ಒಣಮಹೋತ್ಸವ!


Team Udayavani, Jul 7, 2019, 9:26 AM IST

hubali-tdy-1..

ಧಾರವಾಡ: ನಗರದಲ್ಲಿ ಗಾರ್ಡ್‌ ಹಾಕಿ ನೆಟ್ಟಿರುವ ಸಸಿಗಳು ಬದುಕುಳಿದಿರುವುದು.

ಧಾರವಾಡ: ವನಮಹೋತ್ಸವ ಸೇರಿದಂತೆ ಪ್ರತಿವರ್ಷ ಮಳೆಗಾಲಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಸಿ ನೆಟ್ಟರೂ, ಹಸಿರು ಹೊನ್ನು ಮಾತ್ರ ಎಲ್ಲಿಯೂ ಕಾಣುತ್ತಿಲ್ಲ. ಇತ್ತ ಸರ್ಕಾರದಿಂದ ಸಸಿ ನೆಡಲು ಇಟ್ಟ ಖಜಾನೆಯೂ ಖಾಲಿಯಾಗುತ್ತಿದೆ. ಅತ್ತ ಸಸಿಗಳು ನೆಟ್ಟ ನಾಲ್ಕು ತಿಂಗಳಲ್ಲಿ ಸತ್ತು ಹೋಗುತ್ತಿವೆ. ಹಾಗಿದ್ದರೆ ನೆಟ್ಟ ಸಸಿಗಳು ಎಲ್ಲಿ? ಇದ್ದ ಸಸಿಗಳ ಕಾಳಜಿ ಯಾರಿದ್ದು? ಇಂತಹ ಹತ್ತಾರು ಪ್ರಶ್ನೆಯನ್ನು ವನಮಹೋತ್ಸವ ಮತ್ತು ಸರ್ಕಾರದ ಸಸಿ ನೆಡುವ ವಿವಿಧ ಯೋಜನೆಗಳು ಹುಟ್ಟುಹಾಕುತ್ತಿವೆ. ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷದಲ್ಲಿ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಸಸಿ ನೆಟ್ಟಿರುವುದಕ್ಕೆ ಖಾತೆ ಪುಸ್ತಕದಲ್ಲಿ ಲೆಕ್ಕವಿದೆ. ಆದರೆ ರಸ್ತೆಬದಿ, ಸಾರ್ವಜನಿಕ ಸ್ಥಳಗಳು, ರೈತರ ಹೊಲಗಳು, ಉದ್ಯಾನವನಗಳು ಮತ್ತು ಶಾಲೆ ಆವರಣಗಳಲ್ಲಿ ಮಾತ್ರ ಇನ್ನೂ ಹಸಿರು ಸರಿಯಾಗಿ ಕಾಣಿಸುತ್ತಿಲ್ಲ. ಯಾಕೆ ಅಂತೀರಾ? ನೆಟ್ಟ ನೂರು ಸಸಿಗಳಲ್ಲಿ ಬದುಕುಳಿಯುತ್ತಿರುವುದು ಬರೀ ಆರು ಮಾತ್ರವಂತೆ. ಇದು ಪರಿಸರ ತಜ್ಞರು ಹೇಳುತ್ತಿರುವ ಲೆಕ್ಕ. ಆದರೆ ಅರಣ್ಯ ಇಲಾಖೆ ಮಾತ್ರ ನೆಟ್ಟ ನೂರು ಸಸಿಗಳಲ್ಲಿ ಶೇ.70 ಸಸಿಗಳು ಬದುಕುತ್ತಿವೆ ಎನ್ನುವ ಲೆಕ್ಕ ಕೊಡುತ್ತಿದೆ. ಹಾಗಿದ್ದರೆ ಧಾರವಾಡ ಜಿಲ್ಲೆಯಲ್ಲಿ ಇಷ್ಟೊತ್ತಿಗೆ ಸೂರ್ಯನ ಕಿರಣಗಳೇ ನೆಲಕ್ಕೆ ಬೀಳದಷ್ಟು ದಟ್ಟಕಾಡು ಬೆಳೆದು ನಿಲ್ಲಬೇಕಿತ್ತು. ನೆಟ್ಟ ಕೋಟಿ ಗಿಡಗಳು ಎಲ್ಲಿ ಹೋದವು? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಇದೇ ಕಟುಸತ್ಯ!:

1990ರಿಂದ 2010ರ ವರೆಗೆ ಅಂದರೆ 20 ವರ್ಷಗಳಲ್ಲಿ ಜಿಲ್ಲೇಯ ಸ್ವಯಂ ಸೇವಾ ಸಂಸ್ಥೆಗಳು, ಜಿಲ್ಲಾ ಪರಿಷತ್‌ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿಯೇ ನರ್ಸರಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಸಿ ಬೆಳೆಸಿದ್ದಾಗಿ ಸರ್ಕಾರಕ್ಕೆ ಲೆಕ್ಕ ಕೊಟ್ಟಿವೆ. ಅಂದಿನಿಂದ ಈ ವರೆಗೂ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಬರೊಬ್ಬರಿ ಒಂದು ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟಿರುವುದಾಗಿ ಹೇಳಲಾಗುತ್ತಿದ್ದು, ಆದರೆ ಅವುಗಳಲ್ಲಿ ಬದುಕಿ ಉಳಿದಿದ್ದು ಬರೀ ಎರಡುಮೂರು ಲಕ್ಷ ಸಸಿಗಳು ಮಾತ್ರ ಎಂಬುದು ಕಟುಸತ್ಯ.
‘ತೋಪೆ’ದ್ದು ಹೋದ ಮಣ್ಣಿನ ಸತ್ವ:
25 ವರ್ಷಗಳ ಹಿಂದೆ ಜಿಲ್ಲೆಯ 6 ಸಾವಿರ ಎಕರೆಗೂ ಅಧಿಕ ಪ್ರದೇಶದ ಅರಣ್ಯ, ಪಾಳುಭೂಮಿ ಎಲ್ಲೆಂದರಲ್ಲಿ ನೆಟ್ಟ ನೀಲಗಿರಿ ತೋಪುಗಳು ಇಂದು ಬಂಜರಾಗಿವೆ. ಅಲ್ಲಿ ಬರೀ ಕಾಂಗ್ರೆಸ್‌ ಕಸ ಮತ್ತು ಯುಪಟೋರಿಯಂ ನರ್ತಿಸುತ್ತಿದೆ. ಸಮೃದ್ಧ ಹುಲ್ಲುಗಾವಲುಗಳಾಗಿ, ದೇಶಿ ಗಿಡಗಳು ಮತ್ತು ಔಷಧಿ ಸಸ್ಯಗಳ ತಾಣಗಳಾಗಿದ್ದ ಕಂದಾಯ ಇಲಾಖೆ ಗೋಮಾಳಗಳು ಇದೀಗ ನೀಲಗಿರಿಯಿಂದ ಕೃಷವಾಗಿ ಹೋಗಿವೆ. ಇನ್ನೊಂದೆಡೆ ಇದ್ದ ಸಸಿಗಳನ್ನು ಸರಿಯಾಗಿ ಉಳಿಸಿಕೊಳ್ಳುವ ಕಾಳಜಿಯೂ ಇಲ್ಲದಂತಾಗಿದೆ. ಸರ್ಕಾರದ ಬಿಲ್ ಪಾವತಿಗೆ ನೆಟ್ಟ ಗಿಡಗಳ ಆಯಸ್ಸು ಬರೀ ಏಳೆಂಟು ವರ್ಷಗಳು. ಹೀಗಿದ್ದರೆ ಹಸಿರು ಹೆಚ್ಚುವುದು ಯಾವಾಗ? ಪರಿಸರ ಉಳಿಸುವುದು ಹೇಗೆ?
ಫಲ ನೀಡದ ಬೀಜದ ಉಂಡೆ:
ಬೀಜದ ಉಂಡೆಯ ರೂಪದಲ್ಲಿಯೇ ಲಕ್ಷಕ್ಕೂ ಅಧಿಕ ಸಸಿಗಳು ಹುಟ್ಟುವ ಲೆಕ್ಕಾಚಾರವಿತ್ತು. ಸತತ ಮೂರು ವರ್ಷಗಳ ವರೆಗೂ ಅಲ್ಲಲ್ಲಿ ಅರಣ್ಯ ಇಲಾಖೆ ಬೀಜದ ಉಂಡೆ ರೂಪದಲ್ಲಿ ಸಸಿಗಳನ್ನು ಹುಟ್ಟಿಸುವ ಪ್ರಯತ್ನ ಮಾಡಿದೆ. ಆದರೆ ಬೀಜದುಂಡೆಯಿಂದ ಮೊಳಕೆಯೊಡೆದು ಮೂರು ವರ್ಷದ ಸಸಿಯಾಗುವಷ್ಟು ಹೊತ್ತಿಗೆ ಶೇ.10 ರಷ್ಟು ಮಾತ್ರ ಬದುಕಿರುತ್ತವೆ ಎನ್ನುತ್ತಾರೆ ಪರಿಸರ ತಜ್ಞರು. ಈ ಕಾರ್ಯಕ್ಕೆ ಧಾರವಾಡದ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಕೂಡ ಕೈ ಜೋಡಿಸಿದ್ದು, ಚೆಳ್ಳೆಕಾಯಿ, ಹುಣಸೆ,ನೇರಳೆ ಗಿಡಗಳನ್ನು ಕೆಲಕೇರಿ ಕೆರೆ, ಬಣದೂರು, ಹಳ್ಳಿಗೇರಿ, ಗಬ್ಬೂರು ಸೇರಿದಂತೆ ಅನೇಕ ಹಳ್ಳಿಗಳಲ್ಲಿನ ಪಾಳು ಭೂಮಿಯಲ್ಲಿ ಹಾಕಲಾಗಿದೆ.
ಸಸಿ ಸಾಯಲು ಕಾರಣ?:

  • ಸತತ ನಾಲ್ಕು ವರ್ಷಗಳಿಂದ ಬರಗಾಲ
  • ಬೇಸಿಗೆಯಲ್ಲಿ ಗಿಡಕ್ಕೆ ನೀರಿನ ಪೂರೈಕೆ ಕೊರತೆ
  • ಗಿಡ ನೆಡುವಾಗಿನ ಆಸಕ್ತಿ ಬೆಳೆಸಲು ಇಲ್ಲದಿರುವುದು
  • ಸಸಿ ನೆಟ್ಟ ಶಾಲಾ ಆವರಣಗಳು ಪಾಳು ಬಿದ್ದಿರುವುದು
  • ಸಸಿ ನೆಟ್ಟು ಬೆಳೆಸಬೇಕು ಎನ್ನುವ ಪರಿಸರ ಕಾಳಜಿ ಕೊರತೆ
  • ನೆಟ್ಟ ಗಿಡಗಳ ನಿರ್ವಹಣೆಗೆ ಸಿಬ್ಬಂದಿ ಇಲ್ಲದಿರುವುದು

ಗಿಡ ನೆಡುವುದು ಸುಲಭ, ಆದರೆ ಅವುಗಳನ್ನು ಬೆಳೆಸುವುದು ನಿಜಕ್ಕೂ ಕಷ್ಟ. ಅವುಗಳಿಗೆ ಗಾರ್ಡ್‌ ಗಳಿಲ್ಲ, ಕಾಯುವ ಕಾಳಜಿ ಜನರಲ್ಲಿ ಇಂದಿಗೂ ಬರುತ್ತಿಲ್ಲ. ಸಂಘ-ಸಂಸ್ಥೆಗಳು ಮಾಡಿದ ಪ್ರಯತ್ನದಿಂದ ಅಲ್ಲಲ್ಲಿ ಹಸಿರು ಉಳಿದುಕೊಂಡಿದೆ ಬಿಟ್ಟರೆ, ಲಕ್ಷ ಗಿಡ ನೆಟ್ಟರೂ, ಸಾವಿರ ಸಸಿ ಬದುಕುತ್ತಿಲ್ಲ.•ಶಂಕರ ಕುಂಬಿ, ಹು-ಧಾ ಪರಿಸರ ಸಮಿತಿ ಅಧ್ಯಕ್ಷ

 

•ಬಸವರಾಜ ಹೊಂಗಲ್

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.