ಧಾರವಾಡ:ಅಂತಿಮ ಸಂಸ್ಕಾರದ ವೇಳೆ ಎದ್ದು ಕುಳಿತ ಬಾಲಕನ ಶವ!
Team Udayavani, Feb 19, 2017, 9:12 AM IST
ಧಾರವಾಡ : ಇಲ್ಲಿನ ಮನಗುಂಡಿ ಎಂಬಲ್ಲಿ ಪವಾಡ ವೊಂದು ನಡೆದಿದ್ದು, ಬೀದಿ ನಾಯಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ ಬಳಿಕ ಅಂತ್ಯಸಂಸ್ಕಾರ ನಡೆಸುವ ವೇಳೆ ಚಟ್ಟದಿಂದ ಎದ್ದುಕುಳಿತ ವಿಸ್ಮಯಕಾರಿ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
16 ವರ್ಷ ಪ್ರಾಯದ ಕುಮಾರ್ ಮರಡಿ ಎಂಬ ಬಾಲಕ ಬೀದಿ ನಾಯಿ ಗಳ ದಾಳಿಯ ಬಳಿಕ ಮೂರ್ಛೆ ತಪ್ಪಿದ್ದು ಆಸ್ಪತ್ರೆಗೆ ದಾಖಲಾಗಿತ್ತು. ಅಲ್ಲಿ ನಾಡಿ ಮಿಡಿತ ಮತ್ತು ಉಸಿರಾಟ ನಿಂತಿದ್ದರಿಂದ ವೈದ್ಯರು ಮೃತ ಪಟ್ಟಿರುವುದಾಗಿ ಘೋಷಿಸಿದ್ದರು. ಮನೆಯವರು ಶವವನ್ನು ತಂದು ಅಂತಿಮ ಸಂಸ್ಕಾರ ನಡೆಸುತ್ತಿದ್ದ ವೇಳೆ ಕುಮಾರ್ ಚಟ್ಟದಿಂದ ಎದ್ದುಕುಳಿತಿದ್ದಾನೆ.
ಶವ ಎದ್ದುಕುಳಿತದ್ದನ್ನು ನೋಡಿ ಕೆಲವರು ದಂಗಾಗಿ ಹೋದರೆ, ಮನೆಯವರು ಕಳೆದುಕೊಂಡಿದ್ದ ಮಗನನ್ನು ಮತ್ತೆ ಪಡೆದು ಸಂಭ್ರಮ ಪಟ್ಟರು. ಇದೀಗ ಕುಮಾರ್ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ