ನೆರೆ ಸಂಕಷ್ಟ; ಸದ್ದುಗದ್ದಲವಿಲ್ಲದೆ ಸಂಘ ಸೇವೆ
•ಅತ್ಯವಶ್ಯಕ ವಸ್ತುಗಳ ಸಂಗ್ರಹ-ವಿತರಣೆ•ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳಲು ಹೆಗಲಿತ್ತ ಸ್ವಯಂ ಸೇವಕರು•ಪಶುಗಳಿಗೂ ಆಹಾರ ಪೂರೈಕೆ
Team Udayavani, Aug 19, 2019, 9:21 AM IST
ಹುಬ್ಬಳ್ಳಿ: ಪ್ರವಾಹ ಸಂತ್ರಸ್ತರಿಗೆ ಆರೆಸ್ಸೆಸ್ನಿಂದ ಸಿದ್ಧವಾಗುತ್ತಿದ್ದ ಆಹಾರ ತಯಾರಿಕೆಯಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡ ಮಹಿಳೆಯರು.
ಹುಬ್ಬಳ್ಳಿ: ದೇಶದ ಯಾವುದೇ ಮೂಲೆಯಲ್ಲಿ ಪ್ರಕೃತಿ ವಿಕೋಪದಂತಹ ಅವಘಡಗಳು ನಡೆದರೆ, ಸರಕಾರದ ಯಂತ್ರಾಂಗ ತಲುಪುವ ಮೊದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದವರು ರಕ್ಷಣೆ, ಪರಿಹಾರ ಕಾರ್ಯದಲ್ಲಿ ತೊಡಗಿರುತ್ತಾರೆ. ಉತ್ತರ ಕರ್ನಾಟಕ ಸೇರಿದಂತೆ ವಿವಿಧೆಡೆಯ ಪ್ರವಾಹ ಸಂಕಷ್ಟ ಸ್ಥಿತಿಯಲ್ಲೂ ಸಾವಿರಾರು ಸಂಘ ಸೇವಕರು ಸದ್ದುಗದ್ದಲವಿಲ್ಲದೆ ಸೇವಾಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶದ ಪ್ರತಿ ಹಳ್ಳಿ, ಪಟ್ಟಣ-ನಗರಗಳಲ್ಲೂ ಆರೆಸ್ಸೆಸ್ ಕಾರ್ಯಕರ್ತರು ರಕ್ಷಣೆ, ಆಹಾರ, ನೀರು, ಪರಿಹಾರ ಸಾಮಗ್ರಿ, ವೈದ್ಯಕೀಯ ಸೇವೆ, ಪಶು ಆಹಾರ ಅಷ್ಟೇ ಅಲ್ಲದೆ ಸಂಕಷ್ಟಕ್ಕೆ ಸಿಲುಕಿದ ವನ್ಯಜೀವಿಗಳಿಗೂ ಆಹಾರ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಾಣದ ಹಂಗು ತೊರೆದು ಅನೇಕ ಅಪಾಯಕಾರಿ ಸ್ಥಳಗಳಿಗೆ ತಲುಪುವ, ರಕ್ಷಣೆ, ಪರಿಹಾರ ಕಾರ್ಯ ಮಾಡಿದ್ದಾರೆ.
ಭಾರೀ ಮಳೆಯಿಂದ ಬೆಳಗಾವಿ ನಗರ ಬಹುತೇಕ ಜಲಾವೃತಗೊಂಡಾಗ, ಎದೆಮಟ್ಟದ ನೀರನ್ನು ಲೆಕ್ಕಿಸದೆ ಜಲಾವೃತಗೊಂಡ ಮನೆ, ಮನೆಗಳಿಗೆ ತೆರಳಿ ಆಹಾರ ಪೊಟ್ಟಣ-ಕುಡಿಯುವ ನೀರಿನ ಬಾಟಲ್ಗಳನ್ನು ನೀಡುವ ಕಾರ್ಯ ಮಾಡಿದ್ದಾರೆ.
ಹರಿದು ಬಂದ ಪರಿಹಾರ ಸಾಮಗ್ರಿ: ಬೆಳಗಾವಿ, ಬಾಗಲಕೋಟೆ, ಧಾರವಾಡ, ಉತ್ತರ ಕನ್ನಡ, ಯಾದಗಿರಿ, ರಾಯಚೂರು, ಹಾವೇರಿ, ಗದಗ ಹೀಗೆ ವಿವಿಧ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮ-ನಗರಗಳಿಗೆ ತೆರಳಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.
ಹುಬ್ಬಳ್ಳಿಯ ಆರೆಸ್ಸೆಸ್ ಕಚೇರಿ ಕೇಶವಕುಂಜಕ್ಕೆ ಬಂದ ವಿವಿಧ ಪರಿಹಾರ ಸಾಮಗ್ರಿ ಒಟ್ಟುಗೂಡಿಸಿ, ಅವುಗಳನ್ನು ವಿಂಗಡಿಸಿ, ಎಲ್ಲಿಗೆ ಎಷ್ಟು ಕಳುಹಿಸಬೇಕು ಎಂಬುದನ್ನು ಸಿದ್ಧಪಡಿಸಿ ಕಳುಹಿಸಲಾಗಿತ್ತು. ಅನೇಕ ಸ್ವಯಂ ಸೇವಕರಲ್ಲದೆ, ಅನೇಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ವಿವಿಧ ಕಡೆಗಳಲ್ಲಿ ಪರಿಹಾರ ಸಾಮಗ್ರಿ ಸಂಗ್ರಹಿಸುವ, ಕೇಶವಕುಂಜದಲ್ಲಿ ಅವುಗಳನ್ನು ವಿಂಗಡಿಸಿ, ಪ್ಯಾಕ್ ಮಾಡುವ ಕಾರ್ಯದಲ್ಲಿ ಸಾಥ್ ನೀಡಿದ್ದರು.
ಅನೇಕ ವೈದ್ಯರು ಸ್ವಯಂಪ್ರೇರಿತರಾಗಿ ಸೇವೆಗೆ ಮುಂದಾಗಿದ್ದರು. ಅನೇಕ ದಾನಿಗಳು, ಕಂಪೆನಿಗಳು ಸಾಕಷ್ಟು ಪ್ರಮಾಣದ ಔಷಧಿ ನೀಡಿದ್ದು, ಕಳೆದ 10 ದಿನಗಳಿಂದ ವೈದ್ಯರ ತಂಡ ಪ್ರವಾಹ ಪೀಡಿತ ಹಳ್ಳಿ, ಪಟ್ಟಣ-ನಗರಗಳಿಗೆ ತೆರಳಿ ವೈದ್ಯಕೀಯ ಸೇವೆ ಹಾಗೂ ಉಚಿತವಾಗಿ ಔಷಧಿ ನೀಡಿಕೆ ಕಾರ್ಯ ಕೈಗೊಂಡಿದ್ದಾರೆ.
25 ಮೆಟ್ರಿಕ್ ಟನ್ ಪಶು ಆಹಾರ: ಜಾನುವಾರುಗಳಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ವಿವಿಧ ದಾನಿಗಳನ್ನು ಸಂಪರ್ಕಿಸಲಾಗಿದ್ದು, ಆರೆಸ್ಸೆಸ್ ಈಗಾಗಲೇ 25 ಮೆಟ್ರಿಕ್ ಟನ್ ಪಶು ಆಹಾರ ರವಾನಿಸಿದೆ. ಪಶು ಆಹಾರ ತಯಾರಕ ಕಂಪೆನಿಯೊಂದು ಉತ್ಪಾದನಾ ವೆಚ್ಚದ ದರದಲ್ಲೇ ಇದನ್ನು ನೀಡಿದ್ದಲ್ಲದೆ ಅದನ್ನು ಕಳುಹಿಸಿಕೊಟ್ಟಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿಗೆ 20 ಮೆಟ್ರಿಕ್ ಟನ್ ಪಶುಆಹಾರ ಕಳುಹಿಸಲಾಗಿದ್ದು, 5 ಮೆಟ್ರಿಕ್ ಟನ್ ಪಶುಆಹಾರವನ್ನು ಚಿಕ್ಕೋಡಿ ತಾಲೂಕಿಗೆ ಕಳುಹಿಸಲಾಗಿದೆ. ಇದಲ್ಲದೆ, ಇತರೆ ಜಿಲ್ಲೆಗಳಲ್ಲಿ ಅಲ್ಲಲ್ಲಿ ಲಭ್ಯವಿದ್ದ ಪಶು ಆಹಾರ, ಮೇವು ಒದಗಿಸುವ ಕಾರ್ಯದಲ್ಲಿ ಸಂಘ ತೊಡಗಿದೆ. ಇನ್ನಷ್ಟು ಪಶು ಆಹಾರ ತರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
•ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ