಈ ಕುಟುಂಬ ಮಾದರಿಯಾಗಿದೆ.
ಇಲ್ಲಿನ ದಾಸನೂರ ಸಮೂಹ ಸಂಸ್ಥೆಯ ಪಾಲುದಾರ ಹಾಗೂ ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಉಳವಪ್ಪ ದಾಸನೂರ ಕುಟುಂಬದ 11 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಉಳವಪ್ಪ ದಾಸನೂರ(50) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಇವರ ಪತ್ನಿ ರೂಪಾ ದಾಸನೂರ(45), ಮಕ್ಕಳಾದ ಮೇಘಾ (18), ಸ್ಪಂದನ(13), ಸುಯೋಗ(9) ಹಾಗೂ ಕುಟುಂಬದ ಸದಸ್ಯರಾದ ಹರೀಶ ದಾಸನೂರ(24), ವರ್ಷಾ ದಾಸನೂರ (20), ಶ್ವೇತಾ ದಾಸನೂರ(31),ರೇಖಾ ದಾಸನೂರ(52), ವಿದ್ಯಾ ದಾಸನೂರ (28), ಚೇತನ (25) ಅವರು ಕೊವೀಡ್ ಸೋಂಕಿಗೆ ಒಳಗಾಗಿದ್ದರೂ ಹೋಮ್ ಕ್ವಾರಂಟ್ನಲ್ಲಿದ್ದು, ಮಹಾಮಾರಿ ವಿರುದ್ಧ ಗೆಲುವು ಸಾಧಿ ಸಿದ್ದಾರೆ.
ಡಾ|ಸಂದೀಪ ವೈ.ಆರ್., ಡಾ| ರಾಘವೇಂದ್ರ ಬೆಳಗಾಂವಕರ ಅವರು ಚಿಕಿತ್ಸೆ ನೀಡಿದ್ದರು. ಸೋಂಕಿತರು ಮೇ 15ರಿಂದ 30ರವರೆಗೆ ಹೋಮ್ ಕ್ವಾರಂಟೈನ್ನಲ್ಲಿದ್ದರು. ಮೇ 31ರಂದು ಎಲ್ಲರಿಗೂ ಮರು ಪರೀಕ್ಷೆ ನಡೆಸಲಾಗಿದ್ದು, ಕೊವೀಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆ ಮೂಲಕ ಅಮರಗೋಳದ ಗ್ರಾಮಸ್ಥರಲ್ಲಿ ಕೋವಿಡ್ ಭಯ ಹೊಡೆದೋಡಿಸುವಲ್ಲಿ ಈ ಕುಟುಂಬದವರು ಮಾದರಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ
Uttara Kannada BJP; ಅನಂತ್ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ
Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ: ರಾಜಸ್ಥಾನಿ ಮಹಿಳೆ !
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು