ಮದ್ಯ ಸೇವಿಸಿ ಲಾರಿ ಚಾಲನೆ; ಚಾಲಕ ಪೊಲೀಸ್ ವಶಕ್ಕೆ
Team Udayavani, Jun 18, 2019, 1:33 PM IST
ಹುಬ್ಬಳ್ಳಿ: ಲಾರಿಯನ್ನು ಸಂಚಾರಿ ಪೊಲೀಸರೇ ಚಾಲನೆ ಮಾಡಿಕೊಂಡು ಹೋದರು.
ಹುಬ್ಬಳ್ಳಿ: ಮದ್ಯ ಸೇವಿಸಿ ಲಾರಿ ಚಾಲನೆ ಮಾಡುತ್ತಿದ್ದ್ದ ಚಾಲಕನು ಕರ್ತವ್ಯದಲ್ಲಿದ್ದ ಮಹಿಳಾ ಸಂಚಾರ ಪೇದೆ ಮಾತು ಕೇಳದೆ ಮುನ್ನುಗ್ಗಿದ್ದಲ್ಲದೆ, ಕೋರ್ಟ್ ವೃತ್ತದಲ್ಲಿ ಎರಡು ಬಾರಿ ರೌಂಡ್ ಚಲಾಯಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಬಾಗಲಕೋಟೆ ತಾಲೂಕು ರಾಮತಾಳ ಗ್ರಾಮದ ಯಮನೂರ ಕೆ. ಗೌಡರ ಎಂಬಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತ ಚನ್ನಮ್ಮ ವೃತ್ತದಿಂದ ಕ್ಲಬ್ ರಸ್ತ್ತೆ ಮಾರ್ಗವಾಗಿ ಬಾಗಲಕೋಟೆಗೆ ಹೊರಟಿದ್ದ. ಆದರೆ ದೇಸಾಯಿ ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಈ ಮಾರ್ಗ ಬಂದ್ ಆಗಿದೆ. ಕರ್ತವ್ಯದಲ್ಲಿದ್ದ ಮಹಿಳಾ ಸಂಚಾರ ಪೇದೆಯೊಬ್ಬರು ರಸ್ತೆ ಬಂದ್ ಆಗಿದೆ. ಸಾಯಿ ಮಂದಿರ ಮಾರ್ಗವಾಗಿ ಹೋಗಬೇಕು ಎಂದು ಹೇಳಿದರೂ ಕೇಳದೆ, ನೀವೆಲ್ಲ ರಸ್ತೆ ಬಂದ್ ಮಾಡಿಕೊಂಡರೆ ನಾವು ಹೋಗೋದು ಹೇಗೆ. ನಾನು ಹೀಗೆಯೇ ಹೋಗುತ್ತೇನೆ ಎಂದು ಕ್ಲಬ್ ರಸ್ತೆ ಮುಖಾಂತರ ಹೋಗಲುಮುಂದಾಗಿದ್ದಾನೆ. ಮತ್ತೆ ಮಹಿಳಾ ಪೇದೆಯು ವಾಹನ ತಡೆದಾಗ ಅಲ್ಲಿಯೇ ಕೋರ್ಟ್ ವೃತ್ತದಲ್ಲಿ ಲಾರಿಯನ್ನು ಎರಡು ರೌಂಡ್ ಸುತ್ತಾಡಿಸಿದ್ದಾನೆ. ಆಗ ಸ್ಥಳಕ್ಕೆ ಇನ್ನಿತರೆ ಸಂಚಾರ ಠಾಣೆ ಪೊಲೀಸರು ಆಗಮಿಸಿ ಆತನನ್ನು ತಡೆದಾಗ ಮದ್ಯ ಸೇವಿಸಿದ್ದು ಗೊತ್ತಾಗಿದೆ. ನಂತರ ಅವನನ್ನು ವಶಕ್ಕೆ ಪಡೆದು, ಲಾರಿಯನ್ನು ಹಿರಿಯ ಸಂಚಾರ ಪೇದೆ ಚಲವಾದಿ ಅವರು ಪೂರ್ವ ಸಂಚಾರ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಪೂರ್ವ ಸಂಚಾರ ಠಾಣೆಯಲ್ಲಿ ಯಮನೂರ ವಿರುದ್ಧ ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ