ಮಳೆ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋದ ರೈತ
Team Udayavani, Jun 29, 2020, 8:43 PM IST
ಧಾರವಾಡ: ಆಕಳು ಮೇಯಿಸಲು ಹೋಗಿದ್ದ ರೈತರೊಬ್ಬರು ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ದುರ್ಘಟನೆ ಸಂಭವಿಸಿದೆ.
ಮಳೆಯ ಕಾರಣದಿಂದ ಹಳ್ಳದಲ್ಲಿ ಏಕಾಏಕಿ ಭಾರೀ ಪ್ರಮಾಣದ ನೀರು ಹರಿದುಬಂದು ಉಂಟಾದ ಪ್ರವಾಹದಲ್ಲಿ ಮಡಿವಾಳಪ್ಪ ಜಕ್ಕಣ್ಣನವರ (40) ಎಂಬ ಹೆಸರಿನ ರೈತ ಕೊಚ್ಚಿಹೋಗಿದ್ದಾರೆ.
ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಈ ದುರ್ಘಟನೆ ನಡೆಸಿದೆ. ಆಕಳು ಮೇಯಿಸಲು ಹೋಗಿದ್ದ ಮಡಿವಾಳಪ್ಪ ಅವರು ಸೋಮವಾರ ಸಂಜೆಯಾಗುತ್ತಲೇ ತಮ್ಮ ಆಕಳುಗಳ ಜೊತೆಯಲ್ಲಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ.
ಈ ವೇಳೆ ಜೋರಾಗಿ ಮಳೆ ಸುರಿಯತೊಡಗಿದೆ ಈ ಸಂದರ್ಭದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಹಸುಗಳನ್ನು ಹಾರೋಬೆಳವಡಿಯಿಂದ ಆಯಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯೆ ಇರುವ ಸೇತುವೆ ಮೇಲೆ ಕಟ್ಟಿ ಹಾಕಿ ತಾವು ಸೇತುವೆಯ ಕೆಳಗಡೆ ಕುಳಿತಿದ್ದರು.
ಈ ಸಂದರ್ಭದಲ್ಲಿ ಸೇತುವೆಗೆ ಏಕಾಏಕಿ ತುಪ್ಪರಿ ಹಳ್ಳಕ್ಕೆ ಸೇರುವ ಭಂಡರಳ್ಳದಲ್ಲಿ ನೀರು ತುಂಬಿ ಬಂದಿದೆ. ಇದರಿಂದ ಗಾಬರಿಯಾದ ಮಡಿವಾಳಪ್ಪ ಸೇತುವೆ ಕೆಳಗಡೆ ಹೊಂದಿಕೊಂಡಿದ್ದ ಕಬ್ಬಿಣದ ಶೇಳೆ ಹಿಡಿದು ನಿಂತಿದ್ದಾರೆ. ಕ್ಷಣಾರ್ಧದಲ್ಲಿ ಅವರ ಕುತ್ತಿಗೆವರೆಗೂ ನೀರು ಹರಿದಿದ್ದು, ಆ ಬಳಿಕ ಹೆದರಿ ಕಬ್ಬಿಣದ ಶೇಳೆ ಕೈಬಿಟ್ಟ ಪರಿಣಾಮ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ.
ಸುದ್ದಿ ತಿಳಿದು ಶಾಸಕ ಅಮೃತ ದೇಸಾಯಿ ಭೇಟಿ ನೀಡಿದ್ದು, ಇದರ ಜೊತೆಗೆ ನವಲಗುಂದ ಹಾಗೂ ಧಾರವಾಡ ತಹಶೀಲ್ದಾರರು ಭೇಟಿ ನೀಡಿದ್ದಾರೆ. ಅಣ್ಣ ಹಾಗೂ ತಮ್ಮನಿಗೆ ಮದುವೆ ಆಗಿದ್ದು, ಆದರೆ ಮಡಿವಾಳಪ್ಪನಿಗೆ ಮದುವೆಯಾಗಿಲ್ಲ. ತಂದೆ-ತಾಯಿ ಇದ್ದು ಇವರದ್ದು ಬಡ ಕುಟುಂಬವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು