ಕಡಲೆ ಖರೀದಿ ಕೇಂದ್ರಗಳಿಗೆ ಗ್ರಹಣ
13 ಕೇಂದ್ರಗಳಲ್ಲಿ ಖರೀದಿ ಆರಂಭ ಆಗೇ ಇಲ್ಲ | ಸಾಕಷ್ಟು ರೈತರು ನೋಂದಣಿ ಪ್ರಕ್ರಿಯೆಯಿಂದ ವಂಚಿತ
Team Udayavani, Apr 9, 2020, 11:25 AM IST
ಧಾರವಾಡ: ಹೊಸ ಎಪಿಎಂಸಿ ಆವರಣದಲ್ಲಿ ತೆರೆದಿರುವ ಕಡಲೆ ಖರೀದಿ ಕೇಂದ್ರ ಆರಂಭಗೊಳ್ಳದೇ ಮುಚ್ಚಿರುವುದು
ಧಾರವಾಡ: ಕೊರೋನಾ ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಕಡಲೆ ಖರೀದಿಯನ್ನು ಮತ್ತೆ ಮುಂದುವರಿಸುವಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಆದೇಶ ಹೊರಡಿಸಿದ್ದರೂ ಸಹಕಾರಿ ಸಂಘಗಳು ಹಿಂದೇಟು ಹಾಕುತ್ತಿವೆ. ಏ.6ರಿಂದ ಖರೀದಿ ಮುಂದುವರಿಸುವಂತೆ ಏ.4ರಂದೇ ಆದೇಶಿಸಿದ್ದರೂ ಜಿಲ್ಲೆಯಲ್ಲಿ ತೆರೆದಿರುವ 13 ಕಡಲೆ ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗೇ ಇಲ್ಲ. ರೈತರಿಂದ ಕಡಲೇ ಖರೀದಿ ಪ್ರಕ್ರಿಯೆ ಆರಂಭವಾದ ಕೆಲವೇ ದಿನಗಳಲ್ಲೇ ಕೊರೊನಾ ಲಾಕ್ಡೌನ್ ಹಿನ್ನೆಲೆಯಿಂದ ಮಾ.31 ರವರೆಗೂ ಖರೀದಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸರಕಾರ ಆದೇಶ ನೀಡಲಾಗಿತ್ತು.
ಈ ಅವಧಿ ಮುಗಿದರೂ ಸಹ ಖರೀದಿ ಕೇಂದ್ರಗಳು ಆರಂಭವಾಗೇ ಇಲ್ಲ. ಏ.4ರಂದು ಆದೇಶ ಹೊರಡಿಸಿ ಏ.6ರಿಂದ ಖರೀದಿ ಪ್ರಕ್ರಿಯೆ ಮುಂದುವರಿಸುವಂತೆ ಸೂಚಿಸಿದ್ದರೂ ಆರಂಭವಾಗೇ ಆಗಿಲ್ಲ. ನೋಂದಣಿ ವಿಸ್ತರಣೆಗೆ ರೈತರ ಮನವಿ: ಫೆ.28ರಿಂದ ರೈತರ ನೋಂದಣಿ ಆರಂಭಗೊಳಿಸಿ ಮಾ.15ರವರೆಗೆ ನೋಂದಣಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ರೈತರ ಹೊಲದ ಪಹಣಿಪತ್ರಗಳಲ್ಲಿ ತಾಂತ್ರಿಕ ದೋಷ ಪರಿಣಾಮ ಕಡಲೆ ಬೆಳೆ ನಮೂದು ಆಗದ ಕಾರಣ ಸಾಕಷ್ಟು ರೈತರ ನೋಂದಣಿ ಬಾಕಿ ಉಳಿದಿದೆ. ಹೀಗಾಗಿ ಮಾ.15ಕ್ಕೆ ಮುಗಿದಿದ್ದ ನೋಂದಣಿ ಪ್ರಕ್ರಿಯೆ ಏ.12ರವರೆಗೆ ವಿಸ್ತರಿಸಿ ಏ.24ರವರೆಗೆ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಆದರೆ ಕೊರೊನಾ ಎಫೆಕ್ಟ್ನಿಂದ ಮಾ.31 ರವರೆಗೆ ಖರೀದಿಗೆ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತಗೊಳಿಸಿದ್ದರಿಂದ ರೈತರ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಆದರೆ ಈಗ ಮತ್ತೆ ಖರೀದಿ ಕೇಂದ್ರ ಆರಂಭಿಸಲು ಸೂಚಿಸಿದೆ ಆದರೆ ನೋಂದಣಿಗೆ ಏ.12 ಕೊನೆಯ ದಿನವಾಗಿದೆ. ಇದರಿಂದ ಸಾಕಷ್ಟು ರೈತರು ನೋಂದಣಿ ಪ್ರಕ್ರಿಯೆಯಿಂದ ವಂಚಿತರಾಗುವ ಸಾಧ್ಯತೆ ಇದೆ. ನೋಂದಣಿ ಅವಧಿ ವಿಸ್ತರಿಸಬೇಕೆಂಬ ಬೇಡಿಕೆ ರೈತರಲ್ಲಿದೆ.
ಮಾಸ್ಕ್-ಸ್ಯಾನಿಟೈಸರ್ ಬಳಸಲು ಸೂಚನೆ: ಖರೀದಿ ಕೇಂದ್ರಗಳಲ್ಲಿ ಸಹಕಾರಿ ಸಂಘಗಳು ರೈತರಿಗೆ ನೀರು ಹಾಗೂ ಸ್ಯಾನಿಟೈಜರ್ ಬಳಸುವಿಕೆಯನ್ನು ಕಡ್ಡಾಯಗೊಳಿಸುವಂತೆ ಸೂಚಿಸಲಾಗಿದೆ. ಖರೀದಿ ಕೇಂದ್ರಗಳಲ್ಲಿ ಸಹಕಾರಿ ಸಂಘಗಳು ತಮ್ಮ ಅಧಿಕಾರಿ/ಸಿಬ್ಬಂದಿ ಮತ್ತು ಸಂಬಂಧಿಸಿದವರಿಗೆ ಸೋಪ್, ಗ್ಲೌಜ್, ಮಾಸ್ಕ್ ಸ್ಯಾನಿಟೈಸರ್ ಮತ್ತು ನೀರಿನ ವ್ಯವಸ್ಥೆ ಕಡ್ಡಾಯವಾಗಿ ಕಲ್ಪಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಸ್ಯಾನಿಟೈಜರ್ ಹಾಗೂ ಮಾಸ್ಕ್ಗಳ ಕೊರತೆ ಒಂದೆಡೆಯಾದರೆ ಅದಕ್ಕಾಗಿ ಮತ್ತಷ್ಟು ಹಣ ವ್ಯಯಿಸಬೇಕಾದ ಸ್ಥಿತಿಯಲ್ಲಿವೆ ಸಹಕಾರಿ ಸಂಘಗಳು. ಇದರ ಜತೆಗೆ ಖರೀದಿ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಫಲವಾದರೆ ಪೊಲೀಸ್ ಸಿಬ್ಬಂದಿ ವ್ಯವಸ್ಥೆ ಪಡೆಯಲು ತಿಳಿಸಲಾಗಿದೆ. ಒಂದು ವೇಳೆ ಖರೀದಿ ಕೇಂದ್ರದ ಸುತ್ತಮುತ್ತ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದರೆ ತಕ್ಷಣವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಡ್ಡಾಯವಾಗಿ ಖರೀದಿ ಕೇಂದ್ರ ಸ್ಥಗಿತಗೊಳಿಸಲು ತಿಳಿಸಲಾಗಿದೆ.
ದಿನಕ್ಕೆ ಗರಿಷ್ಠ 50 ರೈತರಿಂದ ಖರೀದಿ
ಪ್ರತಿ ದಿನ ಬೆಳಿಗ್ಗೆ 25 ಮತ್ತು ಮಧ್ಯಾಹ್ನ 25ರಂತೆ ಒಟ್ಟು ಗರಿಷ್ಠ 50 ರೈತರಿಂದ ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ. ಈ ವೇಳೆ ಖರೀದಿ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸದೇ ಒಬ್ಬರಿಂದ ಮತ್ತೂಬ್ಬರ ಮಧ್ಯೆ ಒಂದು ಮೀಟರ್ ಅಂತರದಲ್ಲಿ ಗೆರೆ ಎಳೆದು ಸಾಮಾಜಿತ ಅಂತರ ಕಾಯ್ದುಕೊಳ್ಳುವಂತೆ ಕಡ್ಡಾಯವಾಗಿ ಸೂಚಿಸಲಾಗಿದೆ. ಖರೀದಿ ಕೇಂದ್ರಗಳಲ್ಲಿ ರೈತರು ಮಾರಾಟ ಮಾಡಿದ ತಕ್ಷಣವೇ ಅಲ್ಲಿಂದ ತೆರಳಲು ಸೂಚಿಸಬೇಕು. ಖರೀದಿ ಕೇಂದ್ರಗಳಲ್ಲಿನ ಸಿಬ್ಬಂದಿ, ರೈತರು ಹಾಗೂ ಹಮಾಲರು ತಪ್ಪದೇ ಮಾಸ್ಕ್ ಕಡ್ಡಾಯವಾಗಿ ಧರಿಸಲು ಸೂಚಿಸಲಾಗಿದೆ.
ಏ.6ರಿಂದಲೇ ಕಡಲೇ ಖರೀದಿ ಮುಂದುವರಿಸುವಂತೆ ಆದೇಶ ಬಂದಿದ್ದು, ಅದರಂತೆ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಎಲ್ಲ ಖರೀದಿ ಕೇಂದ್ರಗಳಿಗೆ ಸೂಚಿಸಲಾಗಿದೆ. ಕೆಲವು ಕಡೆ ಖರೀದಿ ಕೇಂದ್ರಗಳು ಇನ್ನೂ ಆರಂಭವಾಗಿಲ್ಲ. ಎಲ್ಲ ಖರೀದಿ ಕೇಂದ್ರ ಆರಂಭಿಸಲು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುವುದು.
ಸಚಿನ್ ಪಾಟೀಲ,
ಮ್ಯಾನೇಜರ್, ರಾಜ್ಯ ಮಾರಾಟ ಮಹಾಮಂಡಳ
ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ