ಹೋಗಿ ಬರ್ತೆನ್ರಪ್ಪಾ..


Team Udayavani, Aug 19, 2017, 12:09 PM IST

hub6.jpg

ಧಾರವಾಡ: ಅವರು ರಂಗದಲ್ಲಿ ಅಂತರಂಗ ಕಂಡವರು. ಅಂತರಂಗದಲ್ಲಿ ರಂಗಭೂಮಿಯ ವೇದಿಕೆಯನ್ನು ಸದಾ ಜಾಗೃತಾವಸ್ಥೆಯಲ್ಲಿಯೇ ಇಟ್ಟವರು. ಆ ಮುಖ ನಿನ್ನೆಯವರೆಗೂ ಬಣ್ಣ ಹಚ್ಚಿಕೊಳ್ಳಲು ಹಾತೊರೆಯುತ್ತಲೇ ಇತ್ತು. ರಂಗದ ಮೇಲೆ ನಿಂತರೆ ಮೈಯಲ್ಲಿ ಸ್ಫೂರ್ತಿ, ಸ್ಥೈರ್ಯ ತುಂಬಿಕೊಳ್ಳುವ ವಾಮನ ದೇಹ. 

ಬ್ರಿಟಿಷರಿಗೆ ರಂಗದ ಮೇಲಿಂದಲೇ ಚಳ್ಳೆಹಣ್ಣು ತಿನ್ನಿಸಿದ ಅವರ ಚಾಕಚಕ್ಯತೆಗೆ ಸ್ವಾತಂತ್ರ ಚಳವಳಿಯ ಮುಂಚೂಣಿ ನಾಯಕರು ಸೆಲ್ಯೂಟ್‌ ಎಂದಿದ್ದರು. ಅವರು ಬೇರೆ ಯಾರೂ ಅಲ್ಲ. ಭರ್ತಿ 104 ವರ್ಷಗಳ  ಲ ಬದುಕಿ, 85 ವರ್ಷ ಕನ್ನಡ ರಂಗಭೂಮಿಯನ್ನು ಕಟ್ಟಿ ಬೆಳೆಸಿದ ಕಾಯಕ ಯೋಗಿ, ನಾಡೋಜ ನಟ ಸಾಮ್ರಾಟ ಏಣಗಿ ಬಾಳಪ್ಪನವರು. 

ಅವರದ್ದು ಕಾಯಕ ತತ್ವ, ದೇಹವೇ ದೇಗುಲ ತತ್ವ, ಎನಗಿಂತ ಕಿರಿಯರಿಲ್ಲ ತತ್ವ,  ಹೀಗಾಗಿಯೇ ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದಲ್ಲಿ ಅವರನ್ನು ಯಾರೂ ಹೆಸರಿನಿಂದ ಕರೆಯುತ್ತಿರಲಿಲ್ಲ. ಅವರಿಗಿದ್ದ ಹೆಸರು ಜಗಜ್ಯೋತಿ ಬಸವೇಶ್ವರ. ಅಭಿನವ ಬಸವಣ್ಣ ಎಂದೇ ಹೆಸರಾಗಿದ್ದ ಅವರು, ಬಸವಣ್ಣನ ಪಾತ್ರ ಮುಗಿಸಿ ನಾಟಕದ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಅವರ ಕಾಲಿಗೆ ಜನ ನಮಸ್ಕರಿಸುತ್ತಿದ್ದರು.

ಇದಕ್ಕೆ ವರನಟ ಡಾ|ರಾಜ್‌ಕುಮಾರ್‌ ಕೂಡ ಹೊರತಾಗಿಲ್ಲ.  ಬಾಳಪ್ಪನವರ ರಂಗಭೂಮಿ ಪರಿಕಲ್ಪನೆಯೇ ವಿಭಿನ್ನ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಾಟಕ ಮಾತ್ರ ಮಾಡುತ್ತಿದ್ದ ಅವರಿಗೆ 70-80ರ ದಶಕದ ಡಬಲ್‌ಮೀನಿಂಗ್‌ ನಾಟಕಗಳಿಂದ ತೀವ್ರ ಬೇಸರ ಬಂದು ಬಿಟ್ಟಿತು. ಹೀಗಾಗಿ ಬಾಳಪ್ಪನವರು ಕಂಪನಿಯನ್ನೇ ನಿಲ್ಲಿಸಿಬಿಟ್ಟರು. ಸತತ 85 ವರ್ಷಗಳ ಕಾಲ ರಂಗಭೂಮಿಯ ಸೇವೆ ಸಲ್ಲಿಸಿದ್ದ ಅವರು, ಸಿನೆಮಾ ಮತ್ತು ಟಿವಿ ಹಾವಳಿ ಎದ್ದಾಗ ಕೊಂಚ ಸ್ತಬ್ಧರಾಗಬೇಕಾಯಿತು. 

ರಂಗಕ್ಕೆ ಚಾಲನೆ: ನಾಡೋಜ ಬಾಳಪ್ಪ ಅವರು, ಬೇಸರ ಬಂದಾಗೆಲ್ಲಾ ಧಾರವಾಡದತ್ತ ಮುಖ ಮಾಡುತ್ತಿದ್ದರು. ಇಲ್ಲಿನ ರಂಗಭೂಮಿಯ ಮೂರು ತಲೆಮಾರಿನ ನಟರು, ನಿರ್ದೇಶಕರೊಂದಿಗೆ ಖುಷಿಯಾಗಿ ಕುಳಿತುಕೊಂಡು ತಮ್ಮ ಕಾಲದ ಘಟನೆಗಳನ್ನು ಮೆಲಕು ಹಾಕುತ್ತಿದ್ದರು. ಉಳವಿ ಬಸವೇಶ್ವರ ದೇವಸ್ಥಾನದ ಪೌಳಿಯಲ್ಲಿನ ಅವರ ಮೌನ ಭಂಗಿ, ಬಸಪ್ಪ ಖಾನಾವಳಿಯ ರೊಟ್ಟಿ, ಎಲ್‌ಇಎ ಕ್ಯಾಂಟೀನ್‌ ತುಪ್ಪದ ಅವಲಕ್ಕಿಯ ನಂಟು ಕೊನೆವರೆಗೂ ಇತ್ತು.

ಜಾತಿ, ಧರ್ಮದ ಸೊಂಕು ಅವರಿಗೆ ಸೋಕಿರಲೇ ಇಲ್ಲ. ಧಾರವಾಡದಲ್ಲಿ ಕರೆದವರ ಮನೆಗೆಲ್ಲ ಶರಣರಂತೆ ಹಣೆಗೆ ವಿಭೂತಿ ಹಚ್ಚಿಕೊಂಡು ಹೊರಟು ಬಿಡುತ್ತಿದ್ದರು. ಆಧುನಿಕ ರಂಗಭೂಮಿಯ ಸಾಧ್ಯತೆಗಳ ಕುರಿತು ರಂಗಕರ್ಮಿಗಳಾದ ಡಾ|ಶಿವಾನಂದ ಶೆಟ್ಟರ್‌, ಡಾ| ಪ್ರಕಾಶ ಗರೂಡ, ಅರವಿಂದ ಕುಲಕರ್ಣಿ, ಡಾ| ಶಶಿಧರ್‌ ನರೇಂದ್ರ, ಕೆ.ಜಗುಚಂದ್ರ ಸೇರಿದಂತೆ ಅನೇಕರೊಂದಿಗೆ ಸದಾ ಚರ್ಚಿಸುತ್ತಿದ್ದರು.  

ವೃತ್ತಿ- ಹವ್ಯಾಸಿ ಒಂದೇ: ರಂಗ ಚಟುವಟಿಕೆಗಳಿಂದ ದಶಕದ ಕಾಲ ದೂರವಿದ್ದ ಅವರು, 1993ರಲ್ಲಿ ಧಾರವಾಡದಲ್ಲಿ ಮ್ಯಾಳ ಸಂಘದ ಮೂಲಕ ಮತ್ತೆ ರಂಗಭೂಮಿಯತ್ತ ಮುಖ ಮಾಡಿದರು. ವಿಶ್ವಚೇತನ ತಂಡಕಟ್ಟಿದರು, ಹೇಮರಡ್ಡಿ ಮಲ್ಲಮ್ಮ, ಸತ್ಯಹರಿಶ್ಚಂದ್ರದಂತಹ ನಾಟಕಗಳನ್ನು ಹೊಸ ತಲೆಮಾರಿಗೆ ಕಲಿಸಿಕೊಟ್ಟರು. ವೃತ್ತಿ ರಂಗಭೂಮಿಯ ಅತಿರೇಕಗಳು, ಹವ್ಯಾಸಿಗಳ ಕೊರತೆಗಳು ಎರಡೂ ಸರಿ ಹೋಗಬೇಕು ಎನ್ನುತ್ತಿದ್ದರು ಬಾಳಪ್ಪನವರು. 

ರಂಗಭೂಮಿಯನ್ನು ಪ್ರಯೋಗ ಶೀಲತೆಗೆ ಒಳಪಡಿಸುವ, ಚಲನಶೀಲವಾಗಿಟ್ಟುಕೊಳ್ಳುವ ಬಗ್ಗೆ ತಾಸುಗಟ್ಟಲೇ ಧಾರವಾಡದ ಬುದ್ಧಿಜೀವಿ ಗಳೊಂದಿಗೆ ಮಾತನಾಡುತ್ತಿದ್ದರು. ವೃತ್ತಿ ಮತ್ತು ಹವ್ಯಾಸಿ ಎಂಬ ಭೇದವಿಲ್ಲದೇ ಎರಡನ್ನೂ ಒಟ್ಟಾಗಿ ನೋಡುವ ಅವರ ಹೊಸ ಪರಿಕಲ್ಪನೆಯೇ ಅವರ ಚಲನಶೀಲತೆಗೆ ಸಾಕ್ಷಿಯಾಗಿತ್ತು. ಕವಿವಿ ಅವರಿಗೆ ಗೌರವ ಡಾಕ್ಟರೆಟ್‌ ಪದವಿ ನೀಡಿ ಗೌರವಿಸಿತು. 

* ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.