ಸಿನಿ ಮಹಲ್ನಲ್ಲಿ ಜಿಎಸ್ಟಿ.. ಉಳಿದೆಡೆಯೆಲ್ಲ ಬರೀ ಚೀಟಿ..!
Team Udayavani, Jul 5, 2017, 1:02 PM IST
ಧಾರವಾಡ: ಒಂದು ದೇಶ, ಒಂದೇ ತೆರಿಗೆ ಘೋಷ ವಾಕ್ಯದೊಂದಿಗೆ ನಾಲ್ಕು ದಿನಗಳ ಹಿಂದೆ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ವಿಧಿಸಿದ್ದು, ಜಿಲ್ಲೆಯಲ್ಲಿನ ವಾಣಿಜ್ಯ ಚಟುವಟಿಕೆಗಳಲ್ಲಿ ಇನ್ನೂ ಗೋಚರಿಸುತ್ತಿಲ್ಲ.
ಹೋಟೆಲ್ ತಿಂಡಿ, ಆಹಾರ ಪದಾರ್ಥಗಳು ಸೇರಿದಂತೆ ಕೆಲವು ವಸ್ತುಗಳ ಬೆಲೆಯಲ್ಲಿ ತಕ್ಕಮಟ್ಟಿನ ಏರಿಕೆಯಾಗುತ್ತದೆ ಎನ್ನುವ ಚರ್ಚೆಯ ಮಧ್ಯೆಯೇ ಜಿಎಸ್ಟಿ ಜಾರಿಯಾಗಿದ್ದು, ಸದ್ಯಕ್ಕಂತೂ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯ ವ್ಯಾಪ್ತಿಯಲ್ಲಿನ ಚಿತ್ರಮಂದಿರಗಳು, ಮಹಲ್ ಗಳನ್ನು ಹೊರತು ಪಡಿಸಿದರೆ ಇತರೆ ವಾಣಿಜ್ಯಚಟುವಟಿಕೆಗಳಲ್ಲಿ ಜಿಎಸ್ಟಿ ಜಾರಿಯ ತೀವ್ರ ಪರಿಣಾಮ ಎದ್ದು ಕಾಣುತ್ತಿಲ್ಲ.
ರಾಜ್ಯದಲ್ಲಿಯೇ ಎರಡನೇ ಅತೀ ದೊಡ್ಡ ಗರ ಹುಬ್ಬಳ್ಳಿ-ಧಾರವಾಡ ಅವಳಿನಗರ ಮುಂಬೈ ಮತ್ತು ಪುಣೆಯ ಪ್ರಭಾವ ಇರುವುದರಿಂದ ಇಲ್ಲಿನ ವಾಣಿಜ್ಯ ಚಟುವಟಿಕೆಗಳು ಚುರುಕಾಗಿಯೇ ನಡೆಯುತ್ತವೆ. ಆದರೆ ಸದ್ಯಕ್ಕಂತೂ ಜಿಎಸ್ಟಿ ಅಧಿಕೃತ ಜಾರಿಯ ಪರಿಣಾಮಗಳು ಮಧ್ಯಮ ಗಾತ್ರದ ಹೋಟೆಲ್ ಮತ್ತು ಲಾಡ್ಜ್ ಬಿಲ್ಗಳಲ್ಲಿಯಾಗಲಿ, ಇನ್ನಿತರ ವಸ್ತುಗಳ ಖರೀದಿಯಲ್ಲಿಯಾಗಲಿ ಗೋಚರಿಸುತ್ತಿಲ್ಲ.
ಡಬ್ಟಾ ಅಂಗಡಿ ಜೊತೆ ಸ್ಪರ್ಧೆ: ಅವಳಿ ನಗರದಲ್ಲಿನ ಹೋಟೆಲ್ಗಳು ಹೆಚ್ಚು ಕಡಿಮೆ ತಿಂಡಿ, ಊಟ ಮತ್ತು ಬಾರ್ ಜೊತೆಗಿನ ರೆಸ್ಟೋರೆಂಟ್ಗಳೇ ಇವೆ. ಇವುಗಳಲ್ಲಿ ಮಾತ್ರ ಇನ್ನು ದರಪಟ್ಟಿಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಯಾವ ತಿಂಡಿ-ಪಾನೀಯದ ಬೆಲೆಗಳಲ್ಲೂ ವ್ಯತ್ಯಾಸವಾಗಿಲ್ಲ ಮತ್ತು ಅಧಿಕೃತವಾಗಿ ಜಿಎಸ್ಟಿ ನಮೂದು ಕೂಡ ಗುತ್ತಿಲ್ಲ.
ಆದರೆ ಈ ಪೈಕಿ ಕೆಲವು ಸುವಿಹಾರಿ ಹೋಟೆಲ್ ಗಳಿದ್ದು, ಅಲ್ಲಿನ ಬಿಲ್ಲಿಂಗ್ ಯಂತ್ರಗಳಲ್ಲಿ ಜಿಎಸ್ಟಿ ತೆರಿಗೆ ನಮೂದಿಸುವ ತಂತ್ರ ಇನ್ನುಅಳವಡಿಕೆಯಾಗಬೇಕಿದೆ. ಜಿಎಸ್ಟಿ ಜಾರಿಗೂ ಮುಂಚೆ ಶೇ.4 ರಷ್ಟು ವ್ಯಾಟ್ ತೆರಿಗೆ ಇತ್ತು. ಇದೀಗ ಜಿಎಸ್ಟಿ ಹೋಟೆಲ್ಗಳ ಮೇಲೆ ಶೇ.12 ರಷ್ಟು ಕರಭಾರ ಹಾಕುತ್ತಿದ್ದು,
ಈ ಬಗ್ಗೆ ಇದ್ದಕ್ಕಿದ್ದಂತೆ ಬೆಲೆ ಹೆಚ್ಚಿಸಲು ಆಗುತ್ತಿಲ್ಲ. ಅಷ್ಟೇಯಲ್ಲ, ರಸ್ತೆ ಬದಿಯಲ್ಲಿರುವ ಡಬ್ಟಾ ಹೋಟೆಲ್ಗಳು ಮತ್ತು ಮೊಬೈಲ್ ಹೋಟೆಲ್ ಗಳ (ಮೋಟಾರ್ಗಳಲ್ಲಿ ಓಡಾಡಿಕೊಂಡಿರುವ) ಜೊತೆಗೆ ನಾವು ಇದೀಗ ಸ್ಪರ್ಧೆ ಮಾಡಬೇಕಿದೆ. ನಮಗೆ ತೆರಿಗೆ ಹೆಚ್ಚಳದಿಂದ ತಿಂಡಿ ಬೆಲೆ ಹೆಚ್ಚಾಗುತ್ತದೆ.
ಆದರೆ ಡಬ್ಟಾ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ತಿಂಡಿ ಸಿಕ್ಕರೆ ಅದು ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ. ಅದಲ್ಲದೇ ಈವರೆಗೂ ವಾರ್ಷಿಕ 20 ಲಕ್ಷ ರೂ. ವಹಿವಾಟು ನಡೆಸುವ ಹೋಟೆಲ್ಗಳಿಗೆ ತೆರಿಗೆ ಇತ್ತು. ಇದರ ಮಿತಿ ಹೆಚ್ಚಳವಾಗದೇ ಹೋದರೆ ಸಣ್ಣ ಹೋಟೆಲ್ಗಳಿಗೆ ಇದು ಕೊಂಚ ತೊಂದರೆಯಾಗುತ್ತದೆ ಎನ್ನುತ್ತಿದ್ದಾರೆ ಹೋಟೆಲ್ ಮಾಲೀಕರು.
ಕಿರಾಣಿ ಕನ್ಫ್ಯೂಷನ್: ಇನ್ನು ಜಿಎಸ್ಟಿ ಜಾರಿಯಿಂದ ದಿನಸಿ ಧಾನ್ಯಗಳ ಬೆಲೆಯಲ್ಲೂ ಕೊಂಚ ಏರಿಕೆ ಸುಳಿವು ಇದ್ದರೂ, ಪ್ಯಾಕೇಟ್ ಮಾಡಿ ಮಾರಾಟ ಮಾಡುವ ದೊಡ್ಡ ಮಹಲ್ಗಳು ಮತ್ತು ದೊಡ್ಡ ದಿನಸಿ ಅಂಗಡಿಗಳಲ್ಲಿ ಅದು ಕೂಡ ಇನ್ನೂ ಜಾರಿಯಾಗಿಲ್ಲ. ಜಿಲ್ಲೆಯಲ್ಲಿನ ಮೋರ್, ರಿಲಾಯನ್ಸ್ ಪ್ರೇಶ್ ಮತ್ತು ಸ್ಥಳೀಯ ಪ್ರಸಿದ್ಧಿ ಪಡೆದ ಕಿರಾಣಿ ಅಂಗಡಿಗಳಲ್ಲಿ ಇನ್ನೂ ದಿನಸಿ ಧಾನ್ಯಗಳ ಬೆಲೆಯಲ್ಲಿ ಜಿಎಸ್ಟಿ ಸದ್ದು ಮಾಡಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಜಿಎಸ್ಟಿ ಯಾವ ದವಸ-ಧಾನ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಅಳವಡಿಕೆಯಾಗಲಿದೆ ಎನ್ನುವ ಬಗ್ಗೆಯೇ ವ್ಯಾಪಾರಸ್ಥರಲ್ಲಿ ಗೊಂದಲವಿದೆ. ಅಷ್ಟೇಯಲ್ಲ, ಸಣ್ಣ ದಿನಸಿ ಅಂಗಡಿಗಳು, ಬಿಡಿ ದಿನಸಿ ವ್ಯಾಪಾರಿಗಳಂತೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಚಿನ್ನದ್ದು ಇಬ್ಭಾಗ ದರ: ಚಿನ್ನದ ಮೇಲೆ ಜಿಎಸ್ಟಿ ನೇರವಾಗಿ ಶೇ.3 ರಷ್ಟು ಅಳವಡಿಕೆಯಾಗಲಿದ್ದು, ಹಾಲ್ಮಾರ್ಕ್ ಚಿನ್ನಕ್ಕೆ ಮಾತ್ರ ಇದು ಅನ್ವಯವಾಗಲಿದೆ. ಅಂದರೆ ಬ್ರಾಂಡೆಡ್ ಮಳಿಗೆಗಳಲ್ಲಿನ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಈಗಾಗಲೇ ಜಿಎಸ್ಟಿ ಜಾರಿಯಾಗಿದೆ. ಆದರೆ ಗ್ರಾಮೀಣ ಪ್ರದೇಶದ ಚಿನ್ನ ಖರೀದಿದಾರರ ಹೆಚ್ಚು ಅಂಗಡಿಗಳಲ್ಲಿ ಜಿಎಸ್ಟಿ ಸದ್ದೇ ಇಲ್ಲ.
ಕಾರಣ ಇಲ್ಲಿ ಪ್ಯೂರಿಟಿ ವಿಚಾರ ಬಂದಾಗ ಹಾಲ್ಮಾರ್ಕ್ ಚಿನ್ನ ಶೇ.90ಕ್ಕಿಂತ ಹೆಚ್ಚು ಶುದ್ಧತೆ ಹೊಂದಿದ್ದನ್ನು ವರ್ತಕರೇ ಗ್ರಾಹಕರಿಗೆ ಹೇಳಿ ಜಿಎಸ್ಟಿ ಅನ್ವಯಗೊಳಿಸುತ್ತಾರೆ. ಆದರೆ ಹಳ್ಳಿಗರ ತೊಲೆ ಬಂಗಾರದ ಲೆಕ್ಕದಲ್ಲಿ ಶುದ್ಧತೆ ಶೇ.85ರಷ್ಟು ಮಾತ್ರ ಇದ್ದು ಇಲ್ಲಿ ಜಿಎಸ್ಟಿ ಅಳವಡಿಕೆ ಸದ್ಯಕ್ಕೆ ಆಗುತ್ತಿಲ್ಲ ಎನ್ನುತ್ತಾರೆ ಚಿನ್ನದ ವ್ಯಾಪಾರಿ ಆರ್.ಎನ್.ರಾಯಕರ್.
* ಬಸವರಾಜ್ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ