ಉಂಡಿ ಹಬ್ಬಕ್ಕೆ ಜೇಬಿಗೆ ಕಿರು ಕಿಂಡಿ!

•90ರಿಂದ 120ರೂ. ಗಡಿ ತಲುಪಿದ ಶೇಂಗಾ•ಘಮಘಮಿಸದ ಮಸಾಲೆ ರಾಜ

Team Udayavani, Aug 3, 2019, 2:52 PM IST

huballi-tdy-4

ಹುಬ್ಬಳ್ಳಿ: ಉಂಡಿಗಳ ಹಬ್ಬವಾದ ನಾಗರ ಪಂಚಮಿಗೆ ಬೆಲೆ ಏರಿಕೆ ಬಿಸಿ ಕಳೆದ ವರ್ಷಕ್ಕೆ ಹೋಲಿಸಿದರೆ ಕೊಂಚ ಪ್ರಮಾಣದಲ್ಲಿ ತಟ್ಟಿದೆ. ಶೇಂಗಾ ಕೆಜಿಗೆ 120ರೂ. ಇದ್ದರೆ, ಪುಟಾಣಿ 80ರೂ., ಕಡಲೆಬೇಳೆ 55-60 ರೂ. ಇದ್ದು, ಶೇಂಗಾ ದರ ತುಸು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕಳೆದ ವರ್ಷ ಬರದ ಕಾರಣ ಶೇಂಗಾ ಬಿತ್ತನೆ ಕುಂಠಿತವಾಗಿ ಸಹಜವಾಗಿಯೇ ಶೇಂಗಾ ಫ‌ಸಲು ಕೊರತೆ ಉಂಟಾಗಿತ್ತು. ಈ ವರ್ಷ ಶೇಂಗಾ ಬಿತ್ತನೆ ಬೀಜವೂ ದೊರಕದೆ ದರದಲ್ಲಿ ದುಬಾರಿಯಾಗಿತ್ತು. ಇದೀಗ ಶ್ರಾವಣದಲ್ಲೂ ಮಾರುಕಟ್ಟೆಯಲ್ಲಿ ಶೇಂಗಾ ತೇಜಿಯಾಗಿದೆ. ಶ್ರಾವಣ ಬಂತೆಂದರೆ ಸಹಜವಾಗಿಯೇ ಆಹಾರ ಪದಾರ್ಥ ಇನ್ನಿತರ ವಸ್ತುಗಳ ಬೆಲೆಯಲ್ಲಿಯೂ ಕೊಂಚ ಏರಿಕೆ ಕಂಡು ಬರುತ್ತಿದೆ.

ಎಷ್ಟಿತ್ತು-ಎಷ್ಟಾಗಿದೆ?: ಕಳೆದ ವರ್ಷದ ದರಗಳಿಗೆ ಹೋಲಿಸಿದರೆ ಕೆಲವೊಂದು ಪದಾರ್ಥಗಳ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿವೆ. ಯಾಲಕ್ಕಿ, ಗಸಗಸೆ, ಶೇಂಗಾದ ಬೆಲೆ ಕೊಂಚ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ವೇಳೆಗೆ ಶೇಂಗಾ ಕೆಜಿಗೆ 90ರೂ. ಇದ್ದರೆ ಈ ಬಾರಿ 115-120ರೂ. ಆಗಿದೆ. ಕಡಲೆಬೇಳೆ 54 ರೂ. ಇದ್ದು, ಕಳೆದ ವರ್ಷ 62-65 ರೂ. ಇತ್ತು. ಪುಟಾಣಿ 80 ರೂ. ಇದ್ದು, ಕಳೆದ ವರ್ಷ 93-100ರೂ. ವರೆಗೆ ಇತ್ತು. ಕಡಲೆಕಾಳು 55-60 ಇದ್ದರೆ, ಕಳೆದ ವರ್ಷ 60-65 ರೂ. ಇತ್ತು. ಸಕ್ಕರೆ ಕೆಜಿಗೆ 35ರೂ. ಇದ್ದು, ಕಳೆದ ವರ್ಷ 40ರೂ. ಇತ್ತು. ಕೆಜಿ ಬೆಲ್ಲ 35-40 ರೂ. ಸ್ಥಿರವಾಗಿದೆ.

ಶೇಂಗಾ ಎಣ್ಣೆ ದರದಲ್ಲಿ ಹೆಚ್ಚಳವಾಗಿಲ್ಲ. ಕಳೆದ ಬಾರಿ ಶೇಂಗಾ ಎಣ್ಣೆ ಕೆಜಿ 96 ರೂ.ಗಳಿದ್ದರೆ ಈ ವರ್ಷವೂ ಅಷ್ಟೇ ಇದೆ. ಫಾಮ್‌ ಎಣ್ಣೆ ಕಳೆದ ವರ್ಷ ಕೆಜಿಗೆ 76 ರೂ. ಇತ್ತು. ಈ ವರ್ಷ 66 ರೂ. ಆಗಿದೆ. ಸೋಯಾಬಿನ್‌ ಎಣ್ಣೆ ಕಳೆದ ವರ್ಷ ಕೆಜಿಗೆ 76 ರೂ. ಇತ್ತು. ಈ ವರ್ಷ 82 ರೂ.ಗೆ ಹೆಚ್ಚಳವಾಗಿದೆ.

ಮಸಾಲೆ ರಾಜ ದುಬಾರಿ: ಮಸಾಲೆಗಳ ರಾಜ ಯಾಲಕ್ಕಿ ಹಾಗೂ ಗಸಗಸೆ ದರಗಳಲ್ಲಿ ತುಂಬಾ ಏರಿಕೆಯಾಗಿದೆ. ಕಳೆದ ವರ್ಷ ಯಾಲಕ್ಕಿ ಕೆಜಿಗೆ 1500 -1700 ರೂ.ಗಳಿದ್ದರೆ, ಈ ವರ್ಷ 4600-5000 ರೂ.ಗೆ ಕೆಜಿಯಾಗಿದೆ. ಗಸಗಸೆ ಕಳೆದ ವರ್ಷ ಕೆಜಿಗೆ 600-700 ರೂ. ಇದ್ದರೆ, ಈ ವರ್ಷ 900-1000 ರೂ.ಗೆ ಹೆಚ್ಚಳವಾಗಿದೆ.

ಉಂಡಿ ಮಾಡುವ ದಾನಿ-ಗುಳಗಿ ಕೆಜಿಗೆ 140ರಿಂದ 160 ರೂ. ದರ ನಿಗದಿ ಮಾಡಲಾಗಿದೆ. ವಿವಿಧ ಆಹಾರ ಧಾನ್ಯ ಹಾಗೂ ಇನ್ನಿತರ ಪದಾರ್ಥಗಳ ದರ ಹೆಚ್ಚಳ ಸಹಜವಾಗಿಯೇ ಖರೀದಿಯ ಮೇಲೆ ಪರಿಣಾಮ ಬೀರಲಿದೆ. ಅದೇ ರೀತಿ ಹೂವಿನ ದರದಲ್ಲೂ ಹೆಚ್ಚಳವಾಗಿದೆ. ಅಮಾವಾಸ್ಯೆ ದಿನದಂದು ಮಲ್ಲಿಗೆ ಹೂ 30-40 ರೂ.ಗೆ ಮಾರು ಮಾರಾಟವಾಗಿದ್ದು, ಶ್ರಾವಣ ಮುಗಿಯುವವರೆಗೂ ಹೂವಿನ ದರ ತಗ್ಗುವ ಸಾಧ್ಯತೆ ಕಡಿಮೆ.

ಕಳೆದ ಬಾರಿ ಹಬ್ಬಕ್ಕೆ ಬೇಕಾದ ಎಲ್ಲ ವಸ್ತುಗಳ ದರದಲ್ಲಿ ಕೊಂಚ ಏರಿಕೆ ಕಂಡಿದ್ದು, ಈ ಬಾರಿ ಶೇಂಗಾ, ಯಾಲಕ್ಕಿ, ಗಸಗಸೆ ಬಿಟ್ಟರೆ ಇನ್ನುಳಿದ ವಸ್ತುಗಳ ದರ ಯಥಾಸ್ಥಿತಿಯಲ್ಲಿದೆ.• ಮಹಾಲಿಂಗಪ್ಪ ಹರ್ತಿ, ಕಿರಾಣಿ ವ್ಯಾಪಾರಸ್ಥ

ಕಳೆದ ಬಾರಿ ಶೇಂಗಾ ದರ 90 ರೂ. ಇದ್ದರೆ ಈ ಬಾರಿ 120 ರೂ. ಮುಟ್ಟಿದೆ. ಇನ್ನುಳಿದ ವಸ್ತುಗಳ ದರ ಯಥಾಸ್ಥಿತಿಯಲ್ಲಿದೆ. ಗ್ರಾಹಕರಿಗೂ ಹೆಚ್ಚಿನ ಹೊರೆ ಇಲ್ಲದೆ, ಇರುವಷ್ಟರಲ್ಲಿಯೇ ಹಬ್ಬ ಆಚರಣೆಗೆ ಮುಂದಾಗುತ್ತಿದ್ದಾರೆ.• ಸತೀಶ ದೋಂಗಡಿ, ಕಿರಾಣಿ ವ್ಯಾಪಾರಸ್ಥ

 

•ಬಸವರಾಜ ಹೂಗಾರ

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.