ಉಳ್ಳಾಗಡ್ಡಿ ಸೊಪ್ಪಿಗೂ ದುಪ್ಪಟ್ಟು ದರ


Team Udayavani, Dec 6, 2019, 10:51 AM IST

huballi-tdy-2

ಹುಬ್ಬಳ್ಳಿ: ಕಂಡರಿಯದ ದರ ಇದ್ದರೂ ನೀಡುವುದಕ್ಕೆ ಉಳ್ಳಾಗಡ್ಡಿಯೇ ಇಲ್ಲವಲ್ಲ ಎಂದು ರೈತ ಸಂಕಷ್ಟ ಪಡುತ್ತಿದ್ದರೆ, ಗಂಟೆಗೊಮ್ಮೆ ಹೆಚ್ಚುತ್ತಿರುವ ಉಳ್ಳಾಗಡ್ಡಿ ದರ ಕಂಡು ಗ್ರಾಹಕ ದಂಗಾಗಿದ್ದಾನೆ. ಕೇಳುವವರೆ ಇಲ್ಲ ಎನ್ನುವಂತಿದ್ದ ಉಳ್ಳಾಗಡ್ಡಿ ಸೊಪ್ಪಿಗೂ ಇದೀಗ ದುಪ್ಪಟ್ಟು ದರ ಬಂದಿದೆ.

ಬರಅತಿವೃಷ್ಟಿ, ನೆರೆ ನಡುವೆ ರೈತರಿಗೆ ದಕ್ಕಿದ್ದ ಅಷ್ಟು ಇಷ್ಟು ಉಳ್ಳಾಗಡ್ಡಿಯಲ್ಲಿ ಬಹುತೇಕ ಮಾರುಕಟ್ಟೆಗೆ ಬಂದು ಮಾರಾಟವಾದ ಕೆಲವೇ ದಿನಗಳಲ್ಲಿ ಬೆಲೆ ನಾಲ್ಕೈದು ಪಟ್ಟು ಹೆಚ್ಚಳವಾಗಿರುವುದು ಕಂಡು ರೈತರು, ಈಗ ಉಳ್ಳಾಗಡ್ಡಿ ಇದ್ದಿದ್ದರೆ ಒಂದಿಷ್ಟು ಹಣವಾದರೂ ಕೈಗೆ ಹತ್ತುತ್ತಿತ್ತು ಎಂದು ನೋವು ಪಡುವಂತಾಗಿದೆ. ಉಳ್ಳಾಗಡ್ಡಿ ಕೇವಲ ರೈತರು ಹಾಗೂ ಗ್ರಾಹಕರಿಗಷ್ಟೇ ಸಂಕಷ್ಟನೋವು ತರುತ್ತಿಲ್ಲ. ಬದಲಾಗಿ ದೇಶದ ರಾಜಕೀಯ ಮೇಲು ಪರಿಣಾಮ ಬೀರುತ್ತ ಬಂದಿದ್ದು, ಹಲವು ಚುನಾವಣೆಗಳಲ್ಲಿ ಉಳ್ಳಾಗಡ್ಡಿ ದರವೇ ಚುನಾವಣಾ ಪ್ರಮುಖ ಪ್ರಚಾರದ ವಿಷಯವಾಗಿದ್ದು, ಹಲವು ಸರಕಾರಗಳನ್ನು ಏರುಪೇರು ಮಾಡಿದ್ದು ಇದೆ. 80ರ ದಶಕದಿಂದಲೂ ಉಳ್ಳಾಗಡ್ಡಿ ಒಂದಿಲ್ಲ ಒಂದು ರೀತಿಯಲ್ಲಿ ರಾಜಕೀಯದಲ್ಲಿ ಪ್ರಭಾವ ತೋರುತ್ತ ಬಂದಿದೆ. ಈ ಬಾರಿ ಉಳ್ಳಾಗಡ್ಡಿ ದರ ಸರ್ವಕಾಲಿಕ ದಾಖಲೆ ಎನ್ನುವಂತಾಗಿದೆ.

ದುಪ್ಪಟ್ಟು ದರ: ಅತಿವೃಷ್ಟಿಯಿಂದ ಬಹುತೇಕ ಉಳ್ಳಾಗಡ್ಡಿ ಬೆಳೆ ಭೂಮಿಯಲ್ಲಿಯೇ ಕೊಳೆತಿದ್ದು, ನಂತರದಲ್ಲಿ ಉಳ್ಳಾಗಡ್ಡಿ ಬಿತ್ತನೆ ಮಾಡಿದ ಕೆಲ ರೈತರು, ಉಳ್ಳಾಗಡ್ಡಿ ಸೊಪ್ಪು ಮಾರಾಟಕ್ಕೆ ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿ ಈ ಸೊಪ್ಪಿಗೂ ಉತ್ತಮ ದರ ಸಿಗತೊಡಗಿದೆ. ಈ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಒಂದು ಸೂಡು ಉಳ್ಳಾಗಡ್ಡಿ ಸೊಪ್ಪನ್ನು ರೈತರಿಂದ 2 ರೂ.ಗೆ ಖರೀದಿಸಲಾಗುತ್ತಿತ್ತು. ಇದೀಗ ಅದೇ ಸೂಡಿಗೆ 6 ರೂ.ನಂತೆ ಖರೀದಿಸಲಾಗುತ್ತಿದೆ.

ಅದೇ ಉಳ್ಳಾಗಡ್ಡಿ ಸೊಪ್ಪನ್ನು 10-12 ರೂ. ಗೆ ಒಂದಂತೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಉಳ್ಳಾಗಡ್ಡಿ ದರ ಕೆಜಿಗೆ 100-130 ರೂ. ಆಗಿರುವುದರಿಂದ ಕೆಲವರು 10 ರೂ. ನೀಡಿ ಒಂದು ಸೂಡು ಉಳ್ಳಾಗಡ್ಡಿ ಸೊಪ್ಪು ಖರೀದಿಗೆ ಮುಂದಾಗುತ್ತಿದ್ದಾರೆ. ಈ ಸೊಪ್ಪಿನ ಜತೆಗೆ ಸಣ್ಣ ಗಾತ್ರದ ಉಳ್ಳಾಗಡ್ಡಿಯೂ ಸಿಗುತ್ತದೆ ಎಂಬ ಉದ್ದೇಶದಿಂದ. ಒಂದು ಸೂಡಿನಲ್ಲಿ ಕನಿಷ್ಠ ಏನಿಲ್ಲವೆಂದರೂ 7-8 ಸಣ್ಣ ಗಾತ್ರದ ಉಳ್ಳಾಗಡ್ಡಿ ಸಿಗುತ್ತವೆ. ಮಾಡುವುದಕ್ಕೆ ಪಲ್ಯ ಆಯಿತು, ಬಳಸುವುದಕ್ಕೆ ಉಳ್ಳಾಗಡ್ಡಿಯೂ ಸಿಕ್ಕಂತಾಯಿತು ಎಂಬುದು ಕೆಲವರ ಲೆಕ್ಕಾಚಾರವಾಗಿದೆ.

ಶೇ.10 ಬೆಳೆಯೂ ಬಂದಿಲ್ಲ: ಉಳ್ಳಾಗಡ್ಡಿ ಉತ್ಪನ್ನದಲ್ಲಿ ಚೀನಾ ಹೊರತು ಪಡಿಸಿದರೆ ವಿಶ್ವದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಟರ್ಕಿ, ಪಾಕಿಸ್ಥಾನ, ಬ್ರೆಜಿಲ್‌, ಇರಾನ್‌, ಸ್ಪೇನ್‌ ಹಾಗೂ ಜಪಾನ್‌ ಬರುತ್ತವೆ.

ಭಾರತದಲ್ಲಿ ಮಹಾರಾಷ್ಟ್ರದ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ, ಮಧ್ಯಪ್ರದೇಶ, ತಮಿಳುನಾಡು, ರಾಜಸ್ಥಾನ, ಓಡಿಶಾ, ಉತ್ತರ ಪ್ರದೇಶ ಇನ್ನಿತರ ರಾಜ್ಯಗಳಲ್ಲಿ ಉಳ್ಳಾಗಡ್ಡಿ ಬೆಳೆಯಲಾಗುತ್ತಿದೆ. ಇದರಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೊಡುಗೆ ಹೆಚ್ಚಿನದಾಗಿದೆ. ಮಹಾರಾಷ್ಟ್ರದ ಲಾಸಲ್‌ ಗಾಂವ್‌ ದೇಶದ ಅತಿದೊಡ್ಡ ಉಳ್ಳಾಗಡ್ಡಿ ಮಾರುಕಟ್ಟೆಯಾಗಿದೆ. 1951-52ರಲ್ಲಿಯೇ ಭಾರತ ಸುಮಾರು 5,000 ಟನ್‌ ಉಳ್ಳಾಗಡ್ಡಿ ರಫ್ತು ಮಾಡಿತ್ತು. ರಾಜ್ಯದಲ್ಲಿ ಹುಬ್ಬಳ್ಳಿ ಹಾಗೂ ಬೆಳಗಾವಿ ಉಳ್ಳಾಗಡ್ಡಿಗೆ ದೊಡ್ಡ ಮಾರುಕಟ್ಟೆಯಾಗಿವೆ.

ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ, ರಾಯಚೂರು, ದಾವಣಗೆರೆ, ಚಿತ್ರದುರ್ಗಗಳಲ್ಲಿ ಹೆಚ್ಚಾಗಿ ಉಳ್ಳಾಗಡ್ಡಿ ಬೆಳೆಯಲಾಗುತ್ತದೆ. ಈ ಬಾರಿ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅತಿವೃಷ್ಟಿ ಕಾರಣದಿಂದಾಗಿ ಉಳ್ಳಾಗಡ್ಡಿ ಬೆಳೆ ಶೇ.10 ಸಹ ಬಂದಿಲ್ಲವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಒಂದು ಎಕರೆಗೆ ಸುಮಾರು 50 ಪಿಸಿ(ಅಂದಾಜು 55-60ಕೆಜಿ ಚೀಲ)ಬರಬೇಕಾದ ಉಳ್ಳಾಗಡ್ಡಿ ಫ‌ಸಲು ಕೇವಲ 5 ಚೀಲದಷ್ಟು ಮಾತ್ರ ಬಂದಿದೆ ಎಂಬುದು ರೈತರ ಅನಿಸಿಕೆಯಾಗಿದೆ. ಈ ಬಾರಿ ಆರಂಭದಲ್ಲಿ ಉಳ್ಳಾಗಡ್ಡಿ ಮಾರುಕಟ್ಟೆಗೆ ಬಂದಾಗ 500ರೂ.ನಿಂದ ದರ ಆರಂಭವಾಗಿತ್ತು. 3,000ರೂ. ನಿಂದ 4,000-4,500ರೂ.ವರೆಗೆ ಮಾರಾಟ ಆಗಿದ್ದು, ಇದೀಗ 9,000ರಿಂದ 10,000 ರೂ. ದಾಟಿದೆ.

 

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.