ಫಲ -ಪುಷ್ಪ ಪ್ರದರ್ಶನ; ಮಧು ಮಹೋತ್ಸವ


Team Udayavani, Feb 23, 2020, 11:19 AM IST

huballi-tdy-2

ಧಾರವಾಡ: ಕಾಮನಬಿಲ್ಲನ್ನೇ ನಾಚಿಸುವಂತಹ ನಾನಾ ಬಣ್ಣಗಳ ಫಲ-ಪುಷ್ಪಗಳು.. ಪುಷ್ಪಗಳಲ್ಲಿ ರೂಪ ಪಡೆದು ಗಮನ ಸೆಳೆದ ಶಿವಲಿಂಗ, ಸಂಗೀತದ ವಾದ್ಯ ಮೇಳಗಳು.. ವಿವಿಧ ಬಣ್ಣ ರೂಪಗಳಲ್ಲಿ ಮತ್ಸ್ಯಗಳ ಆಕರ್ಷಣೆ.. ತೆಂಗಿನಕಾಯಿಯಲ್ಲಿ ಗಣೇಶ ಸೇರಿದಂತೆ ವಿವಿಧ ರೂಪ.. ಹಾಗಲಕಾಯಿಯಲ್ಲಿ ಮೊಸಳೆ!

ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಫಲ-ಪುಷ್ಪ ಪ್ರದರ್ಶನದಲ್ಲಿ ಕಂಡ ದೃಶ್ಯಗಳಿವು. ಡಾ| ರಾಜಕುಮಾರ, ಎಪಿಜೆ ಅಬ್ದುಲ್‌ ಕಲಾಂ, ಸಂಗೊಳ್ಳಿ ರಾಯಣ್ಣ, ಗಂಗೂಬಾಯಿ ಹಾನಗಲ್‌ ಸೇರಿದಂತೆ ಗಣ್ಯರ ರೂಪಗಳು ಕಲ್ಲಂಗಡಿಗಳಲ್ಲಿ ಅರಳಿ ನಿಂತಿದ್ದು, ಗಮನ ಸೆಳೆದಿವೆ.

ಕಣ್ಣಿಗೆ ತಂಪೆರಚುವ ಬಗೆ ಬಗೆಯ ಪುಷ್ಪ, ನೋಡಿದಾಕ್ಷಣ ಸವಿಯಬೇಕೆಂಬ ಆಸೆ ಹುಟ್ಟಿಸುವ ಫಲಗಳೊಂದಿಗೆ ಆರೋಗ್ಯ-ಸೌಂದರ್ಯ ವರ್ಧಕ ಔಷಧೀಯ ಸಸ್ಯಗಳ ಸಮಾಗಮದೊಂದಿಗೆ ಪ್ರದರ್ಶನ ಕಳೆಗಟ್ಟಿದೆ. ಹೂಗಳಿಂದ ಬೃಹತ್‌ ಶಿವಲಿಂಗ ಅರಳಿ ನಿಂತಿದ್ದು, ಇದರ ಸುತ್ತಮುತ್ತಲೂ ವಿವಿಧ ಬಗೆಯ ಹೂಗಳಿಂದ ರಚಿಸಿರುವ ಆನೆ, ತಬಲಾ ಸೇರಿದಂತೆ ಸಂಗೀತ ವಾದ್ಯಗಳೂ ಕಣ್ಮನ ಸೆಳೆದಿವೆ. ಶಿವಲಿಂಗದ ಪಕ್ಕದಲ್ಲಿಯೇ ನವಧಾನ್ಯಗಳಿಂದ ರೂಪಿಸಿರುವ ಕನ್ನಡಾಂಬೆಯ ರೂಪಕ ಕೇಂದ್ರ ಬಿಂದುವಾಗಿದೆ.

ಈ ಪ್ರದರ್ಶನದಲ್ಲಿ ಆಕರ್ಷಿತ ಹೂವುಗಳಿಂದ ಭೂ ಸದೃಶ್ಯ (ಲ್ಯಾಂಡ್‌ ಸ್ಕೇಪಿಂಗ್‌), ಪುಷ್ಪಾಲಕೃಂತ ಶಿವಲಿಂಗ, ಕುಸುಮಾಲಂಕೃತ ಸಂಗೀತ ವಾದ್ಯಗಳು, ಆಕರ್ಷಿತ ಲಂಬ ಉದ್ಯಾನ (ವರ್ಟಿಕಲ್‌ ಗಾರ್ಡನ್‌), ಅಲಂಕಾರಿಕ ಮತ್ಸಾಗಾರ, ಜಲಕೃಷಿ, ಸಸ್ಯ ಸಂತೆ, ತರಕಾರಿ ಮತ್ತು ವಿವಿಧ ಹಣ್ಣುಗಳ ಕಲಾಕೃತಿ, ಅಲಂಕಾರಿಕ ಹೂಗಳ ಜೋಡಣೆ, ಸ್ಟ್ರಾಬೆರಿ ಹಣ್ಣಿನ ಬೆಳೆ ಪ್ರಾತ್ಯಕ್ಷಿಕೆ ಹೀಗೆ ವಿವಿಧ ಪ್ರಕಾರಗಳು ಗಮನ ಸೆಳೆದಿವೆ.

ಇದರ ಜೊತೆಗೆ ಮಧು ಮಹೋತ್ಸವ, ಇಲಾಖೆ ಯೋಜನೆಗಳ ಮಾದರಿ ಘಟಕಗಳಾದ ಹಣ್ಣು ಮಾಗಿಸುವ, ಈರುಳ್ಳಿ ಶೇಖರಣೆ, ನೆರಳು ಮತ್ತು ಪಾಲಿ ಮನೆ, ಮೆಣಸಿನಕಾಯಿ ಒಣಗಿಸುವ ಸೌರಶಕ್ತಿ ಘಟಕಗಳ ಪ್ರದರ್ಶನವೂ ಆಕರ್ಷಿಸಿವೆ. ಸಸ್ಯ ಸಂತೆಯಲ್ಲಿ ಗುಣಮಟ್ಟದ ದ್ವಿವಾಟೆ ಮಾವಿನ ಕಸಿ ಗಿಡಗಳು, ಪೇರಲ, ನಿಂಬೆ, ಪಪ್ಪಾಯ, ನುಗ್ಗೆ, ಕರಿಬೇವು, ದಾಸವಾಳ, ನಂದಿಬಟ್ಟಲು, ಮಲ್ಲಿಗೆ, ಗುಲಾಬಿ ಸೇರಿದಂತೆ ಇನ್ನಿತರ ಸಸಿಗಳನ್ನೂ ಮಾರಾಟಕ್ಕೆ ಇಡಲಾಗಿದೆ.

ಜೇನು ಸಾಕಾಣಿಕೆ ಮಾಹಿತಿ : ಈ ಪ್ರದರ್ಶನದಲ್ಲಿಯೇ ಪ್ರತ್ಯೇಕವಾಗಿ ಜಿಲ್ಲಾಮಟ್ಟದ ಮಧು ಮಹೋತ್ಸವ ಆಯೋಜಿಸಲಾಗಿದ್ದು, ಅದಕ್ಕಾಗಿ 10ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಇಲ್ಲಿ ವಿವಿಧ ಬಗೆಯ ಜೇನುತುಪ್ಪ, ಜೇನುಗೂಡುಗಳ ಪ್ರಾತ್ಯಕ್ಷಿತೆ ಇದೆ. ಜೇನು ಸಾಕಾಣಿಕೆ ಬಗ್ಗೆ ಮಾಹಿತಿ, ಜೇನುಹುಳ ಹಾಗೂ ತುಪ್ಪದ ಬಗೆಯ ಬಗ್ಗೆ ಮಾಹಿತಿಯೂ ಇದೆ. ಜೇನುತುಪ್ಪದಿಂದ ಮಾಡಿರುವ ಜ್ಯಾಮ್‌ ಸೇರಿದಂತೆ ವಿವಿಧ ಬಗೆಯ ಜೇನುತುಪ್ಪ, ಅದರ ಉಪ ಉತ್ಪನ್ನಗಳ ಮಾರಾಟವೂ ಸಾಗಿದೆ.

ಮತ್ಸ್ಯ ದರ್ಶನ ; ನಾನಾ ಬಗೆಯ ಬಣ್ಣದ ಮೀನುಗಳ ಪ್ರದರ್ಶನವೂ ಇಲ್ಲಿದ್ದು, ನೋಡುಗರ ಕಣ್ಮನ ಸೆಳೆದಿದೆ. ಗೋಲ್ಡ್‌ ಮೀನು, ಸಿಮಿ ಹಾರ್ಡ್‌ ಪೈಲ್‌ ಮೀನು, ಟಿಮ್‌ ಪೈಲ್‌ ಮೀನು, ಬ್ಲೂಗೋರಾ ಮೀನು, ಎಲೋ, ಬ್ಲೂ, ಗ್ರೀನ್‌ ಪ್ಯಾರೆಟ್‌, ರೆಡ್‌ ಪ್ಯಾರೆಟ್‌ ಮೀನು, ಗ್ರೀನ್‌ ಟೆರರ್‌, ಟೈಗರ್‌ ಆಸ್ಕರ್‌ ರೆಡ್‌ ಪ್ಯಾಚ್‌, ಸಿಲ್ವರ್‌ ಶಾರ್ಕ್‌ ಮೀನು, ವಾಸ್ತು ಮೀನಾಗಿರುವ ಪ್ಲಾವರ್‌ ಹಾರ್ನ್, ಸಿಲ್ವರ್‌ ಅರೋನಾ ಮೀನು ಸೇರಿದಂತೆ ಇನ್ನಿತರ ಜಾತಿಯ ಬಣ್ಣ ಬಣ್ಣದ ಮೀನುಗಳು ಗಮನ ಸೆಳೆದಿವೆ.

ಪ್ಲಾಸ್ಟಿಕ್‌ ತಂದ ಫ‌ಜೀತಿ : ಹು-ಧಾ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಭೇಟಿ ನೀಡಿದ್ದ ವೇಳೆ ಆಯುಕ್ತರಿಗೆ ಹೂಗುತ್ಛ ನೀಡಲು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ| ರಾಮಚಂದ್ರ ಮಡಿವಾಳ ಮುಂದಾದರು. ಆದರೆ, ಹೂಗುತ್ಛದ ಮೇಲೆ ಇದ್ದ ಪ್ಲಾಸ್ಟಿಕ್‌ ಗಮನಿಸಿದ ಆಯುಕ್ತರು, ಸರಕಾರಿ ಅಧಿಕಾರಿಗಳಾಗಿ ನೀವೇ ಹೀಗೆ ಮಾಡಿದರೆ ಹೇಗೆ? ಪ್ಲಾಸ್ಟಿಕ್‌ ಹಾಳೆ ಹೊದಿಕೆಯ ಈ ಹೂಗುತ್ಛ ಪಡೆಯಲ್ಲ. ಈ ಹೊದಿಕೆ ತೆಗೆದು ಹಾಕಿ. ಸಂಜೆ ವೇಳೆ ಸಚಿವರು ಪ್ರದರ್ಶನಕ್ಕೆ ಭೇಟಿ ನೀಡುತ್ತಾರೆ. ಆವಾಗ ಈ ರೀತಿ ಮಾಡದಂತೆ ಹೇಳಿದ್ದು, ಅಲ್ಲದೇ ದಂಡ ಕೂಡ ಹಾಕುವುದಾಗಿ ಹೇಳಿ ಅಲ್ಲಿಂದ ತೆರಳಿದರು.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.