ರಿಕ್ಷಾ ರನ್ ತಂಡಕ್ಕೆ ಬೀಳ್ಕೊಡುಗೆ
Team Udayavani, Dec 16, 2019, 10:36 AM IST
ಹುಬ್ಬಳ್ಳಿ: ಭಾರತದಲ್ಲಿನ ಕೆಲವೊಂದು ಅಂಗವಿಕಲ ಮಕ್ಕಳ ಶಾಲೆಗೆ ನೆರವು ಕಲ್ಪಿಸುವ ನಿಟ್ಟಿನಲ್ಲಿ ಸೇವಾ ಯುಕೆ ಸಂಸ್ಥೆ ಆಯೋಜಿಸಿರುವ ರಿಕ್ಷಾ ರನ್ ಅಭಿಯಾನದ ತಂಡ ಹುಬ್ಬಳ್ಳಿ ಆಗಮಿಸಿತ್ತು. ರವಿವಾರ ಬೆಳಗ್ಗೆ ತಂಡವನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರು ದೇಶಪಾಂಡೆ ನಗರದ ಕರ್ನಾಟಕ ಜಿಮಖಾನಾ ಮೈದಾನದಲ್ಲಿ ರಿಕ್ಷಾ ರನ್ ತಂಡಕ್ಕೆ ಬಾವುಟ ತೋರಿಸುವ ಮೂಲಕ ಬೀಳ್ಕೊಟ್ಟರು.
ರಿಕ್ಷಾ ರನ್ ತಂಡ ಶನಿವಾರ ಸಂಜೆ ವೇಳೆಗೆ ಶಿವಮೊಗ್ಗದಿಂದ ಗದುಗಿಗೆ ತೆರಳಿ ಅಲ್ಲಿಂದ ಹುಬ್ಬಳ್ಳಿಗೆ ಆಗಮಿಸಿ ಇಲ್ಲಿಯೇ ತಂಗಿತ್ತು. ಸ್ಥಳೀಯ ಸೇವಾ ಭಾರತಿ ಟ್ರಸ್ಟ್ ಅಡಿಯಲ್ಲಿ ನಗರಕ್ಕೆ ಬಂದ ಸುಮಾರು 105ಕ್ಕೂ ಅಧಿಕ ಅತಿಥಿಗಳಿಗೆ ಇಲ್ಲಿನ ಅನೇಕ ಮನೆಗಳಲ್ಲಿ ಆತಿಥ್ಯ ನೀಡಲಾಗಿತ್ತು. ಬೆಳಗ್ಗೆ 7 ಗಂಟೆ ಸುಮಾರಿಗೆ ರಿಕ್ಷಾ ರನ್ ತಂಡದ ಸದಸ್ಯರು ಜಿಮಖಾನಾ ಮೈದಾನದಲ್ಲಿ ಸಮಾವೇಶಗೊಂಡು ತಮ್ಮ ತಮ್ಮ ಆಟೋರಿಕ್ಷಾಗಳಲ್ಲಿ ಗೋವಾಕ್ಕೆ ಪ್ರಯಾಣ ಬೆಳೆಸಿದರು. ಹುಬ್ಬಳ್ಳಿಯಲ್ಲಿ ತಮಗೆ ದೊರೆತ ಆತ್ಮೀಯ ಆತಿಥ್ಯವನ್ನು ಕೊಂಡಾಡಿದರಲ್ಲದೆ, ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಶಿಲ್ಪಾ ಶೆಟ್ಟರ, ಗೋವರ್ಧನರಾವ್, ಡಾ| ರಘು ಅಕ್ಮಂಚಿ, ಚಂದ್ರಶೇಖರ ಗೋಕಾಕ, ಶಂಕರ ಗುಮಾಸ್ತೆ, ಕಿರಣ ಗುಡ್ಡದಕೇರಿ, ಜಯತೀರ್ಥ ಕಟ್ಟಿ, ಪ್ರಭು ಉಮದಿ, ಸತೀಶ ಶೇಜವಾಡಕರ, ನಾಗೇಶ ಕಲಬುರ್ಗಿ, ಉಮೇಶ ದುಶಿ, ಸೇವಾ ಭಾರತಿ ಟ್ರಸ್ಟ್ ಪದಾಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ
MUST WATCH
ಹೊಸ ಸೇರ್ಪಡೆ
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ