ಲಾಳಗಟ್ಟಿ ಎಲುಬು ಗಟ್ಟಿ

­ತುಂಡಾದ ಎಲುಬಿಗೆ ಲಾಳಗಟ್ಟಿ ನಾಟಿ ಔಷಧ ಮದ್ದು; ­ಉಚಿತ ಔಷಧ ನೀಡುತ್ತಿರುವ ರೈತ ಕುಟುಂಬ; ಶತಮಾನಗಳಿಂದ ಸದ್ದಿಲ್ಲದೇ ಸೇವೆ

Team Udayavani, Jul 15, 2022, 3:34 PM IST

17

ಧಾರವಾಡ: ಇವರು ಕೊಡುವ ವನಸ್ಪತಿ ಮಾತ್ರೆಗಳಿಗೆ ಮುರಿದ ಎಲುಬು ಸಾರ್ಡರ್‌ ಆಗುತ್ತವೆ. ಮನುಷ್ಯರು ಮಾತ್ರವಲ್ಲ, ನಾಯಿ, ಎತ್ತು, ಎಮ್ಮೆಗಳ ಮುರಿದ ಕಾಲುಗಳನ್ನು ಸರಿ ಮಾಡುವ ಶಕ್ತಿ ಈ ಮಾತ್ರೆಗಳಿಗಿದೆ. ನಾಟಿ ವೈದ್ಯರಾದರೂ ಬಡವರಿಂದ ಹಣ ಪಡೆಯಲ್ಲ. ಶತಮಾನದಿಂದಲೂ ಔಷಧಿ ನೀಡಿ ಸೈ ಎನಿಸಿಕೊಂಡಿದೆ ಈ ರೈತ ಕುಟುಂಬ.

ಹೌದು. ದಿನದ ಜಂಜಾಟದಲ್ಲಿ ಮಕ್ಕಳು, ಹರೆಯದವರು, ವಯೋವೃದ್ಧರು ಅನೇಕ ಅವಘಡಗಳಿಗೆ ಒಳಗಾಗಿ ಕೈ-ಕಾಲು ಎಲುವು ಮುರಿದುಕೊಳ್ಳುವುದು ಸಾಮಾನ್ಯ. ಹೀಗೆ ಎಲುವುಗಳು ಮುರಿದಾಗ ದೊಡ್ಡ ದೊಡ್ಡ ಆಸ್ಪತ್ರೆಗಳು, ವೈದ್ಯರನ್ನು ಸಂಪರ್ಕಿಸಿ ಮುರಿದ ಜಾಗಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದೇ ಹೆಚ್ಚು. ಆದರೆ ಧಾರವಾಡ ಸಮೀಪದ ಲಾಳಗಟ್ಟಿ ಗ್ರಾಮದ ರಾಮಚಂದ್ರಗೌಡರ ಮಗ ಆನಂದಗೌಡರು ಮತ್ತು ಅವರ ಕುಟುಂಬ ನೀಡುವ ನಾಟಿ ಔಷಧಿ ಸುತ್ತಲಿನ ಹಳ್ಳಿಗಳು ಅಷ್ಟೇಯಲ್ಲ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಅನೇಕ ಬಡವರಿಗೆ ಮುರಿದು ಎಲುಬು ಸರಿಯಾಗಿದ್ದು ಮರಳಿ ಅವರಿಗೆಲ್ಲ ಬದುಕು ಕೊಟ್ಟಿದೆ. ಮುರಿದ ಕೈ-ಕಾಲುಗಳು ಪುನಃ ಮೊದಲಿನಂತೆಯೇ ಗಟ್ಟಿಯಾಗಿ ಬೆಸೆದುಕೊಳ್ಳುವ ಈ ವನಸ್ಪತಿ ಔಷಧಿಯೊಂದನ್ನು ಸ್ವತಃ ಈ ಕುಟುಂಬ ಸದಸ್ಯರೇ ತಯಾರಿಸುತ್ತಿದ್ದಾರೆ. ಶತಮಾನಗಳ ಹಿಂದಿನಿಂದಲೂ ಈ ಕುಟುಂಬದವರು ಮಾತ್ರವೇ ಔಷಧಿಯನ್ನು ತಮ್ಮದೇ ಸೂತ್ರದಿಂದ ಸಿದ್ಧಪಡಿಸಿಕೊಂಡು ಜನರಿಗೆ ಉಚಿತವಾಗಿ ನೀಡುತ್ತ ಬಂದಿದ್ದಾರೆ.

ಏನದು ಸಾರ್ಡರ್‌ ಔಷಧಿ: ಧಾರವಾಡದಿಂದ ಪಶ್ಚಿಮ ಭಾಗದಲ್ಲಿ 18 ಕಿ.ಮೀ.ದೂರದಲ್ಲಿರುವ ಲಾಳಗಟ್ಟಿ ಗ್ರಾಮ ಅರಣ್ಯಕ್ಕೆ ಹೊಂದಿಕೊಂಡು ಇರುವ ಗ್ರಾಮ. ಈ ಅರಣ್ಯದಲ್ಲಿ ಸಿಕ್ಕುವ ವನಸ್ಪತಿ ಬಳ್ಳಿಗಳನ್ನು, ಮೂಲಿಕೆಗಳನ್ನು ಸಂಗ್ರಹಿಸಿ ಅದಕ್ಕೆ ತಮ್ಮ ಔಷಧಿ ಸೂತ್ರಗಳನ್ವಯ ಇತರೆ ಅಂಶಗಳನ್ನು ಮಿಶ್ರಣ ಮಾಡುತ್ತಾರೆ. ಈ ಮಾತ್ರೆಗಳನ್ನು ಹುಣ್ಣಿಮೆ, ಅಮವಾಸ್ಯೆ, ತಿಥಿ ಮತ್ತು ಉತ್ತಮ ಮುಹೂರ್ತಗಳಿಗೆ ತಕ್ಕಂತೆ ಅನ್ಯ ವನಸ್ಪತಿಗಳನ್ನು ಬೆರೆಸಿ ಕವಳಿ ಹಣ್ಣಿನ ಗಾತ್ರದಷ್ಟು ಮಾತ್ರೆ ಸಿದ್ಧಗೊಳಿಸುತ್ತಾರೆ. ಒಮ್ಮೆ ಸಿದ್ಧಗೊಳಿಸಿದ ಮಾತ್ರೆಗಳನ್ನು ತಿಂಗಳುಗಟ್ಟಲೇ ಬಳಕೆ ಮಾಡುವ ವಿಧಾನಗಳು ಈ ಕುಟುಂಬಕ್ಕೆ ತಿಳಿದಿದೆ. ಗ್ರಾಮ ಮತ್ತು ಸುತ್ತಲಿನ ಗ್ರಾಮಗಳ ಜನರಲ್ಲಿ ಆಗಾಗ ನಡೆಯುವ ಅವಘಡಗಳಿಂದಾಗಿ ಜನರು ಇಲ್ಲಿಗೆ ಬಂದು ಮಾತ್ರೆ ತೆಗೆದುಕೊಂಡು ಹೋಗುತ್ತಾರೆ. ಪ್ರತಿ ರವಿವಾರ, ಗುರುವಾರ ಮಾತ್ರವೇ ಮಾತ್ರೆಗಳನ್ನು ಕೊಡುತ್ತಾರೆ. ಎಲುಬು ಶರೀರದ ಯಾವುದೇ ಭಾಗದಲ್ಲಿ ಮುರಿದಿದ್ದರೂ ಸರಿ, ಐದು ದಿನಗಳ ಕಾಲ ಈ ಮಾತ್ರೆಗಳನ್ನು ಸೇವಿಸಿದರೆ ಮುಗಿಯಿತು. ಅದು ಕಬ್ಬಿಣದ ಸಾರ್ಡರ್‌ ಮಾಡಿದಷ್ಟೇ ಗಟ್ಟಿಯಾಗಿ ಬಿಡುತ್ತದೆ. ಮಾತ್ರೆ ನುಂಗುವ ಐದು ದಿನಗಳ ಕಾಲ ಆಹಾರ ಸೇವನೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೇಕೆ ಹಾಲು ಅಥವಾ ದೇಶಿ ಆಕಳ ಹಾಲಿನಲ್ಲಿ ಮಾತ್ರವೇ ಈ ಮಾತ್ರೆಗಳನ್ನು ನುಂಗಬೇಕು.

ದೇಶಿಜ್ಞಾನದಿಂದ ಸಿದ್ಧಗೊಂಡ ಮಾತ್ರೆ: ಈ ಕುಟುಂಬದಲ್ಲಿ ಯಾರೂ ಕೂಡ ವೈದ್ಯಶಾಸ್ತ್ರ ಅಥವಾ ಆಯುರ್ವೇದ ಶಾಸ್ತ್ರಗಳನ್ನು ಅಧ್ಯಯನ ಮಾಡಿಲ್ಲ. ಶತಮಾನಗಳ ಹಿಂದೇ ಈ ಕುಟುಂಬದ ಯಜಮಾನರೊಬ್ಬರು ಸ್ವಯಂ ಪ್ರಯೋಗಗಳನ್ನು ಮಾಡುತ್ತ ಶೋಧಿಸಿದ ಔಷಧಿ ಇದು. ಕೂಡರಕನ ಬಳ್ಳಿ ಎಂದು ಹಳ್ಳಿಗರಿಂದ ಕರೆಯಲ್ಪಡುವ ವಿಶಿಷ್ಟ ಬಗೆಯ ವನಸ್ಪತಿಯೊಂದು ಲಾಳಗಟ್ಟಿ ಸುತ್ತಲಿನ ಕಾಡಿನ ಪ್ರದೇಶದಲ್ಲಿ ಲಭ್ಯವಿದೆ. ಈ ಬಳ್ಳಿಯನ್ನು ಎರಡು ತುಂಡು ಮಾಡಿ ಒಗೆದರೂ ಆ ತುಂಡುಗಳು ಮರಳಿ ಪರಸ್ಪರ ಸೇರಿಕೊಳ್ಳುವ ಗುಣ ಹೊಂದಿದೆ ಎನ್ನಲಾಗಿದೆ. ಇದೇ ಬಳ್ಳಿಯನ್ನು ಬಳಸಿಕೊಂಡು ಇದಕ್ಕೆ ಇತರೆ ವನಸ್ಪತಿಗಳನ್ನು ಸಮ ಮಿಶ್ರಣ ಮಾಡಿ ಮಾತ್ರೆ ಸಿದ್ಧಗೊಳಿಸುತ್ತಾರೆ ಎನ್ನಲಾಗಿದೆ. ಅಪ್ಪಟ ದೇಶಿ ಔಷಧಿ ಇದಾಗಿದ್ದು, ಇದರ ಸೇವನೆಯಿಂದ ಯಾವುದೇ ರೀತಿಯ ಬೇರೆ ದುಷ್ಪರಿಣಾಮಗಳು ಇಲ್ಲ. ಹೀಗಾಗಿ ದೊಡ್ಡ ದೊಡ್ಡ ಶ್ರೀಮಂತರು ಸಹ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬಂದು ಲಾಳಗಟ್ಟಿ ಔಷಧಿ ಪಡೆದು ಹೋಗುತ್ತಿದ್ದಾರೆ.

ದೇಶಿಜ್ಞಾನ ಪರಂಪರೆ ಕೊಂಡಿ: ಹೆಚ್ಚು ಕಡಿಮೆ ಈವರೆಗೂ ಲಕ್ಷಕ್ಕೂ ಅಧಿಕ ಜನರಿಗೆ ಗೌಡರ ಕುಟುಂಬ ಈ ವನಸ್ಪತಿ ಔಷಧಿ ಕೊಟ್ಟಿರಬೇಕು. ಆ ಪೈಕಿ ಶೇ.100ಕ್ಕೆ ನೂರರಷ್ಟು ಜನರು ಎಲುಬು ಬಾಧೆಗಳಿಂದ ಮುಕ್ತಿ ಹೊಂದಿ ಗುಣಮುಖರಾಗಿದ್ದಾರೆ. ಇದೀಗ ಆನಂದಗೌಡರ ನಂತರ ಅವರ ತಲೆಮಾರಿನ ಹೊಸ ಪೀಳಿಗೆಗೂ ಮನೆಯ ಹಿರಿಯರು ಈ ಔಷಧಿ ಸಿದ್ಧಗೊಳಿಸುವ ವಿಧಾನ ತಿಳಿಸಿ ಕೊಡಲಾಗಿದೆ. ಅಷ್ಟೇಯಲ್ಲ, ಇದೇ ಕುಟುಂಬದ ಇನ್ನೊಂದು ಕವಲು ಧರ್ಮಗೌಡ ಪಾಟೀಲ ಮತ್ತು ಅವರ ಮಕ್ಕಳು, ಮೊಮ್ಮಕ್ಕಳು ಕೂಡ ಇದೇ ಔಷಧಿಯನ್ನು ಸಿದ್ಧಗೊಳಿಸುವ ಸೂತ್ರ ಕಲಿತಿದ್ದು ಅವರು ಕೂಡ ಜನರಿಗೆ ಉಚಿತವಾಗಿ ಔಷಧಿ ನೀಡುತ್ತಾರೆ.

ಗೌಡರ ಕುಟುಂಬದಿಂದ ಸಮಾಜ ಸೇವೆ

ಶತಮಾನಗಳಿಂದಲೂ ಲಾಳಗಟ್ಟಿ ಗೌಡರ ಕುಟುಂಬ ಈ ಔಷಧಿಯನ್ನು ಜನರಿಗೆ ನೀಡುತ್ತ ಬಂದಿದೆ. ಈ ವರೆಗೂ ಸಾವಿರ ಸಾವಿರ ಜನರು ಈ ಮಾತ್ರೆ ಪಡೆದು ಗುಣಮುಖರಾಗಿದ್ದಾರೆ. ಕೈ,ಕಾಲು ಮುರಿದವರು, ಒಟ್ಟಾರೆ ದೇಹದ ಯಾವುದೇ ಭಾಗದಲ್ಲಿ ಮುರಿದ ಎಲುವುಗಳನ್ನು ಅತೀ ಶೀಘ್ರವೇ ಬೆಸೆದು ಹಾಕುವ ಈ ವನಸ್ಪತಿ ಔಷಧಿ ನೀಡುವುದಕ್ಕೆ ಪರ್ಯಾಯವಾಗಿ ಹೆಚ್ಚಿನ ಹಣವನ್ನು ಈ ಕುಟುಂಬ ಪಡೆಯುವುದಿಲ್ಲ. ಟೆಂಗಿನಕಾಯಿ, ಚುರುಮರಿ, ಎಲೆ ಅಡಿಕೆ ತಂದರೆ ಸಾಕು. ಇದೀಗ ಗೌಡರ ಕುಟುಂಬದ ಆನಂದಗೌಡ ಪಾಟೀಲರು ಈ ಔಷಧಿ ನೀಡುತ್ತಿದ್ದಾರೆ. ಕೈ,ಕಾಲು ಮುರಿಯುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಸಾವಿರಾರು ರೂ.ಹಣ ಪೀಕುತ್ತಿರುವ ಇಂದಿನ ದಿನಗಳಲ್ಲಿಯೂ ತಮ್ಮ ಕುಟುಂಬವೇ ಶೋಧಿಸಿದ ಔಷಧಿಯೊಂದನ್ನು ಸಮಾಜ ಸೇವೆ ಎಂಬಂತೆ ನೀಡುತ್ತಿರುವ ಈ ಕುಟುಂಬದ ಬಗ್ಗೆ ಈಗಲೂ ಸುತ್ತಲಿನ ಹಳ್ಳಿಗಳಲ್ಲಿ ಅಪಾರ ಗೌರವವಿದೆ.

ನಮ್ಮ ತಾತ, ಮುತ್ತಾತರ ಕಾಲದಿಂದಲೂ ನಮ್ಮ ಮನೆಯಲ್ಲಿ ಎಲುವು ಬೆಸೆಯುವ ಔಷಧಿ ಸಿದ್ಧಗೊಳಿಸಿ ನೀಡುತ್ತ ಬಂದಿದ್ದೇವೆ. ಇದನ್ನು ನನ್ನ ತಂದೆ ನನಗೆ ಕಲಿಸಿದ್ದಾರೆ. ನಾನು ನನ್ನ ಮಕ್ಕಳಿಗೆ ಕಲಿಸಿದ್ದೇನೆ. ಇದು ನೊಂದವರ ಕಣ್ಣೀರೊರೆಸುವ ಸೇವೆಯಷ್ಟೆ. –ಆನಂದಗೌಡ ಪಾಟೀಲ, ಎಲುಬು ಬೆಸುಗೆ ಔಷಧಿ ನೀಡುವ ನಾಟಿ ವೈದ್ಯರು

ಕಾರು ಅಪಘಾತದಲ್ಲಿ ನನ್ನ ಬಲಕಾಲಿನ ತೊಡೆಯ ಎಲುಬು ಎರಡು ತುಂಡಾಗಿತ್ತು. ವೈದ್ಯರು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಿದ್ದರು. ಆದರೆ ಅದು ಅಷ್ಟಾಗಿ ಗಟ್ಟಿಯಾಗಿರಲಿಲ್ಲ. ಲಾಳಗಟ್ಟಿ ಔಷಧಿ ಸೇವಿಸಿದ ಒಂದೇ ವಾರದಲ್ಲಿ ಗಟ್ಟಿಯಾಯಿತು. –ಚೆನ್ನಬಸಪ್ಪ ಅರಳಿಹೊಂಡ, ಕಲಘಟಗಿ ನಿವಾಸಿ

-ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.